ತಾಯಿ ಸಾವಿತ್ರಿ

ಕ್ರಾಂತಿಯ ಜ್ಯೋತಿ
ಬೆಳಗಿದ ತಾಯಿ
ಸಾವಿತ್ರಮ್ಮಗೆ ಜಯಕಾರ..
ತಾಯಿ ಸಾವಿತ್ರಮ್ಮಗೆ ಜಯಕಾರ..

ಸಾತಾರಾ ಜಿಲ್ಲೆಯ
ನಾಯಗಾಂವ ಗ್ರಾಮದಲಿ
ಜನಸಿದ ಅಮ್ಮಾ
ಜ್ಯೋತಿಬಾ ಜೊತೆಯಲಿ
ಜ್ಯೋತಿಯ ಬೆಳೆಗಲು
ಬಂದಳು ಪುಣೆಯಲಿ ಅಮ್ಮಾ.

ಪತಿಯ ಕನಸು ನನ್ನ ಕನಸು
ಅಬಲೆಯು ಸಬಲೆ ಆಗಲೇಬೇಕು
ಜ್ಞಾನವು ಆಕೆಗೆ ಕೊಡಲೇಬೇಕು
ಎನುತಾ ಕಲಿತಳು ಅಕ್ಷರಮಾಲೆ
ಹೊರಟಳು ಜೊತೆಯಲಿ
ಕಲಿಸಲು ಶಾಲೆ.

ಉಡುಗು ಮುಸುರಿ
ಕೊಳೆಯ ಕೆಲಸ
ಪತಿಯ ಮಕ್ಕಳ ಸೇವೆಗಿಂತ
ಓದು ಬಹಳ ಮುಖ್ಯ
ಸ್ವಾಭಿಮಾನದ ಬದುಕಿಗಾಗಿ
ಓದು ಬಹಳ ಮುಖ್ಯ
ಎನ್ನುತಾ ಕರೆದಳು ಶಾಲೆಯಲಿ..
ನಡೆದಳು ತಾನು ಜೊತೆಯಲ್ಲಿ.

ತಾಯಿ ಮಾತು ಕೇಳುತಲಿ
ನಡೆದಳು ಹೆಣ್ಣು ಶಾಲೆಯಲಿ
ಕ್ರಾಂತಿಯ ಕಾರ್ಯ ನೋಡುತಲಿ
ನೀಚರು ಬಂದರು ದಾರಿಯಲಿ
ಒಗೆದರು ಸೆಗಣಿ, ಎಸೆದರೂ ರಾಡಿ
ಭಯವು ಇಲ್ಲ, ಕೋಪವು ಇಲ್ಲ
ಇಟ್ಟ ಹೆಜ್ಜೆ ಹಿಂದಿಡಲಿಲ್ಲ.

ಶಾಲೆಗೆ ಹೋಗದ ತಾಯಿ
ಶಾಲೆ ತೆರೆದಳು ಮಹಾತಾಯಿ
ದಮನಿತರಿಗೆ ಶೋಷಿತರಿಗೆ
ಕೊಟ್ಟಳು ವಿದ್ಯೆ ಸಾರಿ
ಜ್ಞಾನವೇ ಶ್ರೇಷ್ಠ ಸಂಪತ್ತು
ವಿದ್ಯೆ ಅದರ ಚಿಲಕತ್ತು
ನಡೆಯಿರಿ ತಮ್ಮಾ ಶಾಲೆಗೆ
ಕಲಿಯಿರಿ ತಮ್ಮಾ ಅಕ್ಷರಮಾಲೆ

ದೇಶದ ಮೊದಲು ಶಿಕ್ಷಕಿ
ಹೆಣ್ಣು ಮಕ್ಕಳ ರಕ್ಷಕಿ
ಸಂಕಟ ಕಾಲದ ಸೇವಕಿ
ಸೇವೆ ಮಾಡುತ ಪ್ರಾಣವ ಬಿಟ್ಟ
ಕ್ರಾಂತಿ ಜ್ಯೋತಿ ಸಾವಿತ್ರಿ

ತಾಯಿ ನಿನಗೆ ಜಯಕಾರ
ಜ್ಞಾನದ ಜ್ಯೋತಿ ಬೆಳಗಿದ
ತಾಯಿ ನಿನಗೆ ಜಯಕಾರ…

– ಮಲಿಕಜಾನ ಶೇಖ
ಸಂಖ, ಜತ್ತ- ಮಹಾರಾಷ್ಟ್ರಸಂಪರ್ಕ – 9423468808

 

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

7 hours ago