ಕಲಬುರಗಿ: ಬೇಜವಾಬ್ದಾರಿಯಿಂದ ವರ್ತಿಸಿದ ರಾಯಚೂರ ಜಿಲ್ಲಾ ನ್ಯಾಯಾಧೀಶರನ್ನು ಮತ್ತು ಹುಮನಾಬಾದ್ ತಹಸೀಲ್ದಾರ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಡಮಾನ ಮಾಡಿದ ನ್ಯಾಯಾಧೀಶರನ್ನು ಕೂಡಲೇ ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಹುಮನಾಬಾದ್ ತಾಲೂಕಿನಲ್ಲಿಯೂ ಕೂಡ ಡಾ. ಬಿ.ಆರ್ .ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವನ್ನು ಖಂಡಿಸಿ ಬಿಎಸ್ಪಿ ನೇತೃತ್ವದಲ್ಲಿ ಮನವಿ ಪತ್ರವನ್ನು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಲು ಹೋದಾಗ ಎರಡು ಗಂಟೆಗಳ ಕಾಲ ಕಚೇರಿ ಹೊರಗಡೆ ಕಾದರು ಕಛೇರಿಯಿಂದ ಹೊರಗೆ ಬಾರದಿದ್ದಾಗ ಪಕ್ಷದ ಮುಖಂಡರು ಸೂಕ್ಷ್ಮತೆಯಿಂದ ವಿಷಯದ ಗಂಭೀರತೆಯನ್ನು ತಹಸೀಲ್ದಾರರ ಗಮನಕ್ಕೂ ತಂದರೂ ಆವಿವೇಕತನದಿಂದ ವರ್ತಿಸಿದಲ್ಲದೇ ಹೋರಾಟಗಾರರು ಮತ್ತು ಘಟನೆ ಬಗ್ಗೆ ಲಘವಾಗಿ ಮಾತನಾಡಿರುವುದೇ ತಹಸೀಲ್ದಾರರ ಮಾತುಗಳೇ ಘಟನೆಗೆ ಕಾರಣವಾಗಿರುತ್ತದೆ. ಇಂತಹ ಬೇಜವಾಬ್ದಾರಿ ತಹಸೀಲ್ದಾರರನ್ನು ಅಮಾನತ್ತುಗೊಳಿಸಿ ತಹಸೀಲ್ದಾರರಾದ ಇವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಜಯಭೀಮು.ಡಿ.ಸಿಂಧೆ, ಜಿಲ್ಲಾ ಕಾರ್ಯದರ್ಶಿ ದೇವಿಂದ್ರ ಕುಮಸಿ, ಗ್ರಾಮೀಣ ಸಂಯೋಜಕ ರವಿ ಕೋರಿ, ಗ್ರಾಮೀಣ ಅಧ್ಯಕ್ಷ ಅಂಬಾರಾಯ ದಸ್ತಾಪೂರ, ಮುಖಂಡ ವಿಜಯಕುಮಾರ ಅಂಕಲಗಿ, ಗ್ರಾಮೀಣ ಉಸ್ತುವಾರಿ ಸತೀಶ ನಲ್ಲಿ, ಕಮಲಾಪೂರ ಉಪಾಧ್ಯಕ್ಷ ವಿಜಯಕುಮಾರ ಪದ್ರಿ, ಗ್ರಾ.ಪ್ರಧಾನ ಕಾರ್ಯದರ್ಶಿ ರವಿ ಪಟ್ಟೇದಾರ, ಗ್ರಾ. ಖಜಾಂಚಿ ರೇಷ್ಮಾ ಸಿಂಗೆ ಇದ್ದರು.
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…