ಸಹೋದರತ್ವ ಭಾವನೆ ಬಿತ್ತಿ ಸಮ ಸಮಾಜ ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ: ಡಾ.ಎಸ್. ಬಾಲಾಜಿ

ಕಲಬುರಗಿ: ಸರ್ವರ ಮನಸ್ಸನ್ನು ಒ೦ದುಗೂಡಿಸಿ ಸಹೋದರತ್ವ ಭಾವನೆ ಬಿತ್ತಿ ಸಮ ಸಮಾಜ ಕಟ್ಟುವ ಶಕ್ತಿ  ಜನಪದ ಸಾಹಿತ್ಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ತಿಳಿಸಿದರು.

ಶನಿವಾರ ಕಲಬುರಗಿ ನಗರದ ಕಲಾಮಂಡಲದಲ್ಲಿ ಕನ್ನಡ ಜಾನಪದ ಪರಿಷತ್ ಕಲಬುರಗಿ ತಾಲ್ಲೂಕು ಉತ್ತರ ವಲಯ ಹಾಗೂ ದಕ್ಷಿಣ ವಲಯ ಪದಗ್ರಹಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೆ ಇಂದಿನ ಕಾರ್ಯಕ್ರಮದಲ್ಲಿ ಅದ್ಭುತ ಪ್ರತಿನಿಧಿ ಪ್ರತಿಭೆಗಳಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಇಂಥಹ ಪ್ರತಿಭೆಗಳು ರಾಜ್ಯಮಟ್ಟಕ್ಕೆ ಪರಿಚಯಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ರುವ ಮಕ್ತಂಪುರದ ಗುರುಬಸವೇಶ್ವರ  ಮಠದ ಪೂಜ್ಯರಾದ ಶಿವಾನಂದ ಮಹಾಸ್ವಾಮಿಗಳು  ಆಶೀರ್ವಚನ ನೀಡುತ್ತಾ ಕುಟ್ಟುವ, ಬೀಸುವ ಪದ, ಸೋಬಾನೆ ಪದ, ಹಂತಿ ಪದ ಹೀಗೆ ಹಲವಾರು ಪದಗಳನ್ನು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಬರುವುದರೊಂದಿಗೆ  ನಿಖರವಾದ ಲೇಖನ ಇಲ್ಲದೆ ನಶಿಸಿ ಹೋಗುತ್ತಿರುವುದು ಕಳವಳದ ಸಂಗತಿ.ಜನಪದ ಅಳಿಯುವ ಸಂದರ್ಭದಲ್ಲಿ ಉಳಿಸುವ ಪ್ರಾಮಾಣಿಕ ಪ್ರಯತ್ನ ಪರಿಷತ ವತಿಯಿಂದ ನಡೆಯಲಿ ಎಂದು ಹೇಳಿದರು.

ವೇದಿಕೆಯ ಮೇಲೆ  ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ನ್ಯಾಯವಾದಿ ಜ್ಯೋತಿಲಕ್ಷ್ಮಿ ಎಸ್ ಶೆಟ್ಟಿ,ಕರ್ನಾಟಕ ರಾಜ್ಯ ಟೇಲರ್ಸ್ ಮತ್ತು ಸಹಾಯಕರ ಫೆಡರೇಷನ್ ಜಿಲ್ಲಾಧ್ಯಕ್ಷರಾದ ಅನಿತಾ ಡಿ. ಭಕರೆ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಕಜಾಪ ಜಿಲ್ಲಾಧ್ಯಕ್ಷರಾದ ಎಂ ಬಿ ನಿಂಗಪ್ಪ, ಕಾರ್ಯದರ್ಶಿಗಳಾದ ಎಚ್ ಬಿ ಪಾಟೀಲ,ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಉಪಸ್ಥಿತರಿದ್ದರು.ದಕ್ಷಿಣ ವಲಯದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಎಸ್. ಬಾಗಲಕೋಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೆ  ಸಂದರ್ಭದಲ್ಲಿ ಸಾಹಿತ್ಯ, ಜನಪದ, ಸಂಗೀತದಲ್ಲಿ ಸೇವೆಗೈಯುತ್ತಿರುವ ಮಹನೀಯರಾದ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ ನೂತನ ಜಿಲ್ಲಾಧ್ಯಕ್ಷರಾದ  ವಿಜಯಕುಮಾರ ತೇಗಲತಿಪ್ಪಿ, ಜನಪದ ಕಲಾವಿದರಾದ ಶ್ರೀಮತಿ ನಿಂಗಮ್ಮ ಕೋಡ್ಲಿ ಸಂಗೀತ ಕಲಾವಿದರಾದ ಶಿವಾನಂದ ಮಡಿವಾಳ ಗೌಡಗಾ೦ವ, ಶರಣಪ್ಪ ಎಸ್. ಕಟ್ಟಿಮನಿ ಸಾಗನೂರ, ಬಾಲ ಪ್ರತಿಭೆ ಕುಮಾರ ಸಾತ್ವಿಕ್ ಎಸ್. ದ್ಯಾಮನಕರ್ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಕಲಬುರ್ಗಿ ತಾಲ್ಲೂಕಿನ  ಉತ್ತರ ಹಾಗೂ ದಕ್ಷಿಣ ವಲಯದ ಪದಾಧಿಕಾರಿಗಳಿಗೆ ಗೌರವಿಸಿ ರಾಜ್ಯಾಧ್ಯಕ್ಷರು  ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ  ಶಿವರಾಜ ಅ೦ಡಗಿ, ರವಿಕುಮಾರ ಶಹಾಪುರಕರ, ರಘುನಂದನ ಕುಲಕರ್ಣಿ, ಅಸ್ಲಾಂ ಶೇಖ, ಶರಣಬಸಪ್ಪ ಪಾಟೀಲ, ಸಂಗಮೇಶ ಶಾಸ್ತ್ರಿ ಮಾಶಾಳ, ಮಲ್ಲು ಕುಮಸಿ, ರಾಜು ಹೆಬ್ಬಾಳ, ಗೌಡೇಶ  ಬಿರಾದಾರ, ಮಹೇಶ ತೆಲೆಕುಣಿ,ಶಾಂತಪ್ಪ ಪಾಟೀಲ, ಮಲಕಾರಿ ಪೂಜಾರಿ, ಸಂಜೀವ ಕುಮಾರ ಶೆಟ್ಟಿ, ಸಿದ್ದರಾಮ ತಳವಾರ, ಉಮೇಶ ಬಿರಾದಾರ, ಲಕ್ಕಣ್ಣ ಪಾಟೀಲ, ಗುಂಡಪ್ಪ ಕೋಡ್ಲಿ, ರಾಜಕುಮಾರ ಲಿಂಗಶೆಟ್ಟಿ, ಸಂತೋಷ ಕುಡಳ್ಳಿ,  ಸೋಮೇಶ ಡಿಗ್ಗಿ,  ಶೈಲೇಂದ್ರ ಠಾಕೂರ, ಶರಣು ಎಸ್. ಆಲಗೂಡ,  ಶ್ರೀಕಾಂತ ಇಸರಿ, ಲಕ್ಷ್ಮಣ ಹೇರೂರ  ಜಿಲ್ಲೆ ಸೇರಿದಂತೆ ಹಲವಾರು ಜನ ಭಾಗವಹಿಸಿದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420