ಜೇವರ್ಗಿ: ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಅರಳಗುಂಡಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಮುಖಂಡ ಮಹೇಶ್ ಕುಮಾರ್ ರಾಠೊಡ್ ಆಗ್ರಹಿಸಿದ್ದಾರೆ.
ಯೋಜನೆಯ ಅಡಿಯಲ್ಲಿ ಭಾರೀ ಅವ್ಯವಹಾರವಾಗಿದೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಲು ಸಂಪೂರ್ಣ ನಿಷ್ಕ್ರಿಯವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿಜವಾದ ಕಾರ್ಮಿಕರಿಗೆ ಕೆಲಸವನ್ನು ನೀಡದೆ ಮನೆಯಲ್ಲಿರುವ ಹಾಗೂ ವಲಸೆ ಹೋಗಿರುವ ಜನರ ಹೆಸರಿನಲ್ಲಿ ಬ್ಯಾಂಕಿನ ಖಾತೆಗಳಲ್ಲಿ ಕೂಲಿಯ ಹಣ ಜನ್ಮ ಮಾಡುತ್ತಿದ್ದು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಕೆಲಸ ನೀಡುವಂತೆ ಕಾರ್ಮಿಕರು ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ .ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಿನಾಂಕ 5ರಂದು 11:00 ಗಂಟೆಗೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಭಾರತ ಕಮಿನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್ ರಾಠೊಡ್ ತಿಳಿಸಿದರು.
ಈ ಕುರಿತಂತೆ ಮಂಗಳವಾರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿ ಪತ್ರವನ್ನು ಸಲ್ಲಿಸುವಾಗ ಮಲ್ಲಿಕಾರ್ಜುನ ದೊಡ್ಡಮನಿ ಭೀಮರಾಯ ಮುದಬಸ್ಸಪ್ಪಗೋಳ, ರಾಮನಾಥ ಭಂಡಾರಿ,ಮಲ್ಲಣ್ಣಗೌಡ ಬಿರೇದಾರ, ಇತರರು ಇದ್ದರು.
ಸುರಪುರ: ನಗರದ ಬಸ್ ನಿಲ್ದಾಣದ ಬಳಿಯ ಶ್ರೀ ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಸಾಮೂಹಿಕ ಯಜ್ಞೋಪವಿತ ಧಾರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ…
ಸುರಪುರ: ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯವಾದುದು,ಆ ಮೋಕ್ಷವನ್ನು ಕಾಣಬೇಕಾದರೆ ಸಂಸ್ಕಾರಯುಕ್ತ ಆಚರಣೆಗಳು ಹಾಗೂ ಧರ್ಮ ಮತ್ತು…
ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸವiಕಾಲಿನ ಶರಣರಲ್ಲಿ ನುಲಿಯ ಚಂದಯ್ಯನವರು ಕಾಯಕ ಜೀವಿ ಶರಣರಾಗಿದ್ದರು ಎಂದು ತಹಸಿಲ್ದಾರ್ ಕೆ.ವಿಜಯಕುಮಾರ…
ಪ್ರಾಸಿಕ್ಯೂಷನ್ ವಿರುದ್ಧ ಕಲಬುರಗಿಯಲ್ಲಿ ಭುಗ್ಗಿಲ್ಲೆದ ಆಕ್ರೋಶ ಕಾಂಗ್ರೆಸ್ ಶಾಸರಕ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಕಲಬುರಗಿ: ರಾಜ್ಯಪಾಲರ ಥಾವರ್ ಚಂದ್…
ಕಲಬುರಗಿ: ಓಂ ನಗರ ಬಡಾವಣೆ ಅಂಚಿನಲ್ಲಿರುವ ಪದ್ಮಸಾಲಿ ಸಮಾಜದ ದೇವಸ್ಥಾನದ ಆವರಣದಲ್ಲಿ ನೇಕಾರರ ನೂಲು ಹುಣ್ಣಿಮೆ ನಿಮಿತ್ತ ರಕ್ಷಾ ಬಂಧನ…
ಕಲಬುರಗಿ: ವೈದ್ಯರ ಮಾರ್ಗದರ್ಶನದಲ್ಲಿ ದೈಹಿಕ ಮತ್ತು ಮಾನಸ್ಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸಕಾರಾತ್ಮಕ ಧೋರಣೆಯಿಂದ ವಾಸ್ತವಿಕ ಪ್ರಜ್ಞೆ ಹೆಚ್ಚಿಸಿಕೊಂಡು ನೆಮ್ಮದಿಯ ಮನಸ್ಸಿನಿಂದ…