ಕಲಬುರಗಿ: ಭೃಹ್ಮ ದೇವನು ವಿಶ್ವ ಸೃಷ್ಠಿಸಿದ ದಿನವನ್ನು ಯುಗಾದಿಯೆಂದು ಆಚರಿಸುವರು ಎಂದು ಕರ್ನಾಟಕ ವಿಜಯ ಸೇನೆ ಜಿಲ್ಲಾ ಅಧ್ಯಕ್ಷರಾದ ಸಾಹಿತಿ ರಾಜು ಎಮ್ ಹಿರೇಮಠ ಅವರು ಹೇಳಿದರು ಅವರು ಕಲಬುರಗಿ ವಿಜಯನಗರ ಕಾಲೋನಿಯ ಮಾಹಾಲಕ್ಷ್ಮೀ ದೇವಸ್ಥಾನ ಭಕ್ತರು ಹಮ್ಮಿಕೊಂಡಿದ್ದ ಗುದ್ದಲಿ ಪೂಜೆ ನೆರವೆರಿಸಿ ಅವರು ಮಾತನಾಡುತ್ತಿದ್ದರು.
ಯುಗ ಯುಗಗಳು ಕಳೆದರು ಯುಗಾದಿ ಮರಳಿ ಬರುತ್ತಿದ್ದೇ, ಎಂಬ ಮಂತ್ರವನ್ನು ಮಾತ್ರ ಜನರ ಬಾಯಿಯಲ್ಲಿ ಜನಪದ ವಾಗಿ ಉಳಿದಿದೆ, ಆದರೆ ಮೂಲ ಇತಿಹಾಸವನ್ನು ಇಂದಿನ ಯುವ ಪೀಳಿಗೆಯವರು ಮರೆಯುತ್ತಿದ್ದಾರೆ ಆದರೆ ಇತಿಹಾಸವನ್ನು ನಾವು ನೋಡುವದಾದರೆ ಚೈತ್ರ ಪಾಂಡ್ಯದಂತು ಸೂರ್ಯೋದಯವಾಗುತ್ತಿರುವಾಗ ಪ್ರಕೃತಿಯ ಮೇಲೆ ಜೀವ ಸಂಕುಲಗಳು ಹುಟ್ಟಿದ ಸಂಕೇತವೇ ಈ ನಮ್ಮ ಯುಗಾದಿ ಹಬ್ಬವೇಂದ ತಿಳಿಸಿದ ಅವರು ಪ್ರತಿಯೊಬ್ಬ ಮನುಷ್ಯನಲ್ಲಿ ಕಷ್ಟ-ಸುಖಃ, ಸಿಹಿ-ಕಹಿ ಇದ್ದಂತೆ ಕಷ್ಟ ಬಂದಾಗ ಕುಗ್ಗದಿರು, ಸುಖಃ ಬಂದಾಗ ಹಿಗ್ಗದಿರು, ಕಷ್ಟ-ಸುಖಃವನ್ನು ಸಿಹಿ-ಕಹಿಯಂತೆ ಸ್ವೀಕರಿಸುವ ಮನೋಭಾವವನ್ನು ಆಧುನಿಕ ಯುವ ಪೀಳಿಗೆಯಲ್ಲಿ ಬರಬೇಕೆಂದು ತಿಳಿಸಿ ಅವರು ಮಾತನಾಡುತ್ತಿದ್ದರು.
ಕಲಿಯುಗದಲ್ಲಿ ಸದ್ಯ ಸಂಗಮ ಯುಗ ಯುಗಾದಿ ಎಂಬುವದು ಮೂಡನಂಭಿಕೆ ಎಂದವರಿಗೆಲ್ಲಾ ಯುಗಾದಿಯೂ ಹೊಸ ಚಿಗುರಿನ ಮೂಲಕ ಉತ್ತರಕೊಟ್ಟ ದಿನವೇ ಹಿಂದುಗಳ ಪವಿತ್ರವಾದ ಹಬ್ಬ ಯುಗಾದಿಯಾಗಿದ್ದು. ಇತಿಹಾಸ ಹೊತ್ತ ಶ್ರೇಷ್ಠವಾದ ಹಬ್ಬವಾದ ಯುಗಾದಿ ಹೊಸ ಕಾರ್ಯಕ್ಕೆ ಇದು ಶುಭ ಮಹೂರ್ತವಿದ್ದಂತೆ, ಶ್ರೀ ರಾಮ ಚಂದ್ರನಿಗೆ ಪಟ್ಟಾಭಿಷೇಕವನ್ನು ಕೂಡಾ ಇಂದಿನ ದಿನವೇ ಮಾಡಿದ್ದು, ಅದೇರೀತಿ ಚೀದಿ ರಾಜ್ಯದರಸನಿಗೆ ಇಂದ್ರ ವೈಜಯಂತಿ ಮಾಲೆಯನ್ನು ಕೊಟ್ಟ ದಿನವಿಂದು, ಸೂರ್ಯ ಚಂದ್ರರು ಪವಿತ್ರವಾಗಿರವರು ಈ ಸೃಷ್ಠಿಗೆ ಬೆಳಕನ್ನು ನೀಡುತ್ತಿದ್ದಾರೆಂದು ತಿಳಿಸಿ ಪವಿತ್ರವಾದ ಮನಸ್ಸಿನಿಂದ ಅವರು ನಮಸ್ಕರಿಸುವ ಆಚಾರ-ವಿಚಾರವನ್ನು ತಿಳಿಸುವಂತಹ ವೈಭವ ಯುಗಾದಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯರಾದ ಅಣ್ಣಪ್ಪ ಎಸ್ ಬಿ ಅಪಚಂದ ಅವರು ಮಾತನಾಡಿ ಮಾಹಾಲಕ್ಷ್ಮಿ ದೇವಸ್ಥಾನದ ಗುದ್ದಲಿ ಪೂಜೇ ಇಂದು ಯುಗಾದಿ ಅಂದೆ ನೆರೆವೇರಿಸುತ್ತಿರುವದು ಇದು ನಮ್ಮ ಪೂಣ್ಯ ಪ್ರತಿಯೊಬ್ಬರು ತನು ಮನ ಧನದಿಂದ ಮಾಹಾತಾಯಿ ಲಕ್ಷ್ಮಿ ದೇವಿ ಸ್ಮರಿಸಿ ಸ್ವಚ್ಚ ಮನಸ್ಸಿನಿಂದ ನಡೆದುಕೊಂಡರೆ ಬೇಡಿದ ವರ ಕೊಡುವ ಶಕ್ತಿ ಆ ಮಾಹಾತಾಯಿ ಲಕ್ಷ್ಮಿ ದೇವಿಗಿದೆ, ಎಂದು ಅವರು ತಿಳಿಸಿದರು.
ಕುಪೆಂದ್ರ ಮರಗುತ್ತಿ ಅವರು ಮಾತನಾಡಿ ತಾಯಿಯ ಗುದ್ದಲಿ ಪೂಜೆ ಇಂದು ಯುಗಾದಿಯಂದೆ ಹಮ್ಮಿಕೊಂಡಿರುವದು ಕಾಲನಿಯ ಜನರಲ್ಲಿ ಸಂತೋಷದ ಸಮಯವಾಗಿ ಉಳಿಯಲಿದೆ, ತಾಯಿಯ ಸೇವೆಗೆ ನಿಶ್ವಾರ್ಥ ಸೇವೆ ನಮ್ಮದು ಬಯಸಿ ಬಂದದ್ದು ಅಂಗಭೋಗ ಬಯಸದೆ ಬಂದದ್ದು ಲಿಂಗಭೋಗ, ಯುಗಾದಿ ಅಂದೆ ಗುದ್ದಲಿ ಪೂಜೆ ನಡೆಯುತ್ತಿರುವದು ಲಿಂಗಭೋಗವೇಂದು ಅವರು ಮಾತನಾಡಿದರು.
ಮೊದಲಿಗೆ ಮಾಹಾತಾಯಿ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಎಲ್ಲಾ ಭಕ್ತಾಧಿಗಳಿಗೂ ಸಿಹಿ ಪ್ರಸಾದ ವಿತರಿಸಿ ಗುದ್ದಲಿ ಪೂಜೆಗೆ ಚಾಲನೆ ನೀಡಲಾಗಿತ್ತು.
ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಶ್ರೀಪಥರಾವ ಬೆಳಮಗಿ ಸ್ವಾಗತಿಸಿದರು, ಅಣ್ಣಾರಾವ ಬಿ ಪಾಟೀಲ ಕುಮಸಿ, ಅಂಬಾರಾಯ ವಾಗ್ದರ್ಗಿ, ಕುಪೆಂದ್ರ ಮರಗುತ್ತಿ, ರಾಮದಾಸ ಕವಳೆ ಕಾಂತು ಡೋಲೆ ಬೆಳಮಗಿ, ನಾಗಪ್ಪಾ ಬೆಳಮಗಿ, ಉದಯ ದುತ್ತರಗಾಂವ, ಬಸವರಾಜ ಗಂಧಿಗುಡಿ, ವೀರುಪಾಕ್ಷಪ್ಪಾ ತಡಕಲ್ ಸಿದ್ದು ಮಡಕಿ, ವಿಜಯಕುಮಾರ ಮಡಕಿ, ಕಂಟೇಪ್ಪಾ ಬಿರಾದಾರ, ಶಿವರಾಜ, ಶ್ರೀನಿವಾಸ ಗುತ್ತೆದಾರ ಸುಭಾಸಚಂದ್ರ ಅಪಚಂದ ಇನ್ನಿತರರು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…