ಬಿಸಿ ಬಿಸಿ ಸುದ್ದಿ

ಸರಕಾರ ಪಿಂಜಾರ ಅಭೀವೃಧ್ಧಿ ನಿಗಮ ಸ್ಥಾಪಿಸಲಿ: ಅಹ್ಮದ ಪಠಾಣ

ಸುರಪುರ: ಸರಕಾರ ಪಿಂಜಾರ ಅಭೀವೃಧ್ದಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭೀವೃಧ್ಧಿಗೆ ಸಹಕಾರ ನೀಡುವಂತೆ ಪಿಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಅಹ್ಮದ ಪಠಾಣ ಮಾತನಾಡಿದರು.

ನಗರದ ಪಿಂಜಾರ ವಿವಿದೋದ್ದೇಶ ಸೇವಾ ಸಂಘದ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿನ ಪಿಂಜಾರ ಸಮುದಾಯದ ಅಭೀವೃಧ್ಧಿಗೆ ಡಾ:ಸಿ.ಎಸ್.ದ್ವಾರಕಾನಾಥ ನೀಡಿದ ವರದಿ ಕೂಡಲೆ ಜಾರಿಗೊಳಿಸಬೇಕು.ಅಲ್ಲದೆ ಪಿಂಜಾರ ಅಭೀವೃಧ್ಧಿ ನಿಗಮ ಸ್ಥಾಪಿಸುವಂತೆ ಕಳೆದ ಒಂಬತ್ತು ವರ್ಷಗಳಿಂದ ಸರಕಾಕ್ಕೆ ನಮ್ಮ ಬೇಡಿಕೆಗಳ ಕುರಿತು ಒತ್ತಾಯಿಸುತ್ತಿದ್ದರು ಸರಕಾರಗಳು ನಮ್ಮ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷ್ಯ ತೋರುತ್ತಿದೆ.ಇದನ್ನು ಖಂಡಿಸುವೆವು.ಕೂಡಲೆ ಸರಕಾರ ಅಭೀವೃಧ್ಧಿ ನಿಗಮ ಸ್ಥಾಪಿಸಬೇಕು.ಅಲ್ಲದೆ ನಮ್ಮ ಸಮುದಾಯದ ಜಾತಿ ಪ್ರಮಾಣ ಪತ್ರಗಳಲ್ಲಿ ಮುಸ್ಲಿಂ ಎಂದು ನಮೂದಿಸಲಾಗುತ್ತಿದೆ.

ಇದರಿಂದ ನಿಜವಾದ ಪಿಂಜಾರ,ನದಾಫ ಮತ್ತಿತರೆ ಹೆಸರಲ್ಲಿ ಕರೆಯುವ ನಮ್ಮ ಜನಾಂಗದವರಿಗೆ ಸೌಲಭ್ಯಗಳು ಸಿಗುತ್ತಿಲ್ಲ.ಆದ್ದರಿಂದ ಈ ಮುಂದೆ ಸರಕಾರ ಕೊಡುವ ಜಾತಿ ಪ್ರಮಾಣ ಪತ್ರಗಳಲ್ಲಿ ಪಿಂಜಾರ ಎಂದು ನಮೂದಿಸಬೇಕು ಮತ್ತು ನಮ್ಮ ಸಮುದಾಯದವರಲ್ಲದೆ ಬೇರೆ ಯಾರೂ ಪಿಂಜಾರ ಜಾತಿ ಪ್ರಮಾಣ ಪತ್ರ ಪಡೆಯದಂತೆ ತಡೆಯಲು ಗ್ರಾಮ ಲೆಕ್ಕಿಗರು ಪಂಚನಾಮೆ ನಡೆಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಖಾದಿಯಾನರು ಪಿಂಜಾರರೆಂದು ಹೇಳಿಕೊಂಡು ಧರ್ಮಾಂತರಗೊಳ್ಳುತ್ತಿರುವ ಬಗ್ಗೆ ದೂರುಗಳಿವೆ.ಆದ್ದರಿಂದ ನಮ್ಮ ಸಮಾಜದ ಜಾಗೃತಿಗಾಗಿ ಮತ್ತು ಖಾದಿಯಾನರ ಧರ್ಮಾಂತರ ತಡೆಯಲು ಅಗಸ್ಟ್ ೧ ರಂದು ಹುಣಸಗಿ ತಹಸೀಲ್ ಕಚೇರಿ ಮುಂದೆ ಮತ್ತು ಅಗಸ್ಟ್ ೮ ರಂದು ಸುರಪುರ ತಹಸೀಲ್ ಮುಂದೆ ಮತ್ತು ಸಪ್ಟೆಂಬರ್ ೧ ರಂದು ಶಹಾಪುರ ತಹಸೀಲ್ ಕಚೇರಿ ಮುಂದೆ ಹಾಗು ಸಪ್ಟೆಂಬರ್ ೫ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸುರಪುರ ತಾಲ್ಲೂಕಾಧ್ಯಕ್ಷ ಅಬ್ದುಲಸಾಬ್ ಬೇವಿನಾಳ,ಹುಣಸಗಿ ತಾಲ್ಲೂಕಾಧ್ಯಕ್ಷ ಬಂದಗೀಸಾಬ ಬಸಂತಪೂರ ಹಾಗು ಮುಖಂಡರಾದ ಕಾಸಿಂ ಸಾಬ ಅಂಜಳ, ಖಾದರಸಾಬ ನದಾಫ,ಶರಮುದ್ದೀನ್ ಶಖಾಪುರ, ಹುಸೇನಸಾಬ ಕಿರದಹಳ್ಳಿ,ಖಾಜಾಹುಸೇನ ದಳಪತಿ,ಬಾದಶಹ ನಾಗರಾಳ,ನಬಿರಸೂಲ ಏವೂರ,ಹುಸೇನಸಾಬ ಮಂಗಿಹಾಳ, ಚಂದಾಸಾಬ ಚಂದಲಾಪುರ,ಹುಸೇಸನಸಾಬ ಹುಣಸಗಿ,ಖಾಸಿಂ ಸಾಬ ಮುಷ್ಠಳ್ಳಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

29 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

32 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

35 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago