ಶಹಾಪುರ: ಇಲಿಗೆ ಸಂಕಟ ಬೆಕ್ಕಿಗೆ ಚೆಲ್ಲಾಟ ಎನ್ನುವಂತೆ ಕೊರೊನಾ ಮಹಾಮಾರಿಯ ಅಟ್ಟಹಾಸವನ್ನು ತಡೆಯಲು ಸರಕಾರ ಲಾಕಡೌನ್ ಘೋಷಿಸಿದೆ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದು ತಮ್ಮ ತಮ್ಮ ಜೀವ ಉಳಿಸಿಕೊಳ್ಳಿರಿ ಎಂದು ಹೇಳಿದೆ. ಆದರೆ ವಿನಾಕರಣ ಒಂದು ಸಿತ್ತಾದರೂ ಊರನ್ನು ಊರನ್ನು ಸುತ್ತಿ ಬರೋಣ ಎಂಬುದು ಬಹುತೇಕ ನಾಗರಿಕರ ಕುತೂಹಲ.
ಜನ ಸಾಮಾನ್ಯರ ಆರೋಗ್ಯವನ್ನು ನೋಡಿಕೊಳ್ಳಲಿಕ್ಕಾಗಿಯೇ ನಗರ ಸಭೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹರ ಸಾಹಸ ಪಡುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಪಿ.ಐ. ಚೆನ್ನಯ್ಯ ಹಿರೇಮಠ ಜನರನ್ನು ಪರಿ ಪರಿಯಾಗಿ ವಿನಂತಿಸಿ ಮನೆಯಲ್ಲಿರಲು ಕೇಳಿಕೊಂಡಿದ್ದಾರೆ. ನಗರ ಪಾಲಿಕೆ ಕಮೀಶನರ್ ರಮೇಶ್ ಪಟ್ಟೇದಾರ ಅವರೂ ಸಹ ವಿನಂತಿಸಿದ್ದಾರೆ.
ಕೊರೊನಾ ವೈರಸ್ ಹಾವಳಿಯ ಈ ಸಂದರ್ಭದಲ್ಲಿ ನಾಗರಿಕರನ್ನು ಬೆಚ್ಚಗೆ ಮನೆಯಲ್ಲಿ ಇರಲು ಹೇಳಿ ನಗರದ ಬೀದಿ ಬೀದಿಗಳಲ್ಲಿ ಅವರು ಗಸ್ತು ತಿರುಗಾಡುತ್ತಿದ್ದಾರೆ. ನಾಗರಿಕರೇನೋ ಹಸಿವಾದಾಗ ಮನೆಯಲ್ಲಿ ಉಂಡು, ನೀರು ಕುಡಿಯುತ್ತೇವೆ. ಈ ಅಧಿಕಾರಿ ಸಿಬ್ಬಂದಿಗಳಿಗೆ ಇಂಥ ಭಾಗ್ಯ ಇಲ್ಲ. ನಗರದ ಅಂಗಡಿಗಳ ಮುಂಗಟ್ಟೆ ಇವರ ಡೈನಿಂಗ್ ಹಾಲ್. ಇಂಥ ದೃಶ್ಯಗಳನ್ನು ನೋಡಿಯಾದರೂ ಜನ ಮನೆಯಲ್ಲಿರುವುದು ಒಳಿತು.
ಕಲಬುರಗಿ. ಸಾಹಸ ಸಿಂಹ ಅಮೋಘ ಅಭಿನಯದ ಚಕ್ರವರ್ತಿ ಡಾಕ್ಟರ್ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ನಗರದ ಸುಕಿ ಮ್ಯೂಸಿಕಲ್ ಸ್ಟುಡಿಯೋದಲ್ಲಿ ಅವರ…
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…