ಹುಚ್ಚು ಮನದ
ನುಚ್ಚು ನೂರು ನೆನಕೆಗಳ
ಹುಚ್ಚು ಹೃದಯದ
ಹತ್ತಾರು ಹರಿಕೆಗಳ
ಹೃದಯದೊಳಗಣ ಮನದ
ಮನದೊಳಗಣ ಮರೀಚಿಕೆಯಾದ
ಮಮತೆಯ ಮಂದಿರದ
ಪೂಜ್ಯ ದೇವತೆ ಅವಳಾದದ್ದು
ಎನ್ನ ಮನದೊಳಗಣ
ಹೃದಯದ, ಹೃದಯದೊಳಗಣ
ಮನದ ಮನವರಿಕೆಗೆ ನಿಲುಕದೇ
ಇದ್ದದ್ದು ನನಗೀಗ
ಸೋಜಿಗ..!
ಭಯಮಿಶ್ರೀತ ಅಭಯದ
ದುಃಖ ಸಹಿತ ಸಂತಸದ
ಅಪರಿಮಿತ ಪರಮಾಶ್ಚರ್ಯ
ಹೃದಯಂಗಣಕೆ ಲಗ್ಗೆಯಿಟ್ಡು
ನುಗ್ಗಿದ ಬಟ್ಡಲುಗಣ್ಣಿನ ಅವಳ
ಕುಡಿನೋಟ ಮಾಯೇ
ಓರಿಗೆಯ ಎನ್ನ ಕಂಗಳ
ಓರೆನೋಟದ ಮುಖಾಮುಖಿಯೊಂದಿಗೆ
ಶುರುವಾದದ್ದು
ಹೃದಯ–ಹೃದಯಗಳ ಅಪ್ಪುಗೆಗೆ
ಮನ–ಮನದ ಬೆಸುಗೆಗೆ
ನಾಂದಿಯಾದದ್ದು
ನನ್ನನ್ನು ನಾನು ಮತ್ತು ಅವಳನ್ನು ಅವಳು
ಕಳೆದುಕೊಂಡಿದೆಂದು
ಈಚೀಚೆಗೆ ತಿಳಿಯುತ್ತಿದ್ದದ್ದು
ಇನ್ನೂ ಮುಜಗರ..!
ನಾನು ಅವಳಲ್ಲಿ, ಅವಳು ನನ್ನಲ್ಲಿ
ಕೆದುಕಿ ಬೆದುಕ್ಕಿತ್ತಿರುವುದು
ಬೆದುಕುತ್ತಾ ಕೆದಕುತ್ತಿರುವುದು
ಇನ್ನೂ ಸೋಜಿಗ
ಈ ಸೋಜಿಗದ ಸಂಗತಿ
ಕೊನೆಗೆ ಪರಿಣಾಮ
ಅವಳಿಗೆ ನಾ ಬೇಕು, ನನಗೆ ಅವಳು ಬೇಕು
ಎಂಬ ದಿಟ್ಟ ಹೆಜ್ಜೆಯ
ಕಟ್ಟಕಡೆಯ ಸತ್ಯಾಸತ್ತ್ಯೆಯ ಸಾರ
ಸಾಗುತ್ತಿದ್ದಂತೆ
ಬೆಕ್ಕಸ ಬೆರಗಾಗಿಸಿತ್ತು
ಬಚ್ಚಲು ನೀರಿನ ಮನದ
ಮನುಮಕ್ಕಳೇ ತುಂಬಿ ತೇಲಾಡುವ
ಜಾತಿ ಹೊತ್ತು ಸತ್ತಿರುವ ಬುವಿಯ..!
ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…
ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…
ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…
ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…