• ಕೆ.ಶಿವು.ಲಕ್ಕಣ್ಣವರ

ನನ್ನನ್ನಿಷ್ಟು ನಂಬಬೇಡ
ನಂಬಿಕೆಗೆ ಅರ್ಹನಲ್ಲ ನಾ
ನಾನೊಂದು ಮಧೋನ್ಮತ್ತ ಆನೆ
ಹಾಗೇ ಬಾಲ ಅಲ್ಲಾಡಿಸಿ ಕುಂಯುಗುಡುವ
ನಿಯತ್ತಿನ ನಾಯಿ ಕೂಡ.

ಪ್ರೀತಿ — ಸ್ನೇಹ — ವಿಶ್ವಾಸಗಳ
ಅಪರಾವತಾರದ ಛಿನ್ನೆಯೂ ಕೂಡ,
ಎಂದೆಣಿಸಿಕೊಂಡರೆ ನೀ,
ಕ್ಷಣಾರ್ಧದಲ್ಲಿ ಎಲ್ಲವನ್ನೂ
ಭಗ್ನಗೊಳಿಸಿಬಿಡಬಲ್ಲ
ನನ್ನೊಳಗಿನ ರಾಕ್ಷಸನನ್ನು ಕಂಡು ನೀ
ನಿಂತ ನೆಲದಲ್ಲೇ ಹೂತು ಹೋಗಬಹುದು.

ಆದರೂ
ಹಸಿದವನ ಹೊಟ್ಟೆ ಕಂಡು
ಕನಕರಿಸಿ, ನನ್ನ ಹೊಟ್ಟೆ
ಬಗಿದುಕೊಂಡು ಹಸಿದವನ ಹೊಟ್ಟೆಗೆ
‘ಅನ್ನ ಸಮರ್ಪಿಸ’ಬಲ್ಲ ಅತೀ’ಮಾನುಷ’ನೂ ಸರಿ ನಾ ಹೌದು.
ಅರೇ ಕ್ಷಣವೂ ಹಿಡಿಯಲಿಕ್ಕಿಲ್ಲ,
ಆಳೆತ್ತರಕ್ಕೆ ಎತ್ತಿ, ನೆಲಕ್ಕೊಗೆದು
ಚಿಂದಿ ಮಾಡಿಬಿಡಬಲ್ಲ ‘ಅತೀ – ಅಮಾನುಷ’ನೂ
ಹೌದು ನಾ.

ಒಟ್ಟಾರೆ ನಾನು ನಿಖರವಾಗಿ ಇದನ್ನೇ
ಕೊಡುತ್ತೇನೆಂದು ಹೇಳಲಾರೆ ನಾ,
ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕ ವಿಷಜಂತೂ ಕೂಡ ನಾ!
ಏಕೆ ಗೊತ್ತೇ ನಾನು ಧ್ವಂಧ್ವ
ಹಾಗಾಗಿ ಎಚ್ಚರದಿಂದಿರು ನೀ,
ನನಗೆ ‘ಅಪರಿಮಿತ ಮುಖವಾಡ’ಗಳಿವೆ.!!
‘ಏಕೆ ಗೊತ್ತೇ ನಾನು ಧ್ವಂಧ್ವ’.!!

emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

16 mins ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

22 mins ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

26 mins ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

1 hour ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

4 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

7 hours ago