ಆಧ್ಯಾತ್ಮದ ಸ್ಪರ್ಷದಲ್ಲಿಅರಿವಿನ ಪರಿಮಳ ಹರಡುವ ಬಗೆ: ದತ್ತಿ ಕಾರ್ಯಕ್ರಮ

ಕಲಬುರಗಿ: ಮುಕ್ತಾಯಕ್ಕಗಳ ಗುರು ಸಮಾನವಾದಅಣ್ಣಅಜಗಣ್ಣಇಲ್ಲವಾದರೂ ಆಕೆಗೆ ಆತತತ್ತ್ವದರೂಪದಲ್ಲಿ ಬದುಕಿರುವುದು ವೇದ್ಯಸಂಗತಿ.ತಂಗಿ ಮುಕ್ತಾಯಕ್ಕಳನ್ನು ಅಜಗಣ್ಣ ಬೆಳೆಸಿದ ಪರಿ, ಅದು ಕೇವಲ ಒಬ್ಬಅಣ್ಣತಂಗಿಯನ್ನು ಬೆಳಸಿದ ರೀತಿ ಅಷ್ಟೇ ಅಲ್ಲ, ಒಬ್ಬಗುರುತನ್ನ ಶಿಷ್ಯನನ್ನು, ಒಬ್ಬಆಧ್ಯಾತ್ಮಜ್ಞಾನದಅನುಭಾವಿಯಾಗಿ ಹೇಗೆ ಬೆಳಸುತ್ತಾನೆ ಎಂಬುದರಕುರುಹಾಗಿದೆಎಂದು ಮೈಸೂರುಜೆ.ಎಸ್.ಎಸ್. ಮಹಾವಿದ್ಯಾಪೀಠದ ಪ್ರಕಟನಾ ವಿಭಾಗದ ನಿರ್ದೇಶಕರಾದ ಪ್ರೊ. ಮಲ್ಲಿಕಾರ್ಜುನ ಮೊರಬದ ಅವರು ಅಭಿಪ್ರಾಯ ಪಟ್ಟರು.

ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ನಡೆದ ಲಿಂ.ಡಾ. ಎಂ.ಎಸ್. ಲಠ್ಠೆ ಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮೊರಬದ ಮಲ್ಲಿಕಾರ್ಜುನಅವರು ಮಾತನಾಡುತ್ತಿದ್ದರು. ಡಾ. ಎಂ.ಎಸ್. ಲಠ್ಠೆ ಅವರುಜನಪದ ಸಾಹಿತ್ಯ ಮತ್ತು ವಚನಸಾಹಿತ್ಯಎರಡರಲ್ಲೂ ಕೃಷಿ ಮಾಡಿದವರು.ಅವರು ಈ ಭಾಗದಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಟಿಸಿದ್ದು ಒಂದು ಮಾದರಿ ಕೆಲಸ. ಅವರ ’ಜನಪದಕವಿಚರಿತೆ’ ಕನ್ನಡ ಸಾಹಿತ್ಯ ಸಂಸ್ಕೃತಿಯಇತಿಹಾಸದಲ್ಲಿಒಂದುಅದ್ಭುತವಾದ ಸಂಶೋಧನಕೃತಿಯಾಗಿದೆ.  ಈ ಕೃತಿ ಹೊರಬಂದನಂತರಕನ್ನಡ ಸಂಶೋಧನಕ್ಷೇತ್ರದಲ್ಲಿ ಮೊದಲಬಾರಿಗೆಜನಪದ ಕವಿಗಳನ್ನು ಗಮನಿಸಿ ಸಂಶೋಧನೆ ಪ್ರಾರಂಭವಾದಇತಿಯಾಸವನ್ನು ನಾವು ಮರೆಯುವಂತಿಲ್ಲಎಂದು ಪ್ರೊ.ಮೊರಬದಅವರುಅಭಿಪ್ರಾಯಪಟ್ಟರು.

ಶರಣೆ ಮುಕ್ತಾಯಕ್ಕಳನ್ನು ಕುರಿತು ಮಾತನಾಡುತ್ತ, ಅವಳ ಅಣ್ಣಅಜಗಣ್ಣನಜೊತೆಗೆ ಮುಕ್ತಾಯಕ್ಕಗಳ ಸಂಬಂಧ ಗುರು-ಶಿಷ್ಯರ ಸಂಬಂಧದಂತೆಕಾಣುತ್ತದೆ.ಅಣ್ಣಅಜಗಣ್ಣತನ್ನನ್ನುಯಾರೂಅರಿಯದಂತೆಒಬ್ಬಅರಿವಿನ ಬೊಂಬೆಯಂತೆ ಬೆಳೆಸಿದ ಎನ್ನುತ್ತಾಳೆ. ’ಉರಿಯ ನುಂಗಿದಕರ್ಪುರದಂತೆ’ ಎಂಬುದು ಸಾಮಾನ್ಯ ಮಾತು.ಆದರೆ ಮುಕ್ತಾಯಕ್ಕ  ’ಅಗ್ನಿಕರಗಿಕರ್ಪುರ ಉಳಿದುದಕ್ಕೆ ಬೆರಗಾದೆನಯ್ಯಾ’ ಎನ್ನುತ್ತಾಳೆ. ಅಂದರೆಕರ್ಪುರಅಗ್ನಿಯ ಸ್ಪರ್ಷದಲ್ಲಿತನ್ನ ಪರಿಮಳವನ್ನು ಬೀರುವಂತೆ,  ಆಧ್ಯಾತ್ಮದ  ಸಂಪರ್ಕದಲ್ಲಿಅರಿವುತನ್ನ ಪರಿಕಮಳವನ್ನು ಬೀರಿ ನಿಲ್ಲುತ್ತದೆ.    ಹಾಗೆಯೇಅಜಗಣ್ಣನೆಂಬ ಆಧ್ಯಾತ್ಮಿಯ  ಸಂಪರ್ಕದಲ್ಲಿತನ್ನಅರಿವುಅನುಭಾವವಾಗಿ ಅರಳಿ ನಿಂತ ಪರಿಯನ್ನು ಮುಕ್ತಾಯಕ್ಕ ವರ್ಣಿಸುತ್ತಾಳೆ.  ಇದು ನಿಜವಾದಆಧ್ಯಾತ್ಮದಅರಿವು, ಈ ಅರಿವು ಹರಡುವ ಸಗಂಧವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಮೊರಬದಅವರು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದಡಾ.ಜಯಶ್ರೀದಂಡೆಅವರು ಉಪಸ್ಥಿತರಿದ್ದರು. ದತ್ತಿ ದಾನಿಗಳಾದ ಪ್ರೊ. ರವೀಂದ್ರ ಲಠ್ಠೆ ಅವರು ಸ್ವಾಗತಕೋರಿದರು.  ಉದ್ದಂಡಯ್ಯಅವರುಕಾರ್ಯಕ್ರಮವನ್ನು ನಡೆಸಿಕೊಟ್ಟರು.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

52 mins ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

2 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

15 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

18 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

22 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420