ಕಲಬುರಗಿ: ದೀನ ದಲಿತರ ಮತ್ತು ಶೋಷಿತರ ಧ್ವನಿಯಾಗಿ ತ್ಯಾಗ ಬಲಿದಾನ ಮಾಡಿದ ಬಿ, ಶಾಮಸುಂದರ ಅವರ ತತ್ವಾದರ್ಶಗಳನ್ನು ಮುಂದಿನ ಪೀಳ್ಗೆಗೆ ಮುಟ್ಟಿಸುವ ಕೆಲಸವಾಗಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ದಯಾಘನ ಧಾರವಾಡಕರ ಇಂದಿಲ್ಲಿ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಕನಾಟಕ ಸಮತಾ ಸೈನಿಕ ದಳ ಏರ್ಪಡಿಸಿದ ಬಿ, ಶಾಮಸುಂದರ ಅವರ ೧೧೨ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಡೀ ಜೀವನದುದ್ದಕ್ಕೂ ಪ್ರಾಮಾಣಿಕ, ನಿಷ್ಠೆ ಹಾಗೂ ನಿಸ್ವಾರ್ಥ ಮೌಲ್ಯಗಳಿಂದ ಬದುಕಿದವರು. ದಕ್ಷಿಣ ಭಾರತದಲ್ಲಿ ಡಾ ಅಂಬೇಡ್ಕರವರ ವಿಚಾರಧಾರೆಗಳ ಮೇಲೆ ಹೋರಾಟ ಮಾಡಿದವರು. ಇಂಥ ಮಹಾ ಪುರುಷರ ಜೀವನ ಮತ್ತು ಸಂದೇಶಗಳ ಕುರಿತು ನಮ್ಮ ಯುವಕರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ನಗರದ ಜಿಡಿಎ ಬಡಾವಣೆಗೆ ಶಾಮಸುಂದರ ಹೆಸರಿಡಲು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಸಿಂಡಿಕೇಟ್ ಸದಸ್ಯ ಸುನೀಲ ಒಂಟಿ ಮಾತನಾಡಿ, ಪ್ರತಿ ಬಡಾವಣೆಯಲ್ಲಿ ಶಾಮಸುಂದರವರ ವಿಚಾರಗಳು ಪ್ರಚಾರ ಕೈಗೊಳ್ಳಬೇಕು. ಜೊತೆಗೆ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ನುಡಿದರು.
ಸಂಪಾದಕ ಶಿವರಾಯ ದೊಡ್ಡಮನಿ ಅವರು, ಬಗರ್ ಹುಕಂ ಸಾಗುವಳಿ ಮಾಡುವದಕ್ಕಾಗಿ ಈ ಭಾಗದಲ್ಲಿ ಹೋರಾಟ ಮಾಡಿ ಅನುಷ್ಠಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು. ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ ಅಧ್ಯಕ್ಷತೆ ವಹಿಸಿ, ರಾಜ್ಯದಲ್ಲಿ ಬಿ ಶಾಮಸುಂದರವರ ವಿಚಾರಗಳನ್ನು ಮನೆ ಮನಕ್ಕೂ ತಲುಪಿಸುವ ಕಾರ್ಯ ಮಾಡಲಾಗುವುದು. ಹಾಗೂ ಕಲಬುರಗಿ ನಗರದ ಬಡಾವಣೆಗೆ ಶಾಮಸುಂದರರ ಹೆಸರಿಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ನಿವೃತ್ತ ವೈದ್ಯ ಡಾ ದೇವಿಂದ್ರಪ್ಪ ಕಮಲಾಪೂರ, ಸೀಮಾ ಮೂಲಭಾರತಿ ಮಾತನಾಡಿದರು. ವಿಷುದ್ಧ ಬೋಧಿ ಬಂತೆ ಸಾನಿಧ್ಯ ವಹಿಸಿದರು. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪಿ ಮದನಕರ, ಪತ್ರಕರ್ತ ಧರ್ಮಣ್ಣ ಧನ್ನಿ, ನಂದಕುಮಾರ ತಳಕೇರಿ, ಶಿವಮೂರ್ತಿ ಬಳಿಚಕ್ರವರ್ತಿ, ರೇವಣಸಿದ್ದಪ್ಪ ಅಲಂಕಾರ, ಶರಣಬಸವ ಸುಗಂಧಿ, ಶ್ರೀಮಂತ ಕಟ್ಟಿ, ತುಕಾರಮ ವರ್ಮಾ, ಅಮರ ವಾಡೇಕರ, ಮತ್ತಿತರರಿದ್ದರು. ರೇಷ್ಮಾ ಠಿಳ್ಳೆ ಅವರು ಪ್ರಾರ್ಥನೆ ಗೀತೆ ಹಾಡಿದರು. ಕಲಾವಿದ ಎಂ ಎನ್ ಸುಗಂಧಿ ರಾಜಾಪೂರ ಸ್ವಾಗತಿಸಿ ನಿರೂಪಿಸಿದರು. ಅನೀಲ ದೇವರಮನಿ ವಂದಿಸಿದರು.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…