ಕಲಬುರಗಿ: ಜಿಲ್ಲೆಯ ಚಿಂಚೋಳಿ ಭಾಗದಲ್ಲಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಸಂಶೋಧನಾಕೇಂದ್ರ ಮತ್ತು ಕೃಷಿ ಇಲಾಖೆ ಸಹಭಾಗಿತ್ವದಲ್ಲಿಕ್ಷಿಪ್ರ ಸಂಚಾರಿ ಬೆಳೆಗಳ ಕೀಟರೋಗ ಸಮೀಕ್ಷೆ ನಡೆಸಲಾಯಿತು.
ಗ್ರಾಮಗಳಾದ ಮಹಾಗಾಂವ, ನಾಗೂರ, ಕಂದಗೂಳ, ನಾವದಗಿ, ರಟಕಲ್, ಕೋಡ್ಲಿ, ದಸ್ತಾಪುರ, ಸುಲೇಪೇಟ್, ಪೆಂಚೆಂಪಳ್ಳಿ, ಚಿಂಚೋಳಿ ಅಣವಾರ್, ಐನೊಳ್ಳಿ, ದೇಗಲಮಡಿ ಭಾಗಗಳಲ್ಲಿ ತೊಗರಿ ಕಾಯಿ ಹಂತದಲ್ಲಿದ್ದು, ಮಳೆಯ ಹಾಗೂ ಮಂಜಿನ ಹಾನಿ, ಹವಾಮಾನ ವೈಪ್ಯರಿತ್ಯದಿಂದಾಗಿಅಲ್ಲಲ್ಲಿ ನೆಟೆ ಸೊರಗುರೋಗಕಂಡು ಬಂದಿದೆ.ಕಡಲೆ ಹಾಗೂ ಜೋಳದಲ್ಲಿ ಎಲೆತಿನ್ನುವಕೀಟ, ಭಾದೆ ಹತೋಟಿಗೆಇಮಾಮೆಕ್ಟಿನ್ ಬೆಂಜೋಯಟ್ ೧.೫ ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ರೈತರಿಗೆ ತಿಳಿಸಲಾಯಿತು.
ಅರಶಿನ ಎಲೆಚುಕ್ಕಿ ರೋಗಕಂಡುಬಂದಿದೆ.ಇದರ ನಿರ್ವಹಣೆಗೆ ಹೆಕ್ಸಾಕೊನಜಾಲ್ ೧ ಮಿಲಿ ಪ್ರತಿ ಲಿಟರ್ ನೀರಿಗೆ ಸಿಂಪಡಿಸಬೇಕು. ಪೇರಲ್ ಗಿಡಗಳು ನಿಧಾನವಾಗಿ ಸೊರಗುತ್ತಿದ್ದು, ಕಾಂಡದ ಕವಲುಗಳು ಹಾಗೂ ಹಣ್ಣುಗಳು ಒಣಗಿದಂತೆಕಾಣುತ್ತಿವೆ. ಮಣ್ಣಿನಿಂದ ಉದ್ಬವವಾಗುವ ಪ್ಯುಜೇರಿಯಂ ಶೀಲಿಂದ್ರ ರೋಗ ಹಾಗೂ ಬೇರುಜಂತು ಭಾದೆ ಹೆಚ್ಚಾಗುತ್ತಿದ್ದು, ಬೇರುಕಪ್ಪಾಗುವಿಕೆಯಿಂದ ಹೊಸ ಬೇರುಗಳ ರಚನೆಗೆಕಷ್ಟವಾಗುತ್ತಿದೆ.ಜೊತೆಗೆ ನೀರು ಮತ್ತುಆಹಾರ ಸರಬರಾಜು ಮಾಡುವ ಸಸ್ಯ ಅಂಗಾಂಶಗಳಿಗೆ ದಕ್ಕೆಆಗುತ್ತಿದೆ.
ಈ ರೋಗದ ನಿರ್ವಹಣೆಗೆ ವಾರಕ್ಕೊಂದು ಭಾರಿ ಸೂಕ್ತ ನೀರಾವರಿ, ಬೇಸಿಗೆಯಲ್ಲಿ ಕಾಂಡಕ್ಕೆ ಸುಣ್ಣದ ಲೇಪನ ಮಣ್ಣು ಪರೀಕ್ಷೆ ಆಧರಿಸಿ ಸೂಕ್ಷ್ಮ ಮತ್ತು ಮಧ್ಯಮ ಪೋಷಕಾಂಶಗಳ ಬಳಕೆ ಟ್ರೈಕೋಡ್ರಮಾಯುಕ್ತ ಬೇವಿನ ಹಿಂಡಿ ಭೂಮಿಗೆ ಸೇರಿಸುವುದು. ತೋಟದಲ್ಲಿಚೆಂಡು ಹೂವುಗಳನ್ನು ಅಲ್ಲಲ್ಲಿ ಹಾಕುವುದರಿಂದರೋಗವನ್ನು ಸಮಗ್ರವಾಗಿ ಹತೋಟಿ ಮಾಡಬಹುದು.
ಐಸಿಎಆರ್- ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ಸಸ್ಯರೋಗದ ವಿಜ್ಞಾನಿಯವರಾದಡಾ. ಜಹೀರ್ಅಹೆಮದ್, ಚಿಂಚೋಳಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಅನೀಲ್ರಾಠೋಡ, ಸುಲೇಪೇಟ್ರೈತ ಸಂಪರ್ಕಕೇಂದ್ರದ ಕೃಷಿ ಅಧಿಕಾರಿಯದ ಶ್ರೀ ಇಮ್ರಾನ್ ಅಲಿ, ಗುರುಪಾದ, ಕೃಷಿ ಸಂಜೀವಿನ ತಾಂತ್ರಿಕ ಅಧಿಕಾರಿಗಳಾದ ವರುಣ, ಅನೀಲ್ ಉಪಸ್ಥಿತರಿದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…