ಬಿಸಿ ಬಿಸಿ ಸುದ್ದಿ

ಕುಟುಂಬ ಸಂಬಂಧಗಳು ಜೋಡಿಸುವುದು ಹೇಗೆ ?

ಕುಟುಂಬ ಸ೦ಬ೦ಧ ಜೋಡಿಸಬೇಕೆಂದು ಅನೇಕ ಆಯತ್ಗಳ ಮೂಲಕ ಪ್ರವಾದಿ (ಸ)ರವರು ಸಹ ಆಜ್ಞಾನಿಸಿದ್ದಾರೆ. ಹಾಗಾದರೆ ಕುಟುಂಬ ಸಂಬಂಧ ಜೋಡಿಸುವುದು ಹೇಗೆ? ಕುಟುಂಬ ಸ೦ಬ೦ಧವನ್ನು ಜೋಡಿ- ಸುವುದು ಇಂತಿಂತಹ ಕಾರ್ಯಗಳ ಮೂಲಕವೇ ಆಗಿರ- ಬೇಕೆಂದು ಕುರ್ಆನಿನಲ್ಲೋ ಹದೀಸಿನಲ್ಲೋ ಹೇಳಿಲ್ಲ. ಸಾಮಾನ್ಯ ವಾಗಿ ಈ ಕೆಳಗಿನ ಕಾರ್ಯಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧ ಜೋಡಿಸಬಹುದು.

ನಿರಂತರವಾಗಿ ಸಂದರ್ಶಿಸುವುದು: ಕನಿಷ್ಠ ತಿ೦ಗಳಿಗೊಮ್ಮೆ ಎಹಾದರೂ ಎಲ್ಲಾ ಸಂಬಂಧಿಕರನ್ನು ಸ೦ದರ್ಶಿಸಲು ಪ್ರಯತ್ನಿ- ಸುವುದು. ಅದು ಸಾಧ್ಯವಾಗದಿದ್ದರೆ ಫೋನಿನ ಮೂಲಕ ಅವ- ರೊಂದಿಗೆ ಸಂಪರ್ಕದಲ್ಲಿರುವುದು. ಅವರ ಕ್ಷೇಮವನ್ನು ವಿಚಾರಿ- ಸುತ್ತಿರುವುದು.

ಕಾಳಜಿ ಹೊಂದುವುದು: ಸ೦ಬಂಧಿಕರಲ್ಲಿ ಯಾರಾದರೂ ಕಷ್ಟ ದಲ್ಲಿದ್ದರೆ ತಕ್ಷಣ ಅವರ ನೆರವಿಗೆ ಧಾವಿಸುವುದು. ಅವರಿಗೆ ಸಾ೦ತ್ಹನದ ಮಾತುಗಳನ್ನು ಹೇಳುವುದು. ಸಾಧ್ಯವಾದರೆ ಆ ಕಷ್ಟ ವನ್ನು ನಿವಾರಿಸುವುದು. ಸಾಧ್ಯವಾದಷ್ಟು ಸಹಾಯ ಮಾಡುವುದು. ತಿ, ಉಡುಗೊರೆಗಳನ್ನು ಕೊಡುವುದು: ಸ೦ಬಂಧಿಕರನ್ನು ಸ೦ದರ್ಶಿಸುವಾಗ ಅವರಿಗೆ ಉಡುಗೊರೆಗಳನ್ನು ಕೊಡುವುದು. ಅಥವಾ ಉಡುಗೊರೆಗಳನ್ನು ಕಳುಹಿಸುವುದು. ಹಿರಿಯ ಸ೦ಬ೦ಧಿಕರನ್ನು ಗೌರವಿಸುವುದು. ಅವರ ಆರೋಗ್ಯವನ್ನು ವಿಚಾರಿಸುವುದು. ಕಿರಿಯರನ್ನು ಪ್ರೀತಿಸುವುದು.

ದಾನ-ಧರ್ಮ ಮಾಡುವುದು: ಸಂಬಂಧಿಕರಲ್ಲಿ ಬಡವರಿದ್ದರೆ ಅವರಿಗೆ ದಾನಧರ್ಮ ಮಾಡುವುದು. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರೊಂದಿಗೆ ಬೆರೆಯುವುದು. ಅವರು ಮದುವೆ ಮುಂತಾದ ಔತಣಗಳಿಗೆ ಆಮಂತ್ರಿಸಿದರೆ ತಪ್ಪದೇ ಹಾಜರಾಗುವುದು.

ರೋಗಿಯಾದರೆ ಸ೦ದರ್ಶಿಸುವುದು: ಕುಟುಂಬ ಸಂಬ೦ಧಿ- ಕರು ರೋಗಿಯಾದರೆ ಅವರನ್ನು ಸ೦ದರ್ಶಿಸಲು ಮರೆಯ- ದಿರುವುದು. ಅವರ ರೋಗ ವಾಸಿಯಾಗಲು ಪ್ರಾರ್ಥಿಸುವುದು. ಇನ್ನು ಅವರು ನಿಧನರಾದರೆ ಅವರ ಅಂತ್ಯ ಕ್ರಿಯೆಯಲ್ಲಿ ಕೊನೆಯ ವರೆಗೂ ಪಾಲ್ಗೊಳ್ಳುವುದು. ಅವರ ಮನೆಯವರಿಗೆ ಸಾ೦ತ್ಮನ ಹೇಳುವುದು. ಅವರಿಗೇನಾದರೂ ಸಹಾಯ ಬೇಕಾ- ದರೆ ಮಾಡುವುದು.

ಆಮಂತ್ರಣವನ್ನು ಸ್ವೀಕರಿಸುವುದು: ಸ೦ಬ೦ಧಿಕರು ಮದುವೆ ಮುಂತಾದ ಶುಭ ಕಾರ್ಯಗಳಿಗೆ ಆಮಂತ್ರಿಸಿದರೆ. ಅವರ ಆಮಂತ್ರಣವನ್ನು ಸ್ವೀಕರಿಸುವುದು. ಅದರಲ್ಲಿ ಮುತುವರ್ಜಿಯಿಂದ ಪಾಲ್ಗೊಳ್ಳವುದು. ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ. ಮೊದಲೇ ತಿಳಿಸಿ ಕ್ಷಮೆ ಕೇಳುವುದು.

7… ಸಂತೋಷದಲ್ಲಿ ಭಾಗಿಯಾಗುವುದು: ಸಂಬಂಧಿಕರಲ್ಲಿ ಯಾರಿಗಾದರೂ ಮಗುವುಂಟಾದರೆ, ಉದ್ಯೋಗ ಸಿಕ್ಕಿದರೆ, ಪರೀಕ್ಷೆಯಲ್ಲಿ ಉತ್ತೀರ್ಣವಾದರೆ, ಲಾಭವು೦ಟಾದರೆ, ಅನುಗ್ರಹ ಲಭ್ಯವಾದರೆ ಅವರ ಸ೦ತೋಷದಲ್ಲಿ ಭಾಗಿಯಾಗುವುದು. ಶುದ್ಧ ಮನಸ್ಸಿನಿಂದ ಅವರಿಗೆ ಶುಭ ಹಾರೈಸುವುದು. ಅವರ ಅನುಗ್ರಹ ವನ್ನು ಕ೦ಡು ಅಸೂಯೆ ಪಡದಿರುವುದು.

ಮನೆಗೆ ಬಂದರೆ ಗೌರವಿಸುವುದು: ಸಂಬಂಧಿಕರಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವುದು. ಅವರಿಗೆ ತೃಪ್ತಿಯಾಗುವಂತೆ ಸತ್ಯರಿಸುವುದು. ಅವರ ಆಗಮನಕ್ಕೆ ಮಹತ್ವ ನೀಡುವುದು. ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುವುದು. ಅವರು ಹಲವಾರು ವರ್ಷಗಳ ನ೦ತರ ಬ೦ದ ಅತಿಥಿಯಾಗಿದ್ದರೆ ಅವರಿಗೆ ಇನ್ನೂ ಹೆಚ್ಚಿನ ಮಹತ್ವ ನೀಡುವುದು.

ಸಂಬಂಧದಲ್ಲಿ ಬಿರುಕುಂಟಾದರೆ ತಕ್ಷಣ ಸರಿಪಡಿಸುವುದು: ಸಂಬ೦ಧಿಕರಲ್ಲಿ ಯಾರೊಂದಿಗಾದರೂ ಮನಸ್ಥಾಪ ಉಂಟಾಗಿ ಅದು ವೈಮನಸ್ಯ ಅಥವಾ ದ್ವೇಷದ ಕಡೆಗೆ ಹೊರಳುವುದಾದರೆ ಮುಂದಾಗಿ ನಿ೦ತು ಅವರಲ್ಲಿ ಕ್ಷಮೆ ಬೇಡಿ ಸಂಬ೦ಧವನ್ನು ಸರಿಪಡಿಸುವುದು. ಮನಸ್ತಾಪ ದ್ವೇಷದ ಭಾವನೆ ಹೊಂದಿರುವ ಸ್ವಭಾವ ಹೊಂದಿರುವ ಸ್ಥಿತಿಯಲ್ಲಿ ಅಗತ್ಯವಿರುವ ಅವರ ಸಹಾಯ ಹಾಗೂ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪರಸ್ಪರ ತಪ್ಪುಗಳ ಸ್ವೀಕರಿಸುವ ಹಾಗೂ ಉಂಟಾಗಿರುವ ನೋವುಗೆ ಸಂತಾಪ ಸೂಚಿಸುವ ಮೂಲಕ ಸಂಬ೦ಧದಲ್ಲಿ ಬಿರುಕುಂಟಾಗದಂತೆ ಜಾಗರೂಕತೆ ಪಾಲಿಸುವುದು.

ಸದಾಚಾರವನ್ನು ಬೋಧಿಸುವುದು ಮತ್ತು ದುರಾಚಾರವನ್ನು ವಿರೋಧಿಸುವುದು: ಸ೦ಬಂಧಿಕರಿಗೆ ಒಳಿತನ್ನು ಬೋಧಿಸುವುದು ಅವರನ್ನು ಕೆಡುಕಿನಿ೦ದ ತಡೆಯುವುದು ಸಂಬಂಧ ಜೋಡಿ- ಸುವುದರ ಪ್ರಮುಖ ಭಾಗವಾಗಿದೆ. ಸಂಬಂಧಿಕರಿಗೆ ತೌಹೀದ್ ಬೋಧಿಸುವುದು, ಅವರನ್ನು ಶಿರ್ಕ್ನಿ೦ದ ಪಾರುಮಾಡುವುದು, ಅವರಲ್ಲಿ ಯಾರಾದರೂ ಕೆಟ್ಟ ಸ್ವಭಾವದವರಿದ್ದರೆ ಬುದ್ಧಿವಾದ ಹೇಳುವುದು, ಯಾರಾದರೂ ಇಸ್ಲಾಮಿನ ನಿಯಮಗಳಿಗೆ ವಿರುದ್ಧ ವಾಗಿ ಚಲಿಸುವವರಿದ್ದರೆ ಅದನ್ನು ವಿವರಿಸಿಕೊಡುವುದು ಇತ್ಯಾದಿ ಈ ವಿಧದಲ್ಲಿ ಒಳಪಡುತ್ತವೆ.

ಮಾಹಿತಿ ಕೃಪೆ: ಅನ್ನಾಸಿಹಾ ಸಂಸ್ಥೆ ಸುರತ್ಕಲ್
ಮೊ: 9731593091
emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

1 hour ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

1 hour ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

1 hour ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

2 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

5 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

8 hours ago