ಕೆಂಭಾವಿ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ ಪುರಸ್ಕೃತ ನಬಿರಸೂಲ್ ನದಾಫ ಮತ್ತು ಯಂಗ್ ಅಚಿವರ್ಸ್ ಅವಾರ್ಡ್ ಪ್ರಶಸ್ತಿ ಪುರಸ್ಕೃತ ಸೋಪಿಸಾಬ ಡಿ ಸುರಪುರ ಇವರಿಗೆ ಕರ್ನಾಟಕ ಪಿಂಜಾರ ನದಾಫ ಹಿತರಕ್ಷಣಾ ಸಮಿತಿ ವತಿಯಿಂದ ಕೆಂಭಾವಿ ಪಟ್ಟಣದದಲ್ಲಿ ಸನ್ಮಾಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಿಂಜಾರ ನದಾಫ ಹಿತರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷ ಬಾವಾಸಾಬ ನದಾಫ ಪರಸನಹಳ್ಳಿ ಮಾತನಾಡಿ ಪಿಂಜಾರ್ ನದಾಫ್ ಸಮುದಾಯದವರ ಸಾಧನೆ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ ಸಮಾಜದದಲ್ಲಿ ಇನ್ನೂ ಪ್ರತಿಭೆಗಳು ಇದ್ದು ಅವರನ್ನು ಗುರ್ತಿಸುವ ಕಾರ್ಯ ನಿರಂತರ ನೆಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಪ್ರಶಸ್ತಿ ಪುರಸ್ಕೃತ ಸೋಪಿಸಾಬ ಡಿ ಸುರಪುರ ಮಾತನಾಡಿ ನನ್ನ ಈ ಪ್ರಶಸ್ತಿಗೆ ನನ್ನ ಸಮಾಜ ಬಂದುಗಳು, ಸ್ನೇಹಿತ ಬಳಗದವರೇ ಕಾರಣ ಎಂದರು. ಸನ್ಮಾನಿಸಿದ ನಮ್ಮ ಕರ್ನಾಟಕ ಪಿಂಜಾರ ನದಾಫ ಹಿತರಕ್ಷಣಾ ಸಮಿತಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ನನಗೆ ಸದಾಕಾಲ ನನ್ನ ಯಶಸ್ಸನ್ನು ಬಯಸುವ ಕರ್ನಾಟಕ ಪಿಂಜಾರ ಮಹಾಮಂಡಳದ ರಾಜ್ಯ ಅಧ್ಯಕ್ಷರು ಅಬ್ದುಲ್ ರಜಾಕ್ ಅವರಿಗೂ ಮತ್ತು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಜಿಲ್ಲಾ ಅಧ್ಯಕ್ಷರು ಅಹ್ಮದ್ ಪಠಾಣ್ ಸಾಹೇಬರಿಗೂ ಹಾಗೂ ರಾಜ್ಯದಲ್ಲಿ ಇರುವ ಎಲ್ಲ ಸಂಘಟನೆ ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಇನ್ನೊರ್ವ ಪ್ರಶಸ್ತಿ ಪುರಸ್ಕೃತ ನಬಿರಸೂಲ್ ನದಾಫ ಸನ್ಮಾನ ಸ್ವಿಕರಿಸಿ ಮಾತನಾಡಿ ಹಿತರಕ್ಷಣಾ ಸಮಿತಿಗೂ ಹಾಗೂ ಸಮಾಜದ ಮುಖಂಡರಿಗೂ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಿಂಜಾರ ನದಾಫ ಹಿತರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಹುಸೇನಸಾಬ್ ಗಾದಿ,ಅಬ್ದುಲ್ ಗನಿ ಸಂತಿ, ಮಹ್ಮದ್ ರಫೀಕ್ ಏವೂರು, ರಾಜೇಸಾಬ ಗೌಡಗೇರಾ, ರಸೂಲ್ ಯತ್ನಾಳ್, ಇಬ್ರಾಹಿಂ ಸಾಬ್ ಪರಸನಹಳ್ಳಿ, ಶರ್ಮುದೀನ ಪರಸನಹಳ್ಳಿ, ಇತರರು ಉಪಸ್ಥಿತರಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…