ಬಡವರ ಕಷ್ಟಕ್ಕೆ ಮನ ಮಿಡಿಯುವ ಸಿಟಿಜೆನ್ ಕ್ಲಬ್ ತಂಡ

ಶಹಾಬಾದ: ದೇಶಾದ್ಯಂತ ಕೊರೋನಾ ಎರಡನೇ ಅಲೆ ಜನರನ್ನು ಕಂಗಾಲು ಮಾಡಿದ್ದು, ಕೊರೋನಾ ಸಂಕ?ದಿಂದ ಜನರು ಈಗ ನಲುಗಿ ಹೋಗಿದ್ದಾರೆ. ಒಂದು ಕಡೆ ಕೊರೋನಾ ಆತಂಕ ಮತ್ತೊಂದೆಡೆ ಕೈಯಲ್ಲಿ ಹಣವಿಲ್ಲದೇ ಸಂಕ? ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಗರದ ಸಿಟಿಜೆನ್ ಕ್ಲಬ್ ಅವರ ತಂಡವೊಂದು ಸದ್ದಿಲ್ಲದೇ ಬಡವರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ, ರೋಗಿಗಳ ಸಂಬಂಧಿಕರಿಗೆ ಊಟ, ಹಣ್ಣು -ಹಂಪಲು  ಹಾಗೂ ಕುಡಿಯುವ ನೀರಿನ ಬಾಟಲ್ ನೀಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.ಹೌದು. ನಗರದ ಸಿಟಿಜೆನ್ ಕ್ಲಬ್ ಅವರ ತಂಡ ಅವರು ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ನಗರದ ಗಣ್ಯರು ಮಾಡುವಂತ ಕೆಲಸವನ್ನು ತಮ್ಮ ಯುವಕರ ತಂಡವನ್ನು ರಚಿಸಿಕೊಂಡು ಈ ಕೆಲಸಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕಷ್ಟದಲ್ಲಿರುವವರ ಸಹಾಯಕ್ಕೆ ನೀಡುವ ಕೈಗಳು ಮುಂದೆ ಬರಲಿ: ನೀಲಕಂಠ ಪಾಟೀಲ

ಈಗಾಗಲೇ ಅವರು ಕೆಲವು ದಿನಗಳಿಂದ ನಿರ್ಗತಿಕರಿಗೆ, ಬಿಕ್ಷುಕರಿಗೆ ಹುಡಿಕಿಕೊಂಡು ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ದೇವಸ್ಥಾನಗಳಿಗೆ ಹೋಗಿ ಆಹಾರ ವಿತರಣೆ ಮಾಡುತ್ತಿದ್ದಾರೆ.ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಂಬೋ ಸಿಲಿಂಡರ್ ವಿತರಣೆ ಮಾಡಿದ್ದಾರೆ. ರೋಗಿಗಳಿಗೆ ಆಸ್ಪತ್ರೆಗೆ ತೆರಳುಲು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹಸಿದ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ದಿನಾಲೂ ಆಹಾರವನ್ನು ತಯ್ಯಾರಿಸಿ ತಂಡದ ಯುವಕರು ಪೊಟ್ಟಣಗಳನ್ನು ಕಟ್ಟಿ ಬಡವರೇ ಆಗಿರಲಿ ಅಥವಾ ನಗರದ ಸರಕಾರಿ ಸಿಬ್ಬಂದಿಗಳೇ ಆಗಲಿ ಹಸಿದವರ ಬಾಗಿಲಿಗೆ ಆಹಾರದ ಪೊಟ್ಟಣ, ಣೀರಿನ ಬಾಟಲ್ ಹಾಗೂ ಕಾಗದದ ತಟ್ಟೆಯನ್ನು ವಿತರಣೆ ಮಾಡುವ ಮೂಲಕ ಬಡವರ ಕಷ್ಟಕ್ಕೆ ಮನ ಮಿಡಿದಿದ್ದಾರೆ.

ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ನಗರದ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಸ್ಯಾನಿಟೈಜರ್ ಹಾಗೂ ಮಾಸ್ಕ್  ಒದಗಿಸಿದ್ದಾರೆ. ಅಲ್ಲದೇ ಲಾಕ್‌ಡೌನ್ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ನಾವು ಆಹಾರದ ಪೊಟ್ಟಣಗಳನ್ನು ವಿತರಿಸುತ್ತೆವೆ ಎಂದು ಮಹ್ಮದ್ ಅಜರ್ ಹೇಳುತ್ತಾರೆ. ಈ ಕಾರ್ಯಕ್ಕೆ ಸಹರಾ ಇಬ್ರಾಹಿಂ ಸೇಠ, ಯಾಸೀನ್ ಚಿಟ್,ಜಮೀರ್ ಬೇಗ, ಮಹ್ಮದ್ ಇಶಾಕ್,ನೀರಜ್ ಶರ್ಮಾ,ವಾಜೀದ್ ಪಟೇಲ್, ಕರಮಾನ್ ಅನ್ಸಾರಿ, ಉಸ್ಮಾನ್,ಮಹ್ಮದ್ ಇರ್ಫಾನ್ ಸೇರಿದಂತೆ ಅನೇಕರು ಕೈಜೋಡಿಸಿದ್ದಾರೆ.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

2 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

2 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

4 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

4 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

4 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420