ಕಲಬುರಗಿ: ಗದಗನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಾಹಿತ್ಯದ ವಿವಿದ ಪ್ರಕಾರಗಳಲ್ಲಿ ಕೊಡಮಾಡುವ ರಾಜ್ಯಮಟ್ಟದ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಒಟ್ಟು ಎಂಟು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀ ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಡಾ.ರಮೇಶ ಕತ್ತಿಯವರ ಕತ್ತಿಯ ಅಲಗು ಕೃತಿ ವಿಶೇಷ ಪ್ರಶಸ್ತಿ ಗಳಿಸಿದೆ. ಇದರ ಜೊತೆಗೆ ವರ್ಷದ ಶ್ರೇಷ್ಟ ಪುಸ್ತಕ ಪ್ರಶಸ್ತಿಗೆ ವಿದ್ಯಾಧರ ದೇಸಾಯಿಯ ಹಿಮ್ಮುಖ ಹರಿದ ನದಿ(ಕಥಾಸಂಕಲನ), ಸಿಂಧುಚಂದ್ರ ಹೆಗಡೆಯ ಸೂಜುಮೆಣಸು ಕೆಸುವಿನೆಲೆ(ಕವನಸಂಕಲನ), ಪತ್ರಕರ್ತ ಪ್ರಭುಲಿಂಗ ನೀಲೂರೆಯವರ ಸುಬೇದಾರ ರಾಮಜಿ ಸಕ್ಪಾಲ್(ಜೀವನ ಚರಿತ್ರೆ), ಆರ್ಜಿಪೈ ಮಂಜೈನ್ ಅವರ ಓದಿ ಇನ್ನೊಮ್ಮೆ ಓದಿ ಪ್ಲೀಸ್(ವ್ಯಕ್ತಿತ್ವವಿಕಸನ), ಸಾತುಗೌಡರ ಪುಟ್ಟಿ ಮತ್ತು ಕನ್ನಡಿ(ಮಕ್ಕಳ ಸಾಹಿತ್ಯ), ಸಿದ್ದಲಿಂಗಯ್ಯ ಕುಲಕರ್ಣಿಯವರ ಷಟ್ಸ್ಥಲ್ ಚಕ್ರವರ್ತಿ ಚೆನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ(ಸಂಶೋಧನಾ ಕೃತಿ) ಹಾಗೂ ಭಾಗ್ಯವತಿ ಕೆಂಭಾವಿಯವರ ಒಲವಿನ ಮಧುಬಟ್ಟಲು(ಗಜಲ್ಗಳು) ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ.
ಸಪ್ಟೆಂಬರ್ ತಿಂಗಳಲ್ಲಿ ಗದಗನಲ್ಲಿ ನಡೆಯಲಿರುವ ಡಾ. ಪಂ.ಪುಟ್ಟರಾಜ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಾಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…
ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…
ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…
ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…