ಕಲಬುರಗಿ: ಕರ್ನಾಟಕ ಸ್ಟ್ಯಾಂಪು ಶುಲ್ಕಗಳ (ಡ್ಯೂಟಿ) ತಿದ್ದುಪಡಿ ವಿಧೇಯಕದಲ್ಲಿ ನಮೂದಾಗಿರುವಂತೆ ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಪ್ ಡ್ಯೂಟಿಯನ್ನು ಅಪಾರ್ಟ್ಮೆಂಟ್ಗಳ ಮೊದಲ ನೋಂದಣಿಗೆ ಮಾತ್ರ ಎಂದು ಸೀಮಿತಗೊಳಿಸದೆ ಇದನ್ನು ಅಪಾರ್ಟ್ವೆïಂ, ತರಹೇವಾರಿ ಅಳತೆಯ ನಿವೇಶನಗಳ ಎಲ್ಲಾ ಹಂತದ ಮಾರಾಟಗಳಲ್ಲಿ ಅನ್ವಯಿಸಿದಲ್ಲಿ ರಾಜ್ಯಾದ್ಯಂತ ಇರುವ ಬಡವರು, ಮದ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಸರಕಾರವನ್ನು ಆಗ್ರಹಿಸಿ ಗಮನ ಸೆಳೆದಿದ್ದಾರೆ.
ವಿದಾನ ಸಭೆಯಲ್ಲಿ ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ವಿಧೇಯಕದ ಮಹತ್ವದ ಅಂಶಗಳನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಿದಾಗ ಮಾತನಾಡಿರುವ ಡಾ. ಅಜಯ್ ಸಿಂಗ್ ಸ್ಟ್ಯಾಂಪ್ ಡ್ಯೂಟಿ ವಿಧೇಯಕ ನಾವು ಸ್ವಾಗತಿಸುತ್ತೇವೆ. ಆದರೆ ಇಲ್ಲಿರುವ ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಟಪ್ ಡ್ಯೂಟಿ ಅಪಾರ್ಟಮೆಂಟ್ಗಳ ಮೊದಲ ಮಾರಾಟಕ್ಕಷ್ಟೇ ಸೀಮಿತಗೊಳಿಸದೆ ಅಪಾರ್ಟ್ಮೆಂಟ್ಗಳೂ ಸೇರಿದಂತೆ ವಿವಿಧ ಅಳತೆಯ ನಿವೇಶನಗಳಿಗೂ ಎಲ್ಲಾ ಹಂತದ ಮಾರಾಟದಲ್ಲಿಯೂ ಅನ್ವಯಿಸಬೇಕು. ಅಂದಾಗ ಹೆಚ್ಚಿನ ಜನತೆಗೆ ಇದರಿಂದ ಅನುಕೂಲವಾಗುತ್ತದೆ. ಬರೀ ಅಪಾರ್ಟ್ಮೆಂಟ್ ಗೆ ಮಾತ್ರ ಈ ವಿಚಾರ ಅನ್ವಯವಾದಲ್ಲಿ ಅದು ಬೆಂಗಳೂರಿನ ರಿಯಲ್ ಈಸ್ಟೇಟ್ ಡೇವಲಪರ್ಗಳಿಗೆ ಮಾತ್ರ ಅನುಕೂಲವಾಗಲಿದೆ, ರಾಜ್ಯದಲ್ಲಿನ ಗ್ರಾಮಾಂತರ ಭಾಗದಲ್ಲಿರುವ ಜನತೆಗೆ ಇದರಿಂದ ನಯಾಪೈಸೆ ಲಾಭವಾಗದು ಎಂದು ಕಂದಾಯ ಸಚಿವರು ಹಾಗೂ ಸಭಾಧ್ಯಕ್ಷರ ಗಮನ ಸೆಳೆದರು.
ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಪ್ ಡ್ಯೂಟಿಯ ತಿದ್ದುಪಡಿ ಕೇವಲ ಮೊದಲ ಹಂತದ ಮಾರಾಟಕ್ಕೆ, ಅದೂ ಅಪಾರ್ಟ್ಮೆಂಟ್ಗೆ ಮಾತ್ರ ಸೀಮಿತ ಮಾಡದೆ ಎಲ್ಲಾ ಹಂತದ ಮಾರಾಟಗಳಿಗೆ ಹಾಗೂ ನಿವೇಶನಗಳಿಗೂ ಇದು ಅನ್ವಯಿಸಿದರೆ ಹೆಚ್ಚಿನ ಜನತೆಗೆ ಲಾಭವಾಗುತ್ತದೆ, ಇದರಿಂದ ರಿಯಲ್ ಈಸ್ಟೆಟ್ ಅಭಿವೃದ್ಧಿ ಹೊಂದಲಿದೆ, ಬಡವರಿಗೆ ಈ ತಿದ್ದುಪಡಿ ಲಾಭ ತಲುಪತ್ತದೆ.
ಬಡವರು, ಮಧ್ಯಮ ವರ್ಗದವರು ಒಂದು ನಿವೇಶನ, ಅಪಾರ್ಟ್ಮೆಂಟ್ ಖರೀದಿಸಿರುತ್ತಾರೆ, ನಂತರ ಅದನ್ನು ಮಕ್ಕಳ ಮುವೆ, ಶಿಕ್ಷಣ ಇತರೆ ಸಂದಭರ್Àದಲ್ಲಿ ಮಾರಲು ಮುಂದಾಗುತ್ತಾರೆ. ಅವರ ಕಷ್ಟ ಕಾಲದಲ್ಲಿ ಇಂತಹ ಆಸ್ತಿ ಮಾರಾಟಕ್ಕೆ ಮುಂದಾದಾಗ ಅವರ 2 ನೇ, 3 ನೇ ಮಾರಾಟಗಳಿಗೂ ಸದರಿ ತಿದ್ದುಪಡಿಯಾಗುತ್ತಿರುವ ಸ್ಟಾಂಪ್ ಡ್ಯೂಟಿ ನಿಯಮ ಅನ್ವಯವಾದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಡಾ. ಅಜಯ್ ಸಿಂಗ್ ವಿಷಯ ಮಂಡಿಸಿದರು.
ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಮಾತಿಗ ಸ್ಪಂದಿಸಿದ ಕಂದಾಯ ಸಚಿವ ಅಶೋಕ ಮೊದಲ ಹಂತದ ಮಾರಾಟಕ್ಕೆ ಸದರಿ ತಿದ್ದುಪಡಿ ಅನ್ವಯವಾಗಲಿದೆ, ಹಾಗಂತ ಇತರರಿಗೆ ಇದರಿಂದ ತೊಂದರೆಯಾಗದು ಎಂದು ಸಮಜಾಯಿಷಿ ನೀಡಿದರೆ, ಸದನದಲ್ಲಿ ಇದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಯವರೂ ಮಾತನಾಡುತ್ತ ರಿಯಲ್ ಈಸ್ಟೇಟ್ ಹಸಿರು ಚಿಗುರಲಿ ಎಂಬ ಉz್ದÉೀಶದಿಂದ ಈ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆಂದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…