ಕಲಬುರಗಿ : ವಾರ್ಡ ನಂ.೫೦.ರ ಗೋದುತಾಯಿ ನಗರದಲ್ಲಿರುವ ಶಿವು ಮಂದಿರದಲ್ಲಿ ಮಾಹಾನಗರ ಪಾಲಿಕೆ ಕೆಯುಐಡಿಎಫ್ಸಿ ಹಾಗೂ ಆಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಾರ್ಡ ಮಟ್ಟದ ಸಮಾಲೋಚನೆ ಕಾರ್ಯಕ್ರಮದಲ್ಲಿ ಕೆಯುಐಡಿಎಫ್ಸಿಯ ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ ಪಾಟೀಲ ಅವರು ಮಾತನಾಡುತ್ತಾ ಕಲಬುರಗಿ ನಗರದ ಜನರಿಗೆ ಆದಷ್ಟು ಬೇಗ ಎಲ್ಲ ವಾರ್ಡಗಳಲ್ಲಿ ೨೪/೭ ನಿರಂತರ ನೀರು ಸರಬರಾಜು ಯೋಜನೆಯಿಂದ ನೀರು ಪೂರೈಕೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಹಾಗೂ ವಿಶ್ವ ಬ್ಯಾಂಕ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ವಾಗಿದೆ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಎಲ್ ಮತ್ತು ಟಿ ಕಂಪನಿಯ ಓ&ಎಮ್ ವ್ಯವಸ್ಥಾಪಕರಾದ ಭರತ ನಾರಾಯಣ ಇವರು ಸಭೆಯನುದ್ದೆಶಿಸಿ ಮಾತನಾಡಿ ಈಗಾಗಲೇ ಕಲಬುರಗಿ ನಗರದಲ್ಲಿ ಇರುವ ಎಲ್ಲಾ ನೀರಿನ ಸೋರಿಕೆಯನ್ನು ತಡೆಗಟ್ಟುವಲ್ಲಿ ಎಲ್ ಮತ್ತು ಟಿ ಕಂಪನಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ೨/೩ ದಿನಗಳಿಗೋಮ್ಮೆ ನೀರು ಪೋರೈಕೆ ಮಾಡಲು ಪ್ರಯತ್ನಿಸಲಾಗುವದು ಎಂದು ಹೇಳಿದರು.
ಸಾಮಾಜಿಕ ಪರಿಣಿತರು ಎಲ್ ಮತ್ತು ಟಿ ಕಂಪನಿಯ ಶರಣಪ್ಪಾ ಸಾಲಿಮನಿ ಅವರು ಮಾತನಾಡಿ ನಿರಂತರ ನೀರು ಸರಬರಾಜು ಯೋಜನೆ ಪ್ರಾರಂಭವಾದಾಗ ನಗರದ ಜನತೆಗೆ ಯಾವುದೇ ರೀತಿಯ ನೀರಿನ ತೊಂದರೆಗಳು ಇರುವದಿಲ್ಲಾ ಮತ್ತು ನೀರಿಗಾಗಿ ಕಟ್ಟುವ ಕರ ಕೂಡಾ ಮಿತವಾಗಿರುತದೆ ಹಾಗೂನೀರಿನ ಬಳಕೆಯ ಮಹತ್ವ ಮತ್ತು ಜನರ ಪಾತ್ರದ ಕುರಿತು ತಿಳಿಸಿದರು.
ಗೋದುತಾಯಿ ಅಭಿವೃದ್ದಿ ಸಂಘದ ಕಾರ್ಯದರ್ಶಿಗಳಾದ ಚಂದ್ರಶೇಖರ ಶೀಲವಂತ ಇವರು ಮಾತನಾಡಿ ತಮ್ಮ ಬಡಾವಣೆಯ ನೀರಿನ ಸಮಸ್ಯೆಯನ್ನು ಆದಷ್ಡು ಬೇಗ ಪರಿಹರಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಲ್ಲಿಕಾರ್ಜುನ ಪಾಟೀಲ ಇವರು ಮಾತನಾಡಿ ಎಲ್ ಮತ್ತು ಟಿ ಕಂಪನಿಯವರು ನಿರಂತರ ನೀರು ಸರಬರಾಜು ಯೋಜನೆ ಪ್ರಾರಂಭವಾದಾಗ ತಮ್ಮ ನಗರದಲ್ಲಿ ಎಲ್ಲ ರೀತಿಯ ಸಹಕಾರ ನೀಡಿ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮತ್ತು ನಿರ್ಧಿಷ್ಟ ಸಮಯದಲ್ಲಿ ಮುಗಿಸಲು ಸಹಕರಿಸುತ್ತೆವೆ ಎಂದರು.
ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಕುಶಂಪು ಯೋಜನೆಯ ನಾಗಯ್ಯಾ ಹಿರೇಮಠ, ಮಾಹಿತಿ ತಜ್ಞರು ನೆರವು ಸಂಸ್ಥೆಯ ತಂಡದ ನಾಯಕರಾದ ಡಾ. ಜೈಭೀಮ ದರ್ಗಿ, ದಾಖಲಾತಿ ತಜ್ಞರಾದ ಶಿವಾನಂದ ಬಿ ಅಥಣಿ, ಕಛೇರಿ ವ್ಯವಸ್ಥಾಪಕರಾದ ಸುಮಂಗಲಾ, ಸಮುದಾಯ ಸುಗಮಕಾರರಾದ ಸೋನಿಮಹೇಶ್ವರಿ, ವಂದನಾ ದಳವಾಯಿ, ಅಂಬಿಕಾ, ವಿಜಯಲಕ್ಷ್ಮಿ, ಅಶ್ವಿನಿ, ಪ್ರಸನ್ನ, ಹಾಗೂ ಗೋದುತಾಯಿ ಬಡಾವಣೆ ನಿವಾಸಿಗಳು ಉಪಸ್ಥಿತರಿದರು,
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…