ಕಲಬುರಗಿ: ಲೋಕಸಭೆ ಸಾರ್ವತ್ರಿಕ ಚುನಾವಣಾ ಕರ್ತವ್ಯದ ಮೇಲಿರುವ ಪೊಲೀಸ್, ಕೆ.ಎಸ್.ಆರ್.ಪಿ., ಗೃಹರಕ್ಷಕ ದಳ, ಎನ್.ಇ.ಕೆ.ಆರ್.ಟಿ.ಸಿ. ಸಿಬ್ಬಂದಿಗಳು ಹಾಗೂ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಲಾದ ಸಿಬ್ಬಂದಿಗಳು ಇದೇ ಏಪ್ರಿಲ್ ೧೫ ರಿಂದ ೧೭ರ ವರೆಗೆ ನಿಗದಿಪಡಿಸಿದ ಅಂಚೆ ಮತಪತ್ರ ಸೌಲಭ್ಯ ಕೇಂದ್ರದಲ್ಲಿ ತಮ್ಮ ಅಂಚೆ ಮತವನ್ನು ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚನೆ ನೀಡಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ತಮ್ಮ ಚುನಾವಣಾ ಗುರುತಿನ ಚೀಟಿ, ಚುನಾವಣಾ ಕರ್ತವ್ಯ ನೇಮಕಾತಿ ಆದೇಶದೊಂದಿಗೆ ಏಪ್ರಿಲ್ ೧೫ ರಿಂದ ೧೭ರ ವರೆಗೆ ಬೆಳಿಗ್ಗೆ ೯ ರಿಂದ ಸಾಯಂಕಾಲ ೫ ಗಂಟೆ ವರೆಗೆ ಅಂಚೆ ಮತಪತ್ರ ಸೌಲಭ್ಯ ಕೇಂದ್ರದಲ್ಲಿ ಮತ ಚಲಾಯಿಸಬೇಕು. ಇನ್ನು ಇದೂವರೆಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಆಅ) ಪಡೆಯದವರು ಸದರಿ ಕೇಂದ್ರದಿಂದ ಕಡ್ಡಾಯವಾಗಿ ಇ.ಡಿ.ಸಿ ಪಡೆದು ಮತ ಚಲಾಯಿಸಲು ತಿಳಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಲಾಗಿರುವ ಅಂಚೆ ಮತಪತ್ರ ಸೌಲಭ್ಯ ಕೇಂದ್ರಗಳ ವಿವರ. ೩೪-ಅಫಜಲಪೂರ: ತಹಶೀಲ್ದಾರ ಕಚೇರಿ, ಅಫಜಲಪೂರ. ೩೫-ಜೇವರ್ಗಿ: ತಹಶೀಲ್ದಾರ ಕಚೇರಿ, ಜೇವರ್ಗಿ. ೪೦-ಚಿತ್ತಾಪುರ: ತಹಶೀಲ್ದಾರ ಕಚೇರಿ, ಚಿತ್ತಾಪುರ. ೪೧-ಸೇಡಂ: ಸಹಾಯಕ ಆಯುಕ್ತರ ಕಚೇರಿ, ಸ್ಟೇಷನ್ ರಸ್ತೆ ಸೇಡಂ. ೪೩-ಕಲಬುರಗಿ ಗ್ರಾಮೀಣ: ತಹಶೀಲ್ದಾರ ಕಚೇರಿ, ಕಲಬುರಗಿ. ೪೪-ಕಲಬುರಗಿ ದಕ್ಷಿಣ: ಮಹಾನಗರ ಪಾಲಿಕೆ ಕಟ್ಟಡ(ಹಳೆದು) ಕಲಬುರಗಿ. ೪೫-ಕಲಬುರಗಿ ಉತ್ತರ: ಮಹಾನಗರ ಪಾಲಿಕೆ ಕಟ್ಟಡ(ಹೊಸದು), ಜಗತ್ ವೃತ್ತ ಕಲಬುರಗಿ ಮತ್ತು ೩೯-ಗುರಮಿಟಕಲ್: ತಹಶೀಲ್ದಾರ ಕಚೇರಿ, ಯಾದಗಿರಿ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…