ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡದ ಸರಕಾರಕ್ಕೆ ಧಿಕ್ಕಾರ: ಚಂದಪ್ಪ ಯಾದವ್

ಸುರಪುರ: ರಾಜ್ಯದಲ್ಲಿಯೆ ಅತೀ ಹಿಂದುಳಿದ ಜನಾಂಗದೊಳಗೆ ಒಂದಾಗಿರುವ ನಮ್ಮ ಗೊಲ್ಲ ಯಾದವ್ ಸಮುದಾಯದ ಏಕೈಕ ಶಾಸಕಿಯಾದ ಹಿರಿಯೂರು ಕ್ಷೇತ್ರದ ಕೆ.ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿರುವ ಸರಕಾರಕ್ಕೆ ನಮ್ಮ ಧಿಕ್ಕಾರವಿದೆ ಎಂದು ಗೊಲ್ಲ ಯಾದವ ಸಮುದಾಯದ ಮುಖಂಡ ಚಂದಪ್ಪ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ಸಮುದಾಯದ ಜನರು ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದೆ.ಇಂದಿಗುಕೂಡ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ.ಇಂತಹ ಸಮುದಾವು ರಾಜ್ಯದಲ್ಲಿ ಸುಮಾರು ೪೦ ಲಕ್ಷ ಜನಸಂಖ್ಯೆಯನ್ನು ಹೊಂದಿದೆ.ಇಂತಹ ಸಮುದಾಯದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸರವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯವೆಸಗಲಾಗಿದೆ.ಇದರಿಂದ ನಮ್ಮ ಸಮುದಾಯದ ಅಭಿವೃಧ್ಧಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.ಆದ್ದರಿಂದ ಕೂಡಲೇ ಆದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಇನ್ನುಳಿದ ಖಾತೆಗಳಲ್ಲಿ ಒಂದನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.

ಗೊಲ್ಲ ಯಾದವ ಸಂಘದ ತಾಲೂಕು ಅಧ್ಯಕ್ಷ ರಮೇಶ ಯಾದವ್ ಮಾತನಾಡಿ,ಬೊಮ್ಮಾಯಿಯವರ ಸರಕಾರ ನಮ್ಮ ಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡಬಾರದು.ಕೂಡಲೇ ಪೂರ್ಣಿಮಾ ಶ್ರೀನಿವಾಸರವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಇಡೀ ಸಮುದಾಯ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಯಾದವ್,ನಾಗರಾಜ ಯಾದವ್,ನಿಂಗಪ್ಪ ಮಾಲಗತ್ತಿ,ಶಾಂತಪ್ಪ ಯಾದವ್,ಮಾಳಪ್ಪ ಯಾದವ್,ನಿಂಗಪ್ಪ ದೊಡ್ಮನಿ,ಈಶ್ವರ ಬೈರಿಮಡ್ಡಿ,ವೆಂಕಟೇಶ ಜಲೂಡಿ,ಆನಂದ ಪ್ಯಾಟಿ,ಮೆಲಗಿರಿ ಯಾದವ್,ಅಮ್ಮಣ್ಣ ಗೆಜ್ಜೇರಿ,ವಿರೇಶ ಯಾದವ್,ಬಸವರಾಜ ಡೊಳ್ಳೆ,ಲಕ್ಷ್ಮಣ ಯಾದವ್,ಮಲ್ಲೇಶಿ ಕಟಿಗಲ್,ಕೃಷ್ಣಾ ಚಿಕ್ಕನಳ್ಳಿ,ಸುರೇಶ ಅಮ್ಮಾಪುರ,ಹಣಮೇಶ ಅಮ್ಮಾಪುರ,ಭೀಮಣ್ಣ ಬೈರಿಮಡ್ಡಿ,ವೆಂಕಣ್ಣ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಲಬುರಗಿ ಪಾಲಿಕೆ ಉಪ ಆಯುಕ್ತರನ್ನು ಅಮಾನತುಗೊಳಿಸಲು ಶಾಸಕ ಬಿ.ಆರ್. ಪಾಟೀಲ ಆಗ್ರಹ

ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…

3 mins ago

ಅ.6 ರಂದು ಡಾ. ಲಕ್ಷ್ಮಣ ದಸ್ತಿಯವರಿಂದ 371 J ಕಲಂ ಸೌಲತ್ತುಗಳ ಬಗ್ಗೆ ವಿಶೇಷ ಉಪನ್ಯಾಸ

ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…

16 mins ago

ಜಾತಿ, ಧರ್ಮ, ಭಾಷೆ, ಎಲ್ಲವನ್ನು ಮೀರಿನಿಂತ ಭಕ್ತಿಯ ದೇವರ ಉಪಾಸನೆಯೇ ಭಜನೆ

ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ…

20 mins ago

ಪೌರಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ಮಹಾನಗರ ಪಾಲಿಕೆ ಆಯುಕ್ತರು ಭೇಟಿ

ಕಲಬುರಗಿ: ಖಾಯಂ ಉದ್ಯೋಗ ಮತ್ತು ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು ಧರಣಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ…

23 mins ago

‘ಮೊಬೈಲ್ ಡೆಂಟಲ್ ಫೋಟೋಗ್ರಾಫಿ’ ಕಾರ್ಯಾಗಾರಕ್ಕೆ ನಮೋಶಿ ಚಾಲನೆ

ಕಲಬುರಗಿ: ನಗರದ ಎಚ್‍ಕೆಇ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಬಿಟಿಜಿಎಚ್ ಅಡಿಟೋರಿಯಮ್ ಸಭಾಂಗಣದಲ್ಲಿ ಎಚ್.ಕೆ.ಇ. ದಂತಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ 'ಮೊಬೈಲ್ ಡೆಂಟಲ್…

27 mins ago

ಪಾಲಿಕೆ ಪೌರಕಾರ್ಮಿಕರ ಪ್ರತಿಭಟನೆಗೆ ಕೃಷ್ಣಾ ರೆಡ್ಡಿ ಬೆಂಬಲ

ಕಲಬುರಗಿ: ಖಾಯಂ ಉದ್ಯೋಗ ಮತ್ತು ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು ಧರಣಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ…

30 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420