ಶಹಾಬಾದ: ಮನುಷ್ಯ ೫೦ ವರ್ಷ ಬದಕುವುದು ದುಸ್ತರವಾದ ಕಾಲಘಟ್ಟದಲ್ಲಿ ೨೫ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದು ನೋಡಿದರೇ ಇದೇ ದೊಡ್ಡದಾದ ಸಾಧನೆ ಎಂಬುದು ನನ್ನ ಅನಿಸಿಕೆ ಎಂದು ಸಿದ್ಧರಾಮೇಶ್ವರ ಶಾಲೆಯ ಮುಖ್ಯಶಿಕ್ಷಕ ಶಿವಶರಣಪ್ಪ ಹೊನಗುಂಟಿಕರ್ ಹೇಳಿದರು.
ಅವರು ನಗರದ ಸಿದ್ರಾಮ ಉದಯಕರ್ ಹಾಗೂ ನಿರ್ಮಲಾ ಉದಯಕರ ದಂಪತಿಗಳ ೨೫ನೇ ಮದುವೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮನೆಯ ನಾಲ್ಕು ಜನರು ಕೂಡಿಕೊಂಡು ಆಚರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾದ ಪರಿಸ್ಥಿತಿಯಲ್ಲಿ ಸಂಬಂಧಗಳನ್ನೇ ಕಡಿದುಕೊಳ್ಳುತ್ತಿದ್ದೆವೆ. ಕೊರೊನಾದಿಂದ ಸಾವನಪ್ಪಿದ ಕುಟುಂಬದ ಸದಸ್ಯರಿಗೆ ಮುಟ್ಟಲಾರದ ಪ್ರಸಂಗ ಹಾಗೂ ಮುಖ ನೋಡಲಾರದ ದಾರುಣ ಸ್ಥಿತಿ ಯನ್ನು ಕಂಡಿದ್ದೆವೆ. ಇಂತಹ ಸಂದರ್ಭದಲ್ಲಿ ಮದುವೆಯಾಗಿ ಸುಮಾರು ೨೫ ವರ್ಷಗಳ ಕಾಲ ಅನ್ಯೋನ್ಯತೆಯಿಂದ ಬದುಕು ನಿರ್ವಹಣೆ ಮಾಡಿದ್ದಾರೆ.ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಒಬ್ಬರಿಗೊಬ್ಬರೂ ತಾಳ್ಮೆಯಿಂದ ಅನುಸರಿಸಿಕೊಂಡು ಜೀವನ ನಡೆಸುತ್ತಿರುವುದೆ ದೊಡ್ಡ ಸಾಧನೆ ಎಂದು ನಾನು ನಂಬಿದ್ದೆನೆ.ಅಲ್ಲದೇ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಅಪ್ಪಿಕೊಂಡು ನಡೆಯುವ ಸಿದ್ರಾಮ ಉದಯಕರ ಅವರ ಜೀವನ ಸಂತೋಷವಾಗಿ ಸಾಗಲಿ ಎಂದು ಹಾರೈಸುತ್ತೆನೆ ಎಂದು ಹೇಳಿದರು.
ಅಂಬಿಕಾ ಹೊನಗುಂಟಿಕರ್,ಐಶ್ವರ್ಯ, ಅಶ್ವಿನ್ಕುಮಾರ ಇತರರು ಇದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…