ಬಿಸಿ ಬಿಸಿ ಸುದ್ದಿ

ರಾಜ್ಯ ಮಟ್ಟದ ಈಜು ಸ್ಪರ್ಧಾರ್ಥಿಗಳಿಗೆ ಸುನೀಲ ಮಾರುತಿ ಮಾನಪಡೆ ನೇತೃತ್ವದಲ್ಲಿ ಸನ್ಮಾನ

ಕಲಬುರಗಿ: ಎರಡು ದಿನಗಳ ಕಾಲ ಬೆಂಗಳೂರಿನ ಜಯನಗರದ ಅಕ್ವಾಟಿಕ್ಸ್ ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಾರ್ಸ್ಟರ್ ಈಜು ಸ್ಪರ್ಧೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಸನ್ ಸಿಟಿ ಅಕ್ವಾಟಿಕ್ಸ್ ಸ್ವಿಮ್ಮೆರ್ಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಭಾಗವಹಿಸಿದ ಏಳು ಜನ ಈಜು ಸ್ಪರ್ಧಾರ್ಥಿಗಳು ಒಟ್ಟು 7 ಚಿನ್ನದ ಪದಕ , 12 ಬೆಳ್ಳಿ ಪದಕ , ಎಂಟು ಕಂಚಿನ ಪದಕ ಸೇರಿದಂತೆ 27 ಪದಕಗಳನ್ನು ಗೆದ್ದಿದ್ದಾರೆ, ಅದರ ಜೊತೆಗೆ ಒಟ್ಟಾರೆ ತಂಡಗಳ ರಿಲೇ  ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅವರಿಗೆ ಯುವ ಸಂಘಟಕರು , ಸಾಮಾಜಿಕ ಕಾರ್ಯಕರ್ತರಾದ ಸುನೀಲ ಮಾರುತಿ ಮಾನಪಡೆಯರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು ಸನ್ಮಾನಿಸಲಾಯಿತು.

ಈ ಸ್ಪರ್ಧೆಯಲ್ಲಿ ಬಾಗವಹಿಸಿದ  ಲೋಕೇಶ ಪೂಜಾರಿ ಮೂರು ಚಿನ್ನದ ಪದಕ , ಒಂದು ಬೆಳ್ಳಿ ಪದಕ ಮೂರು ಕಂಚಿನ ಪದಕ , ಶರಣಪ್ಪ ಕುರಿಕೋಟ ಒಂದು ಚಿನ್ನದ ಪದಕ , ಒಂದು ಬೆಳ್ಳಿ ಪದಕ, ಮೂರು ಕಂಚಿನ ಪದಕ , ಶಿವಲಿಂಗಪ್ಪ ಸಿಂಗಶೆಟ್ಟಿ ಎರಡು ಚಿನ್ನದ ಪದಕ , ಒಂದು ಬೆಳ್ಳಿ ಪದಕ , ಒಂದು ಕಂಚಿನ ಪದಕ , ಮಂಚೇಂದ್ರ ಸಿಂಗ ಠಾಕೋರ ಒಂದು ಚಿನ್ನದ ಪದಕ ,ಒಂದು ಬೆಳ್ಳಿ ಪದಕ ಶಂಕರ್ ಕವಲಗಿ ಒಂದು ಚಿನ್ನದ ಪದಕ , ಎರಡು ಬೆಳ್ಳಿ ಪದಕ , ಒಂದು ಕಂಚಿನ ಪದಕ , ರೇಖಾ ಯಾಣಿ ಐದು ಬೆಳ್ಳಿ ಪದಕ , ಅಭಿಷೇಕ ಒಂದು ಬೆಳ್ಳಿ , ಒಂದು ಕಂಚಿನ ಪದಕ ಸೇರಿದಂತೆ ಒಟ್ಟು 27 ಪದಕಗಳನ್ನು ಜಯಸಿದ್ದಾರೆ.

ಈ ಸಂದರ್ಭದಲ್ಲಿ ವಾಲಿಬಾಲ್ ಆಟಗಾರ ರಾಘವೇಂದ್ರ ಬನ್ನೂರಕರ್ ,ಅಶೋಕ ಗುಲಗಂಜಿ ,ಸೋಮೇಶ ಪಾಟೀಲ , ಖುಷಿ ಥಾಕೋರ್, ಸುಶ್ಮಿತಾ ಪೂಜಾರಿ ಇದ್ದರು.. ಇದೆ ಸಂದರ್ಭದಲ್ಲಿ ಮಾತಾಡಿದ ಸುನೀಲ ಮಾರುತಿ ಮಾನಪಡೆಯವರು ಕಲಬುರಗಿ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಆದರೆ ಇಂದಿಗೂ ಅದು ಅದು ಸಾಧ್ಯವಾಗಿಲ್ಲ ಸರ್ಕಾರದ ಮಲತಾಯಿ ದೊರಣೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕ್ರೀಡಾರ್ಥಿಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುಲಿಲ್ಲ ಸಾಧನೆ ಮಾಡಿದರು.

ಅವರ ವೈಯಕ್ತಿಕ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಕಲಬುರಗಿ ನಗರದ ಕ್ರೀಡಾಂಗಣದಲ್ಲಿ ಕೋವಿಡ್ ನಿಂದ ಬಂದ್ ಆಗಿರುವ ಇನ್ನು ತೆರೆದಿಲ್ಲ ತರಬೇತಿದಾರರನ್ನು , ಜೀವರಕ್ಷಕರನ್ನು ನೌಕರರನ್ನು ಇನ್ನು ಕೆಲಸಕ್ಕೆ ಕರೆದಿಲ್ಲ ಇದರಿಂದಾಗಿ  ಈಜುಕೊಳದಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದೆ ಪ್ರತಿಭೆಗಳು ತೊಂದ್ರೆ ಅನುಭವಿಸುತ್ತಿದ್ದಾರೆ ಹಿಂತಹ ಸಮಯದಲ್ಲಿಯೂ ತಮ್ಮ ಪ್ರಯತ್ನದ ಮೂಲಕ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದು ದೊಡ್ಡ ಸಾಧನೆ ಎಂದರು.

emedialine

Recent Posts

ಡಾ.ಶರಣಬಸಪ್ಪ ಕ್ಯಾತನಾಳಗೆ ಮುಖ್ಯಮಂತ್ರಿಗಳಿಂದ ಶ್ರೇಷ್ಠ ವೈದ್ಯ ಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜುಲೈ…

4 hours ago

ಮುಸ್ಲಿಮರಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಿ: ಅಬ್ದುಲ್ ರಹೀಮಾನ್ ಪಟೇಲ್

ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…

5 hours ago

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

6 hours ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

6 hours ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

6 hours ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

8 hours ago