ಬಿಸಿ ಬಿಸಿ ಸುದ್ದಿ

ಡಾ. ಈಶ್ವರಯ್ಯ ಮಠ ಸಂಸ್ಮರಣ ಗ್ರಂಥ ‘ ನೆನಪೇ ನಂದಾದೀಪ’ ಕೃತಿ ಬಿಡುಗಡೆ

ಕಲಬುರಗಿ: ಎಲ್ಲ ಸಂಬಂಧಗಳಿಗಿಂತ ಸ್ನೇಹ ಸಂಬಂಧ ಅತ್ಯಂತ ಮಾನವೀಯ ಮೌಲ್ಯಗಳ ಅರ್ಥಪೂರ್ಣ, ಪವಿತ್ರ ಸಂಗಮ. ಈ ಮಾತಿಗೆ ಡಾ. ಈಶ್ವರಯ್ಯ ಮಠ ಉತ್ತಮ ಸಾಕ್ಷಿಯಾಗಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಈಶ್ವರಯ್ಯ ಮಠ ಅವರ 151ನೆಯ ದಿನದ ಪುಣ್ಯಸ್ಮರಣೆ ನೆನಪೇ ನಂದಾದೀಪ ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭ ಉದ್ಘಾಟಿಸಿ ಗ್ರಂಥ ಬಿಡುಗಡೆ ಮಾತನಾಡಿದರು.

ಡಾ. ಈಶ್ವರಯ್ಯ ಮಠ ಅವರು ಕನ್ನಡ ನಾಡು ಕಂಡ ಪ್ರತಿಭಾನ್ವಿತ ಸಾಹಿತಿ, ಬರಹಗಾರ. ಸಮಯಪ್ರಜ್ಞೆ ಕರ್ತವ್ಯನಿಷ್ಠೆ, ನಿರಂತರ ಅಧ್ಯಯನ, ಅಧ್ಯಾಪನಕ್ಕೆ ಹೆಸರುವಾಸಿಯಾಗಿದ್ದರು. ಕೇವಲ ನಾಲ್ಕು ತಿಂಗಳಲ್ಲಿ ಅವರ ಕುರಿತಾಗಿ ಸಂಸ್ಮರಣ ಗ್ರಂಥ ಹೊರ ತಂದಿರುವುದು ಬಹಳ ಸಂತಸದ ಮತ್ತು ಅದ್ಭುತ ಕೆಲಸ ಎಂದು ಅವರು ಹೇಳಿದರು.

ಕೃತಿ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ, ಅನೇಕ ವ್ಯಕ್ತಿಗಳ ಸಮ್ಮಿಲನವಾಗಿದೆ.ಡಾ. ಈಶ್ವರಯ್ಯ ಅವರು ವಚನ ಸಾಹಿತ್ಯದ ದಾರಿಯಲ್ಲಿ ಗಂಭೀರ ಪಯಣ ಬೆಳೆಸಿದವರು ಎಂಬುದು ಈ ಕೃತಿಯ ಮೂಲಕ ತಿಳಿದು ಬರುತ್ತದೆ. ಇಲ್ಲಿ ಅವರ , ಅವರ ಮಿತ್ರರರು ತಾವು ಕಂಡಂತೆ ಬರೆದಿದ್ದಾರೆ.

ಡಾ. ಈಶ್ವರಯ್ಯ ಅವರ ವ್ಯಕ್ತಿತ್ವ ಹೇಗೆ ರೂಪುಗೊಂಡಿತು ಎಂಬುದನ್ನು ಈ ಕೃತಿ ತಿಳಿಸಿಕೊಡುವುದಲ್ಲದೆ ಅವರ ಪ್ರತಿಭೆ, ಸಾಮಾಜಿಕ ಕಾಳಜಿ ಎಂಥದು ಎಂಬುದನ್ನು ತಿಳಿಸುತ್ತಾರೆ. ಮುಖ್ಯ ಅತಿಥಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಶ್ರಾಂತ ಜಿಲ್ಲಾ ಅಧಿಕಾರಿ ಮೌನೇಶ ಗೋನಾಲ ತಮ್ಮ ಮತ್ತು ಈಶ್ವರಯ್ಯ ನಡುವಿನ ಒಡನಾಟವನ್ನು ಮೆಲುಕು ಹಾಕಿದರು.  ಗುಲ್ಬರ್ಗ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ ಅಧ್ಯಕ್ಷತೆ ವಹಿಸಿದ್ದರು.

ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ಆರ್. ಗುರುಬಸಪ್ಪ,  ಗೌರವ ಅತಿಥಿಗಳಾಗಿದ್ದರು.  ಕರ್ನಾಟಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ. ಶಿವಾನಂದ ವಿರಕ್ತಮಠ, ಹೈದರಾಬಾದ್ ಉಸ್ಮಾನಿಯಾ ವಿವಿ ಪ್ರಾಧ್ಯಾಪಕ ಪ್ರೊ. ಲಿಂಗಣ್ಣ ಗೋನಾಲ, ಶರಣಯ್ಯ ಸ್ವಾಮಿ ಹಿರೇಮಠ ದೇವರಗೋನಾಲ  ಉಪಸ್ಥಿತರಿದ್ದರು.

ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಚೆನ್ನಾರಡ್ಡಿ ಪಾಟೀಲ ಸ್ವಾಗತಿಸಿದರು. ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಪ್ರೊ. ಶಾಂತಾ ಭೀಮಸೇನರಾವ, ಪವಿತ್ರಾದೇವಿ ಈ. ಹಿರೇಮಠ, ಅಕ್ಷರ, ವಿಕಾಸ, ಮಲ್ಲಿಕಾರ್ಜುನ ಹಿರೇಮಠ, ಮಹಿಪಾಲರೆಡ್ಡಿ ಮುನ್ನೂರ್, ಡಾ. ಶಿವರಂಜನ್ ಸತ್ಯಂಪೇಟೆ, ಡಾ.‌ಮಹೇಶ ಗಂವ್ಹಾರ, ಸಿ.ಎಸ್. ಮುಧೋಳ, ಡಾ. ಸೂರ್ಯಕಾಂತ ಪಾಟೀಲ, ಪ್ರೊ. ಎಲ್.ಬಿ. ಇಟ್ಟಿನ್, ಡಾ. ಬಸವ ಪಾಟೀಲ ಜಾವಳಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಾ. ಶಶಿಶೇಖರರೆಡ್ಡಿ ಸಾಕ್ಷ್ಯ ಚಿತ್ರ ಪ್ರದರ್ಶಿದರು. ಲಕ್ಷ್ಮಿಕಾಂತ ಪಾಂಚಾಳ ನಿರೂಪಿಸಿದರು.

emedialine

Recent Posts

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

2 hours ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

2 hours ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

4 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

4 hours ago

ಆದರ್ಶದ ಬದುಕಿಗೆ ಯಾವೊತ್ತೂ ಬೆಲೆ: ಮಹಾಂತ ಸ್ವಾಮೀಜಿ

ಕಲಬುರಗಿ: ಮನುಷ್ಯ ಆದರ್ಶದ ಬದುಕನ್ನು ಕಳೆದಾಗ ಬೆಲೆಯುಳ್ಳ ಬದುಕಾಗುತ್ತದೆ. ಆಗ ಆ ಬದುಕಿಗೆ ಮೌಲ್ಯ, ಅರ್ಥ ಬರುತ್ತದೆ ಎಂದು ಮುದಗಲ್-…

4 hours ago

ರೈತರ, ವಿದ್ಯಾರ್ಥಿಗಳ ಸಮಸ್ಯ ಪರಿಹಾರಕ್ಕೆ ಒತ್ತಾಯ: ಶರಣಬಸಪ್ಪ ದೊಡ್ಮನಿ

ಕಲಬುರಗಿ : ಬಡವರ ಪರವಾಗಿ ಹಾಗೂ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜಕಲ್ಯಾಣ…

18 hours ago