ಜೇವರ್ಗಿ: ಜನರನ್ನು ಜನಪ್ರತಿನಿಧಿಗಳು ಗುಲಾಮರಂತೆ ಕಾಣುತ್ತಿದ್ದಾರೆ. ಈ ನಾಡಿನಲ್ಲಿ ಬದುಕುತ್ತಿರುವ ರೈತರಿಗೆ ಸರಕಾರಗಳು ಉತ್ತಮವಾದ ನೀತಿಗಳನ್ನು ರೂಪಿಸುತ್ತಿಲ್ಲ. ರೈತರ ಹೆಸರಿನಲ್ಲಿ ಕಾನೂನುಗಳನ್ನು ರೂಪಿಸಿ ಮೋಸ ಮಾಡುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಸರಕಾರ ಕೆಲಸ ಮಾಡುತ್ತಿದೆ.
ಖಾಸಗಿ ಕಂಪನಿಗಳ ದಲ್ಲಾಳಿಗಳಂತೆ ಸರ್ಕಾರಗಳು ವರ್ತನೆ ಮಾಡುತ್ತವೆ. ಭಾರತ್ ಕಮುನಿಷ್ಠ ಪಕ್ಷ (ಸಿಪಿಐ) ಅಖಿಲ ಭಾರತ ಕಿಸಾನ್ ಸಭಾ (ಎ.ಅಯ್.ಕೆ.ಎಸ್.) ಜಂಟಿಯಾಗಿ ಯಡ್ರಾಮಿ ತಾಲೂಕು ಮಟ್ಟದ ಜಾಥಾ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಅರಳಗುಂಡಗಿ ಹೋಬಳಿಯ ವ್ಯಾಪ್ತಿಯಲ್ಲಿನ 15 ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ 15 ರಂದು ತಾಲೂಕು ಕೇಂದ್ರವಾದ ಯಡ್ರಾಮಿಯಲ್ಲಿ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ.
ಯಡ್ರಾಮಿ ತಾಲೂಕಿನ ಅದರಲ್ಲೂ ಅರಳಗುಂಡಗಿ ಮುರ್ಗನೂರ್, ತೆಲಗಬಾಳ, ಹಾಲ ಘತ್ತರಗಿ ,ಕೋಣಸಿರಿಸಗೆ, ಕುಕುನೂರು ಅಕಂಡಹಳ್ಳಿ, ಶಕಪುರ ,ಮಾನಶಿವನಗಿ, ಕಡಕೋಳ ,ಯತ್ನಾಳ ಹಂಚಿನಾಳ, ಗ್ರಾಮದ ನಾಗರಿಕರು ರೈತರು ಕಾರ್ಮಿಕರು ಮುಖಂಡರು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದೆ.
ಹಕ್ಕೊತ್ತಾಯ ಜಾಥಾದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ. ಕಿಸಾನ್ ಸಭಾದ ಜಿಲ್ಲಾ ಮುಖಂಡರಾದ ಮೌಲಾ ಮುಲ್ಲಾ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ, ಹಾಗೂ ಮಹೇಶ್ ಕುಮಾರ್ ರಾಠೊಡ್ ಸೇರಿದಂತೆ, ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ, ಯಡ್ರಾಮಿ ತಾಲ್ಲೂಕು ಪಕ್ಷದ ಕಾರ್ಯದರ್ಶಿ ಭೀಮರಾಯ ಮುದಬಸ್ಸಪ್ಪ ಗೋಳ. ಹಾಗೂ ಅರಳಗುಂಡಿಗೆಯ ಶಂಕ್ರಪ್ಪ ಆನೂರ್, ಸುಭಾಷ್ ದೊತಪ್ಪಗೋಳ, ಸಾಹೇಬಗೌಡ ಮುರುಡಿ, ಮುರ್ಗನೂರ್ ಗ್ರಾಮದ ಸಿದ್ದಣ್ಣ ಹೊಸಮನಿ, ಭೀಮರಾಯ ನೆಲೋಗಿ, ಹಂಚಿನಾಳ ಗ್ರಾಮದ ರೈತ ಮುಖಂಡರಾದ, ಗೋಪಾಲ ಅಂಚಿನಾಳ್, ಮಲ್ಲಿಕಾರ್ಜುನ್ ಹಾಗೂ ಕೋನ ಸಿರಸಗಿಯ, ಭಗವಂತರಾಯ ಬಿರಾದಾರ್, ಬಸವರಾಜ ಕೆರೂರ್, ರಾಮನಾಥ್ ಬಂಡಾರಿ, ರಮೇಶ್ ಜಾಧವ್, ಸುನಿಲ್ ಕಾಂಬ್ಳೆ ಇತರ ಮುಖಂಡರು ಜಾಥಾದಲ್ಲಿ ಭಾಗವಹಿಸಿದ್ದರು.
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…