ಬಿಸಿ ಬಿಸಿ ಸುದ್ದಿ

ಎಲ್ಲರಲ್ಲೂ ಬಸವಾದಿ ಶರಣರ ತತ್ವ ಚಿಂತನೆ ಮೂಡುವುದು ಅವಶ್ಯಕ-ಖಾಸಾ ಮಠದ ಶ್ರೀ

ಸುರಪುರ: ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದ ಬಳಿಯಲ್ಲಿ ಲಿಂ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ೨೦ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಬಸವತತ್ವ ಸಮಾವೇಶ ನಡೆಸಲಾಯಿತು.

ಸಮಾವೇಶದಲ್ಲಿ ಜ್ಯೋತಿ ಪ್ರಜ್ವಲನೆಗೈದ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ಸಗರನಾಡಿನ ಸತ್ಯ ಶುದ್ಧ ಕಾರ್ಯಕ್ರಮಗಳಲ್ಲಿ ಈ ಬಸವತತ್ವ ಸಮಾವೇಶ ಪ್ರಮುಖವಾಗಿದೆ ಎಂದರು.ಎಲ್ಲರಲ್ಲೂ ಬಸವಾದಿ ಶರಣರ ಚಿಂತನೆಯನ್ನು ಮೂಡಿಸುವ ನಿಟ್ಟಿನಲ್ಲಿ ಗುಂಡಾನೂರ ಪರಿವಾರ ಕಳೆದ ೨೦ ವರ್ಷಗಳಿಂದ ಮಾಡುತ್ತಿರುವ ಬಸವತತ್ವ ಸಮಾವೇಶ ಯಶಸ್ವಿಯಾಗಿದೆ.ಪ್ರತಿಯೊಬ್ಬರಲ್ಲೂ ಬಸವಾದಿ ಶರಣರ ತತ್ವ ಚಿಂತನೆ ಬಂದಲ್ಲಿ ಸಮಾಜದ ಏಳಿಗೆ ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಕೇಂದ್ರಿಯ ವಿಶ್ವವಿದ್ಯಾಲಯದ ನಿರ್ದೇಶಕರಾದ ಬಾಬುರಾವ್ ಪೂಜಾರಿ ಅನುಭಾವ ನೀಡಿ,ಬಸವಣ್ಣನವರು ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಎಂದು ಬಾಹ್ಯದಲ್ಲಿನ ಜನರು ನಮ್ಮವರು ಮತ್ತು ದೇಹದೊಳಗಣ ಜೀವಕೋಶಗಳು ಎಲ್ಲವು ನಮ್ಮವ ಎಂಬ ಭಾವನೆಯನ್ನು ಹೊಂದಿರುತ್ತವೆ ಆದ್ದರಿಂದ ಬಸವಣ್ಣನವರು ಎಲ್ಲರನ್ನು ಇವನಮ್ಮವ ಎಂದರು ಇದು ಎಲ್ಲರು ಅರಿತುಕೊಳ್ಳಬೇಕು ಎಂದರು.ಇನ್ನೂ ಬಸವಣ್ಣನವರ ದೃಷ್ಟಿಯಲ್ಲಿ ಎಲ್ಲ ಕೆಲಸಗಳು ಒಂದೆ ಆಗಿದ್ದರಿಂದ ಅವರು ಕಾಯಕವನ್ನಾಗಿ ಕಂಡರು ಇದುವೇ ಕಾಯಕ ಸಿದ್ಧಾಂತವಾಗಿದೆ ಎಂದರು.ಅಲ್ಲದೆ ಪ್ರತಿಯೊಬ್ಬ ಮನಷ್ಯನ ಮನಸ್ಸು ತುಂಬಾ ಭರವಸೆದಾಯಕವಾಗಿರಲಿದೆ,ಆದ್ದರಿಂದ ಯಾವುದೇ ವ್ಯಕ್ತಿ ನಾನು ಇದನ್ನು ಮಾಡಬೇಕು ಅಥವಾ ಸಾಧಿಸಬೇಕು ಎಂದು ಸತತ ಪ್ರಯತ್ನ ಮಾಡುತ್ತಿದ್ದರೆ ಅದು ಯಶಸ್ವಿ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಬಸವಾದಿ ಶರಣರು ಬರೆದ ವಚನಗಳನ್ನು ನಿತ್ಯವು ಓದಿ ಅದನ್ನು ಬದುಕಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರ ಬದುಕು ಹಸನಾಗಲಿದೆ.ನಾವೆಲ್ಲರು ವಚನಗಳನ್ನು ಕಲಿಯಲು ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆಯವರ ಪ್ರಭಾವ ತುಂಬಾ ಇದೆ,ಅದರಂತೆ ಇಲ್ಲಿರುವ ಪ್ರತಿಯೊಬ್ಬರು ಕೂಡ ವಚನಗಳನ್ನು ಓದುವ ಜೊತೆಗೆ ಮಕ್ಕಳಿಗೆ ಕಲಿಸುವಂತೆ ಕರೆ ನೀಡಿದರು.ನಾನು ಕೂಡ ರಾಜಕೀಯ ವಿಚಾರಗಳಿಂದ ಸ್ವಲ್ಪ ದೂರವಿದ್ದು ಬಸವಾದಿ ಶರಣರ ವಿಚಾರಗಳತ್ತ ಹೆಚ್ಚು ಆಸಕ್ತಿ ತೋರಬೇಕಿದೆ ಎಂದರು.

ನಂತರ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ,ಸಾಹಿತಿ ಶಿವಣ್ಣ ಇಜೇರಿ,ಬಸವ ದಿನಚರಿ ಬಿಡಗಡೆಗೊಳಿಸಿದ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾಗರತ್ನಮ್ಮ ವಿ ಪಾಟೀಲ್,ಪಿಎಸ್‌ಐ ಕೃಷ್ಣಾ ಸುಬೇದಾರ,ಹೋರಾಟಗಾರ ಚನ್ನಪ್ಪ ಆನೆಗುಂದಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಮಟ್ಟದ ರಾಜ್ಯೋತ್ಸವ ಮತ್ತು ಕರವೇ ಕುವೆಂಪು ಪ್ರಶಸ್ತಿ ಪುರಸ್ಕೃತರಾದ ಪಿಎಸ್‌ಐ ಕೃಷ್ಣಾ ಸುಬೇದಾರ,ಪತ್ರಕರ್ತ ರಾಜು ಕುಂಬಾರ,ಆಯುರ್ವೇದ ತಜ್ಞ ಡಾ: ಮಹಾದೇವಪ್ಪ ಪಟ್ಟಣಶೆಟ್ಟಿ,ಸಾಹಿತಿ ಶಿವಣ್ಣ ಇಜೇರಿ, ಶಿಕ್ಷಕ ಶಿವಕುಮಾರ ಕಮತಗಿ,ಮಾಜಿ ಸೈನಿಕ ಭಿಮಣ್ಣ ನಾಯಕ ಲಕ್ಷ್ಮೀಪುರ ಇವರುಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಯಿತು.ಚನ್ನಮಲ್ಲಿಕಾರ್ಜುನ ಗುಂಡಾನೂರ ಸ್ವಾಗತಿಸಿದರು,ವಕೀಲ ಸಂಗಣ್ಣ ಗುಳಗಿ ನಿರೂಪಿಸಿದರು,ರಾಜು ಕುಂಬಾರ ವಂದಿಸಿದರು.ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸತ್ಯಂಪೇಟೆ,ಜಗದೀಶ ನೂಲಿ,ಶರಣಪ್ಪ ಯಾಳಗಿ ಸತ್ಯಂಪೇಟೆ,ಸೂಗುರೇಶ ವಾರದ,ಯಲ್ಲಪ್ಪ ಹುಲಿಕಲ್,ಚಂದ್ರಶೇಖರ ಡೊಣೂರ,ಮಲ್ಲಣ್ಣ ಗುಳಗಿ,ಹಣಮಂತ ಕೊಂಗಂಡಿ,ಸಿದ್ದಮ್ಮ ಸೇರಿದಂತೆ ಗುಂಡಾನೂರ ಪರಿವಾರದ ಎಲ್ಲಾ ಸದಸ್ಯರು ಹಾಗು ಬಸವಾಭಿಮಾನಿಗಳಿದ್ದರು.

emedialine

Recent Posts

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

15 seconds ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago