ಚಿಂಚೋಳಿ: ಚಿಂಚೋಳಿ ತಾಲೂಕಿನ ಪೋಲಕಪಳ್ಳಿ, ಶಾದಿಪುರ್ ಕುುಂಚಾವರಂ, ಕಲ್ಲೂರ್ ಗ್ರಾಮಗಳಲ್ಲಿ ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಶಿವಾನಂದ ಪಾಟೀಲ ಅವರು ಮತಯಾಚನೆ ಮಾಡಿದರು.

ತಾಲೂಕಿನ ಮೀರಿಯಾಣ ಪಂಚಾಯತ್ ವ್ಯಾಪ್ತಿಯ ಕೊಲ್ಲೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯವರು ಯಾವ ಆಧಾರದ ಮೇಲೆ ಅಭ್ಯರ್ಥಿಗೆ ಟಿಕೆಟ್ ನೀಡಿ ದಿಯೋ ಗೊತ್ತಿಲ್ಲ, ಆರು ವರ್ಷದಲ್ಲಿ ಬಿ. ಜಿ. ಪಾಟೀಲ್ ಅವರ ಸಾಧನೆಗಳೇನು, ಕೊಡುಗೆಗಳೇನು ಯಾವ ಯಾವ ಯೋಜನೆಗಳು ಯಾವ ಯಾವ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಶಿವಾನಂದ ಪಾಟೀಲ್ ಅವರು ಸವಾಲುಗಳನ್ನು ಹಾಕಿ ಪ್ರಶ್ನಿಸಿದರು.

ನಾನು ತಳಮಟ್ಟದಿಂದ ಬಂದಿದ್ದೇನೆ ಗ್ರಾಮ ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ನಾನು ಕೆಲಸ ಮಾಡುತ್ತಾ ಬಂದಿದ್ದೇನೆ ಕಾಂಗ್ರೆಸ್ ಪಕ್ಷವು ನನ್ನ ಕೆಲಸವನ್ನು ನೋಡಿ ನನಗೆ ಟಿಕೆಟ್ ನೀಡಿದೆ. ನನಗೆ ಒಂದು ಅವಕಾಶ ನೀಡಿ,ಗ್ರಾಮಪಂಚಾಯಿತಿಗಳ ಸಮಸ್ಯೆಗಳನ್ನು ಹಾಗೂ ಗ್ರಾಮ ಪಂಚಾಯತಿ ಸದಸ್ಯರು 24 ಗಂಟೆ ನಾನು ಸಹಾಯಕ್ಕಾಗಿ ಇರುತ್ತೇನೆ. ಯಾವುದೇ ವಿಷಯ ಆಗಲಿ ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಸುಭಾಷ್ ರಾಠೋಡ ಮಾತನಾಡಿದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರ ಪರ ಮತಯಾಚನೆ ಮಾಡಿದರು.

ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಲೀಡರ್ಷಿಪ್ ಕೊರತೆಯಿಲ್ಲ.ಶಿವಾನಂದ ಪಾಟೀಲ್ ಅವರು ಗ್ರಾಮ ಪಂಚಾಯತ್ ಇಂದ ಬಂದಂತಹ ವ್ಯಕ್ತಿ, ಪಂಚಾಯಿತಿ ಕ್ಷೇತ್ರದ ಸಂಪೂರ್ಣ ಅರಿವು ಹೊಂದಿರುವವರು,ಹಣ ಗೋಸ್ಕರ ತಮ್ಮ ಮತವನ್ನು ಮಾರಿಕೊಳ್ಳಬೇಡಿ. ದುಡ್ಡು ಶಾಶ್ವತವಲ್ಲ , ಪಕ್ಷ ಅಂದರೆ ತಾಯಿ ಸಮಾನ. ನಮ್ಮ ಅಭ್ಯರ್ಥಿಯನ್ನು ಬಹುಮತದಿಂದ ಗೆದ್ದಿಸಿ ತರೋಣ, ಚಿಂಚೋಳಿ ಕ್ಷೇತ್ರದಿಂದ ಬಹುಮತ ನೀಡಿ ಆರಿಸಿ ತರೂಣಾ ಎಂದು ಪಂಚಾಯತ್ ಸದಸ್ಯರಲ್ಲಿ ಮತಯಾಚನೆ ಮಾಡಿ ಹೇಳಿದರು.

ಈ ಸಂಧರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಮಲಿ, ಭೀಮರಾವ್ ತೆಗಲತಿಪ್ಪಿ,
ಗೋಪಾಲರಾವ್ ಕಟ್ಟಿಮನಿ ಪುರಸಭೆ ಉಪಾಧ್ಯಕ್ಷರಾದ ಸಯ್ಯದ ಶಬ್ಬೀರ್,ಅಬ್ದುಲ್ ಬಾಶೀದ್,ಅನ್ವರ್ ಖತಿಬ್,ಬಸವರಾಜ ಕಡಬೂರ,ಖಲಿಲ್ ಪಟೇಲ್, ಆರ್.ಗಣಪತರಾವ್, ಮಹಮದ್ ಹಾದಿಸಾಬ್, ಹಣಮಂತ ಕೊಡದೂರ, ರೇವಣಸಿದ್ಧ ಪೂಜಾರಿ, ನಾಗೇಶ್ ಗುಣಾಜಿ,ವಕ್ತಾರರಾದ ಶರಣ ಪಾಟೀಲ,ಮಧುಸೂದನ ರೆಡ್ಡಿ, ರವಿರಾಜ್ ಕೊರವಿ, ಸುರೇಶ ಭಂಟ್ಟಾ, ಮಹಮದ್ ಹಾದಿ, ರೇವಣಸಿದ್ದ ಪೂಜಾರಿ, ಬಸವರಾಜ್ ಕಡಬೂರ, ಜಗನಾಥ್ ಗುತ್ತೇದಾರ, ಜಗನಾಥ್ ಕಟ್ಟಿ, ಸಂತೋಷ ಗುತ್ತೇದಾರ, ಅನೇಕರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420