ಹನ್ನೆರಡನೆಯ ಶತಮಾನ ಕರ್ನಾಟಕದ ಪಾಲಿಗೊಂದು ನವ ಮನ್ವಂತರ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ-ಹೀಗೆ ನಾನಾ ಮುಖದ ಕ್ರಾಂತಿಯೊಂದರ ಆಸ್ಫೋಟವಾಯಿತು. ಈ ಕ್ರಾಂತಿಯ ನೇತಾರರಾಗಿ ನಿಂತವರು ಮಹಾನುಭಾವ ಬಸವಣ್ಣ.

ಮಾತು, ಗೀತ ಇತ್ಯಾದಿಗಳಿಗೆ ಬಹಳ ಮಹತ್ವ ಕೊಡದೆ, ಲಿಂಗ ಶ್ರದ್ಧೆಯೇ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡ ಬಸವಣ್ಣನವರ ವಚನಗಳಲ್ಲಿ ವಿಶ್ವದ ಬೆಳಕಿದೆ. ಆಥ್ಮ ಪರೀಕ್ಷೆಯ ಸರಣಿಯಲ್ಲಿ ಉತ್ತೀರ್ಣರಾದ ಬಸವಣ್ಣ, ಸಮಾಜವನ್ನು ಪರೀಕ್ಷಿಸಿ ಅದರ ರೋಗ ರುಜಿನಗಳನ್ನು ಮೂಲೋತ್ಪಾಟನೆ ಮಾಡುವ ದನ್ವಂತರಿಯಾಗಿ ದುಡಿದರು. ಅವರ ಸಾಧನೆ-ಸಿದ್ಧಿ ಸಂದೇಶಗಳು ಇಂದಿಗೂ ಅನನ್ಯ.

ಬಸವಾದಿ ಶರಣರ ವಚನಗಳು ಸಾಮಾನ್ಯವಲ್ಲ. ಆ ವಚನಗಳು ನಮಗೊಂದು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ. ಜೀವನದಲ್ಲಿ ಎಂತಹ ಸಮಸ್ಯೆಯೇ ಬರಲಿ ಅದನ್ನು ಹಿಮ್ಮೆಟ್ಟಿಸುವ ಛಲವನ್ನು ನಮಗೆ ಕಲಿಸಿಕೊಡುತ್ತದೆ. ವಚನಗಳು ವೀರನೊಬ್ಬ ರಣಾಂಗಣದಲ್ಲಿ ನಿಂತು ಅನುಸರಿಸಬೇಕಾದ ಸೂತ್ರಗಳನ್ನು ಹೇಳಿಕೊಡುತ್ತವೆ. ಬಸವಾದಿ ಶರಣರು ಧೀರೋದಾತ್ತರಾಗಿದ್ದರು.

ನಮ್ಮ ದೇಶದ ಪ್ರಾಚೀನ ಪರಂಪರೆಯ ಬಹಳಷ್ಟು ಮಂದಿ ಇಹದ ಬದುಕಿಗೆ ಬೆನ್ನು ತಿರುಗಿಸಿ ಪರದ ಬದುಕಿನ ಕಡೆಗೆ ಪಲಾಯನ ಮಾಡಿದವರು. ಆದರೆ ವಚನಕಾರರು ಹಾಗಲ್ಲ. ಜೀವನವನ್ನು ಮುಖಾಮುಖಿಯಾಗಿ ಸಂಪರ್ಕಿಸಿ ಅದನ್ನು ಸುಲಲಿತಗೊಳಿಸಿಕೊಂಡವರು. ಅವರಿಗೆ ಮರ್ತ್ಯವೆಂಬುದು ಮೃತ್ಯಲೋಕವಾಗದೆ ಕರ್ತಾರನ ಕಮ್ಮಟವಾಗಿತ್ತು. ಅವರಿಗೆ ಸ್ವರ್ಗಲೋಕ, ನರಕಲೋಕಗಳೆಂಬಿವು ಬೇರೆ ಬೇರೆ ಆಗಿರಲಿಲ್ಲ.

ಅಯ್ಯಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ ಎಂಬ ಸರಳ ತಿಳಿವಳಿಕೆ ಅವರದಾಗಿತ್ತು. ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಇದಕಾರಂಜುವರು? ಇದಕಾರಳುಕುವರು? ಎನ್ನುವುದು ಅವರ ಧೀಶಕ್ತಿಯಾಗಿತ್ತು. ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂಬತಹ ಅವರ ನೂರು ಸಾವಿರ ನುಡಿ ಮತ್ತುಗಳು ನಮ್ಮ ಬದುಕಿಗೆ ಬೆಳಕನ್ನು ನೀಡಬಲ್ಲವು.

ವಾರ ಏಳೆಂಬರು, ಕುಲ ಹದಿನೆಂಟೆಂಬರು
ಅದ ನಾವು ನಂಬೆವು.
ಹಗಲೊಂದು ವಾರ, ಇರುಳೊಂದು ವಾರ
ಭಕ್ತನೊಂದು ಕುಲ, ಭವಿಯೊಂದು ಕುಲ
ಇದ ನಾವು ಬಲ್ಲುದು ಕಾಣಾ
ಕೂಡಲ ಚನ್ನ ಸಂಗಮದೇವ!

ವಾರಗಳು ಏಳಾದರೇನು ಎಪ್ಪತ್ತಾದರೇನು? ಹಗಲಲ್ಲಿ ಬೆಳಕಿರುತ್ತದೆ. ಇರುಳಿನಲ್ಲಿ ಕತ್ತಲೆ ಇರುತ್ತದೆ. ಹೀಗಾಗಿ ವಾರಗಳಲ್ಲಿ ಕಂಡು ಬರುವ ವ್ಯತ್ಯಾಸಗಳು ಏಳು ಬಗೆಯಲ್ಲ. ಅವು ಎರಡು ಬಗೆ. ಒಂದು ಬಿಳಿ, ಇನ್ನೊಂದು ಕಪ್ಪು. ಅದರಂತೆ ಕುಲಗಳು ಹದಿನೆಂಟಾಗಿರಲಿ, ಹದಿನೆಂಟು ಸಾವಿರ ಲಕ್ಷವಾಗಿರಲಿ, ಮನುಷ್ಯ-ಮನುಷ್ಯರ ನಡುವಿನ ವತ್ಯಾಸ ಇರೋದು ಎರಡೇ ಬಗೆಯಲ್ಲಿ. ಒಬ್ಬ ಒಳ್ಳೆಯವ. ಸಮಾಜ ಶ್ರೇಯಕ ಅಂದರೆ ಭಕ್ತ ಎಂದರ್ಥ. ಇನ್ನೊಬ್ಬ ದುಷ್ಟ. ಸಮಾಜ ಘಾತುಕ ಅಂದರೆ ಭವಿ ಎಂದರ್ಥ. ಅವನು ಯಾವುದೇ ಧರ್ಮೀಯನಾದರೂ ಅದು ಮುಖ್ಯವಲ್ಲ.
ಪ್ರಜಾಪ್ರಭುತ್ವ ಎಂಬ ಕಲ್ಪನೆಯೇ ಜಗತ್ತಿನಲ್ಲಿ ಎಲ್ಲಿಯೂ ಇರದ ಸಂದರ್ಭದಲ್ಲಿ ಅನುಭವ ಮಂಟಪ ಎಂಬ ಪ್ರಜಾಸತ್ತಾತ್ಮಕ ಮಾದರಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಪ್ಲೆಟೋನ ಕೆಲ ಚಿಂತನೆ ಹಾಗೂ ಬುದ್ಧನ ಸಂಘ ಜೀವನ ಕ್ರಮದಲ್ಲಿ ಅನುಸಂಘಿಕವಾಗಿ ಮಾತ್ರ ಕಾಣಿಸಿಕೊಳ್ಳುವ ಪ್ರಜಾಪ್ರಭುತ್ವದ ಕಲ್ಪನೆ-ಹನ್ನರಡನೇ ಶತಮಾನದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ದಟ್ಟವಾಗಿಯೇ ಕೊರೈಸುತ್ತದೆ. ಕಾರ್ಯರೂಪಕ್ಕೆ ಬಂದಿದೆ.

ಆ ಅನುಭವ ಮಂಟಪದಲ್ಲಿ ಎಲ್ಲ ಪ್ರಾಂತ-ಪ್ರದೇಶಗಳಿಗೆ ಸೇರಿದ ಜನರೆಲ್ಲ ಒಟ್ಟಾಗಿ ಕುಳಿತು ಬದುಕಿನ ಮೂಲ ಸಂಗತಿಗಳನ್ನು ಚರ್ಚಿಸುತ್ತಿದ್ದರು ಎಂಬುದನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಸಾವಿರಾರು ವರ್ಷಗಳಿಂದ ಬಿಗಿದು ಕಟ್ಟಿದ ಬಂದಳಿಕೆಗಳಿಂದ ಇಡೀ ಭಾರತವನ್ನು ಬಿಡುಗಡೆ ಮಾಡುವವರಾಗಿ ಅವರು ಕಂಗೊಳಿಸುವರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಕಾಸಶೀಲ ಮತ್ತು ವಿಚಾರಶೀಲ ವ್ಯಕ್ತಿತ್ವದ ಘನತೆಯ ಕಿರೀಟಕ್ಕೆ ಸಿಕ್ಕಿಸಬೇಕಾದ ಇನ್ನೆರಡು ತುರಾಯಿಪ್ರಾಯವಾದ ಸಂಗತಿಗಳಿವೆ. ಅವು ಯಾವೆಂದರೆ ಒಂದು ಕಾಯಕ ಇನ್ನೊಂದು ದಾಸೋಹ. ಒಂದು ಉತ್ಪಾದನೆ. ಇನ್ನೊಂದು ವಿತರಣೆ. ಜಗತ್ತಿನ ಆಗು-ಹೋಗುಗಳಿಗೆ ಇವೆರಡೇ ಮುಖ್ಯ ವಾಹಕಗಳು.

ಈ ಲೋಕಕ್ಕೆ ಬಂದ ಪಶು-ಪಕ್ಷಿ, ಕ್ರಿಮಿ-ಕೀಟ, ಪತಂಗ-ಪ್ರಾಣಿ ಮುಂತಾದೆಲ್ಲವೂ ತಾನು ಕಣ್ಣು ಬಿಟ್ಟ ಮರುಗಳಿಗೆಯಲ್ಲೇ ಆಹಾರ ಹುಡುಕತೊಡಗುತ್ತದೆ. ಅದರ ಪ್ರಥಮ ಅಗತ್ಯವಾದ ಉಸಿರಾಟ ಅದು ಹೇಗೋ ತಾನೆ ಲಭ್ಯವಾಗಿ ಬಿಡುತ್ತದೆ. ಎರಡನೆ ಅಗತ್ಯವೆಂದರೆ ಅನ್ನ-ನೀರು. ಇದಕ್ಕಾಗಿಯೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಸಿದ್ಧಾಂತದ ಮೂಲಕ ಮನುಷ್ಯ ಬದುಕಿಗೆ ಹೊಸ ಕಾಯಕಲ್ಪ ನೀಡಿದರು.

ಇಡೀ ಮಾನವ ಕುಲಕ್ಕೆ ಸಮಾನತೆಯ ಪಾಠ ಹೇಳಿಕೊಟ್ಟ ಬಸವಾದಿ ಶರಣರ ಜೀವನ-ವಿಧಾನ ಇಂದಿಗೂ ಪ್ರಸ್ತುತ ಮತ್ತು ಪಥ್ಯ. ಇವೊತ್ತಿನ ನಮ್ಮ ಮಕ್ಕಳು ಅವುಗಳನ್ನು ಸುಮ್ಮನೆ ಕಂಠಸ್ಥ ಮಾಡಿದರೂ ಸಾಕು! ಅವು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ.

(ಕೃಪೆ: ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ಚಿಂತನ)

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420