ಬಿಸಿ ಬಿಸಿ ಸುದ್ದಿ

ಮಾವಿನ ಸುರಕ್ಷಿತ ಕಟಾವು ಮತ್ತು ರಾಸಾಯನಿಕ ಮುಕ್ತ ಪಕ್ವತೆ ವಿಧಾನ

ಕಲಬುರಗಿ: ಮಾವು ಹಣ್ಣುಗಳ ರಾಜ ಎಂದೇ ಪ್ರಖ್ಯಾತವಾಗಿರುವ ಹಣ್ಣು. ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಬಳಕೆ ಮಾಡುವ ಹಣ್ಣು. ಇದರಲ್ಲಿ ವಿಟಾಮಿನ್ ಎ ಮತ್ತು ವಿಟಾಮಿನ್ ಸಿ ಹೆಚ್ಚಾಗಿದ್ದು ಇದನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಿ ಒಳ್ಳೆ ಆರೊಗ್ಯ ಕಾಪಾಡಿಕೊಳ್ಳು ಪ್ರಮುಖ ಕಾರಣವಾಗಿದೆ.

ಪ್ರತಿ ಗಿಡದಲ್ಲಿ ಉತ್ತಮ ಕಾಯಿಕಟ್ಟಿ ಹಣ್ಣಾದರು ಕೊಯ್ಲು ಹಂತದಲ್ಲಿ ಉತ್ತಮ ಕಟಾವು ಮಾಡುವ ಮತ್ತು ಪಕ್ವತೆಯ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳ ಇಳುವರಿ ಪಡೆಯಬಹುದು. ಆದ್ದರಿಂದ ಐ.ಐ.ಹೆಚ್.ಆರ್ ಬೆಂಗಳೂರು ಅಭಿವೃದ್ಧಿ ಪಡಿಸಿದ ಮ್ಯಾಂಗೋ ಹಾರ್ವೆಸ್ಟರ್ ಮತ್ತು ಮನೆಯಲ್ಲೇ ಸಾವಯವ ಪದ್ಧತಿಯಲ್ಲಿ ಹಣ್ಣುಗಳನ್ನು ಪಕ್ವತೆ ಮಾಡಬಹುದು. ಇದು ಮಾವು ಬೆಳೆಗಾರರಿಗೆ ವರದಾನವಾಗಿದೆ.

ಮ್ಯಾಂಗೋ ಹಾರ್ವೆಸ್ಟರ್ ಉಪಯೋಗಗಳು: ಗಾಳಿ, ಬಿಸಿಲು ಸನ್ನಿವೇಶದಲ್ಲೂ ಸುರಕ್ಷಿತವಾಗಿ ಕಟಾವು, ಕಡಿಮೆ ಕೌಶಲ್ಯದಿಂದ ಉತ್ತಮ ಕೆಲಸ, ಮಾವು ನೆಲಕ್ಕೆ ಬಿದ್ದು ಕೀಟ, ರೋಗ ಬಾರದಂತೆ ತಡೆ, ಹಣ್ಣಿನಲ್ಲಿರುವ ಪೋಷಕಾಂಶ ಸುರಕ್ಷಿತ,         ತೊಗಟೆಯ ಅಂಟು ದ್ರವ ಸ್ರಾವಿಸುವಿಕೆ ಕಡಿಮೆ, ಕೆಲಸಗಾರರು ಕಡಿಮೆ ಶಕ್ತಿ ಬಳಸದಿದ್ದರು, ಕೋಲ್ ಮೂಲಕ ಕಟಾವು ಸಾಧ್ಯ, ಸುರಕ್ಷಿತ ಪ್ಯಾಕಿಂಗ್ ಮತ್ತು ಸಾಗಾಟ ಅನುಕೂಲ.

ಹಣ್ಣು ಪಕ್ವತೆ ವಿಧಾನ: ಮಾವು ಕಟಾವಿನ ನಂತರ ರಸಾಯನಿಕ ಬಳಸದೇ ಮನೆಯಲ್ಲೇ ಹಣ್ಣನ್ನು ಮಾಗಿಸಿ ಮಾರಾಟ  ಮಾಡಬಹುದು. ಇದರಿಂದ ರಾಸಾಯನಿಕ ಮುಕ್ತ ಹಣ್ಣನ್ನು ತಿನ್ನಬಹುದಾಗಿದೆ. ನಿರ್ದಿಷ್ಟ ಅಳತೆಯ (೧.೨ mಣ x ೧.೨ mಣ x ೧.೨ mಣ) (೨m೨) ೩ ಅಡಿ (೩x೫) ಗಾತ್ರ ಪ್ಲಾಸ್ಟಿಕ್ ಬಳಸಿ ಚೌಕಾಕಾರ ಅಥವಾ ಆಯತಾಕಾರದಲ್ಲಿ ಬಾಕ್ಸ್ ರೀತಿ ಮಾಡಿ ಟ್ರೆಗಳಲ್ಲಿ ಹಣ್ಣುಗಳನ್ನು ಸುರಕ್ಷಿತವಾಗಿ ತುಂಬಿ ಗಾಳಿಯಾಡದಂತೆ ಬಿಗಿಯಾಗಿ ಕಟ್ಟುವುದು. ಕೇವಲ ೪ ದಿನಗಳಲ್ಲಿ ಹಣ್ಣು ಮಾಗಿ ತಿನ್ನಲು ಯೋಗ್ಯವಾಗಿರುತ್ತದೆ. ಮನೆಯಲ್ಲೇ ಹಣ್ಣುಗಳನ್ನು ಮಾಗಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು ಎಂದು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ತೋಟಗಾರಿಕೆ ವಿಜ್ಞಾನಿ ಡಾ. ವಾಸುದೇವ ನಾಯ್ಕ ತಿಳಿಸಿದ್ದಾರೆ.

emedialine

Recent Posts

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

3 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

3 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

6 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

6 hours ago

ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…

7 hours ago

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

11 hours ago