ಬಿಸಿ ಬಿಸಿ ಸುದ್ದಿ

ಪ್ರೊ. ಮಹೇಶ್ವರಯ್ಯ ಅವರಿಂದ ‘ಪಯಣ’ ಕೃತಿ ಬಿಡುಗಡೆ

ಕಲಬುರಗಿ: ಹಿರಿಯ ಪತ್ರಕರ್ತ ವಾದಿರಾಜ್ ವ್ಶಾಸಮುದ್ರ ಅವರು ರಚಿಸಿದ ಪಯಣ ಕೃತಿ ವೃತ್ತಿ ಸಾಹಿತ್ಶದ ಪುಸ್ತಕವಾಗಿದ್ದು ಪತ್ರಕರ್ತರಿಗೆ ಮಾರ್ಗದರ್ಶನವಾಗಲಿದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಶಾಲಯದ ಕುಲಪತಿ ಪ್ರೊ.ಹೆಚ್.ಎಂ. ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

ಹೆಚ್.ಕೆ.ಸಿ.ಸಿ.ಐ ಹಾಗೂ ಸಂಸ್ರ್ಕತಿ ಪ್ರಕಾಶನ ಸೇಡಂ ವತಿಯಿಂದ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಿರಿಯ ಪತ್ರಕರ್ತ ವಾದಿರಾಜ್ ವ್ಶಾಸಮುದ್ರ ಅವರ ‘ಪಯಣ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವ್ಶಾಸಮುದ್ರರವರ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ದಾಖಲಿಸಿದ್ದಾರೆ. ತಾವು ನೋವುಂಡ ಬಗ್ಗೆˌ ಕಲಿತ ಶಾಲೆˌ ಶಿಕ್ಷಕರು ಹಾಗೂ ಪತ್ರಿಕೊದ್ಶಮದ ಸುದೀರ್ಘ ಇತಿಹಾಸವನ್ನು ಈ ಪಯಣ ಪುಸ್ತಕ ಹೊಂದಿದೆ ಎಂದರು.

ಪಯಣ ಕೃತಿ ಆತ್ಮೀಯ ಬರಹವಾಗಿದ್ದುˌ ಚಿಕ್ಕದಾಗಿದ್ದರೂ ಹಲವು ವಿಶೇಷತೆ ಹೊಂದಿದೆ. ಅಲ್ಲದೆ ಬರವಣಿಗೆ ಪ್ರಾರಂಭ ಮಾಡಿರುವ ವಾದಿರಾಜ್ ರವರಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಮಹೇಶ್ವರಯ್ಯ ಆಶಿಸಿದರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಕೃತಿ ಪರಿಚಯಿಸಿದರು.

ಮುಖ್ಶ ಅತಿಥಿಗಳಾಗಿ ಪತ್ರಕರ್ತ ಹಾಗೂ ಲೇಖಕ ಶ್ರೀನಿವಾಸ ಶಿರನೂರಕರ್ˌ ವಿಧಾನಪರಿಷತ್ ಸದಸ್ಶ ಬಿ.ಜಿ ಪಾಟೀಲ್ˌ ಪತ್ರಕರ್ತ ಜಯತೀರ್ಥ ಪಾಟೀಲ್ˌ ಬಾಬುರಾವ್ ಯಡ್ರಾಮಿˌ ಕುಡಾ ಮಾಜಿ ಅಧ್ಶಕ್ಷ ಅಜಗರ್ ಚುಲಬುಲ್ˌ ಸಾಂಸ್ರ್ಕತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿˌ ಗಿರೀಶ್ ಕಡ್ಲೇವಾಡˌ ಡಾ.ಕೆ.ಎಂ. ಕುಮಾರಸ್ವಾಮಿˌ ಬಿ.ಹೆಚ್.ನಿರಗುಡಿˌ ಸುರೇಶ್ ಬಡಿಗೇರˌ ಸಿದ್ದಾರೂಢ ಬಿರಾದಾರˌ  ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಶಿಕಾಂತ ಪಾಟೀಲ್ ಸ್ವಾಗತಿಸಿದರು. ಪ್ರಭಾಕರ್ ಜೋಶಿ ಪ್ರಕಾಶನದ ಕುರಿತು ಮಾತನಾಡಿದರು. ಹೆಚ್.ಕೆ.ಸಿ.ಸಿ.ಐ ಅಧ್ಶಕ್ಷ ಅಮರನಾಥ ಪಾಟೀಲ್ ಅಧ್ಶಕ್ಷತೆ ವಹಿಸಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

12 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420