ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನಾದ್ಯಂತ ಇರುವ ವಿಕಲಚೇತನರಿಗೆ ಉದ್ಯೋಗ ತರಬೇತಿ ನೀಡಿ ನಂತರ ಎಲ್ಲರಿಗೂ ಉದ್ಯೋಗವನ್ನು ಕೂಡ ನೀಡುವ ಮೂಲಕ ವಿಕಲಚೇತನರ ಸಬಲೀಕರಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಎಸಿಡಿಪಿಒ ಮೀನಾಕ್ಷಿ ಪಾಟೀಲ್ ತಿಳಿಸಿದರು.
ನಗದರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಎಂಬ ಸಂಸ್ಥೆಯು ವಿಕಚೇತನರಿಗೆ ಉದ್ಯೋಗ ವದಗಿಸುವ ಮೂಲಕ ರಾಜ್ಯದಲ್ಲಿ ಕಳೆದ ೫ ದಶಕಗಳಿಂದ ಕೆಲಸ ಮಾಡುತ್ತಿದೆ. ಅದರಂತೆ ಈಗ ನಮ್ಮ ಸುರಪುರ ಹಾಗು ಹುಣಸಗಿ ತಾಲೂಕಿನ ಎಲ್ಲಾ ೪೨ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಕಲಚೇತನರಿಗೆ ಉದ್ಯೋಗ ನೀಡಲು ಎಪಿಡಿ ಸಂಸ್ಥೆ ಮುಂದೆ ಬಂದಿದ್ದು, ನಮ್ಮ ತಾಲೂಕಿನ ಎಲ್ಲಾ ವಿಕಲಚೇತನರು ಫೇಬ್ರವರಿ ೧೫ನೇ ತಾರೀಖು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯುವ ತರಬೇತಿ ಆಯ್ಕೆ ಸಭೆಗೆ ಹಾಜರಾಗಬೇಕು.
ಅಂದು ನಡೆಯುವ ತರಬೇತಿ ನೇಮಕಾತಿಯಲ್ಲಿ ಆಯ್ಕೆಯಾದವರ ಆಸಪ್ತಿ ಅನುಗುಣವಾಗಿ ತರಬೇತಿಯನ್ನು ನೀಡಿ ನಂತರ ಉದ್ಯೋಗವನ್ನು ನೀಡಲಾಗುವುದು ಆದ್ದರಿಂದ ಎಲ್ಲಾ ಆಸಕ್ತ ವಿಕಲಚೇತನರು ಫೆಬ್ರವರಿ ೧೫ರ ಆಯ್ಕೆ ಸಭೆಗೆ ಬರುವಂತೆ ಹಾಗು ಎಲ್ಲಾ ನಮ್ಮ ಗ್ರಾಮೀಣ ಹಾಗು ನಗರ ಪುನರ್ವಸತಿ ಕಾರ್ಯಕರ್ತರು ವಿಕಚೇತನರಿಗೆ ಮಾಹಿತಿ ನೀಡಿ ಕರೆದುಕೊಂಡು ಬರುವಂತೆ ತಿಳಿಸಿದರು.
ಸಭೆಯ ವೇದಿಕೆ ಮೇಲೆ ಎಪಿಡಿ ಸಂಸ್ಥೆಯ ನೇಮಕಾತಿ ಅಧಿಕಾರಿ ಶಿವಯೋಗೆಪ್ಪ ಹಾಗು ವಿವಿದುದ್ದೇಶ ಪುನರ್ವಸತಿ ಕಾರ್ಯಕರ್ತ ಮಾಳಪ್ಪ ಪೂಜಾರಿ ಹಾಗು ಎಲ್ಲಾ ೪೮ ಜನ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…