ಬಿಸಿ ಬಿಸಿ ಸುದ್ದಿ

ರೈತ ನಾಯಕರ ಮೇಲಿನ ಹಲ್ಲೆಗೆ ಖೋಬ್ರೆ ಖಂಡನೆ

ಆಳಂದ: ರೈತ ನಾಯಕ ರಾಕೇಶ ಟಿಕಾಯತ್ ಮತ್ತು ಇತರ ರೈತ ನಾಯಕರ ಮೇಲೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ನಡೆಸಿದ ದಾಳಿಯನ್ನು ಹಾಗೂ ಅವರ ಮೇಲೆ ಮಸಿಬಳಿದಿರುವುದನ್ನು ಅಮಾನವೀಯ ಕೃತ್ಯವಾಗಿದೆ ಎಂದು ಅಖಿಲ ಭಾರತ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ರುದ್ರವಾಡಿ ಅವರು ಇಂದಿಲ್ಲಿ ಖಂಡಿಸಿದರು.

ಈ ಕುರಿತು ಹೇಳಿಕೆ ನೀಡಿರುವ ಅವರು, ರಾಕೇಶ ಟಿಕಾಯತ ಇತರನ್ನು ಬೆಂಗಳೂರಿನ ಗಾಂಧಿಭನದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಏಕಾಏಕಿ ವೇದಿಕೆಗೆ ನುಗ್ಗಿ ರಾಕೇಶ ಅವರ ಮೇಲೆ ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ. ಈ ದಾಳಿಯು ವ್ಯಕ್ತಿಗಳ ಮೇಲೆ ನಡೆಸಿದಲ್ಲ. ಬದಲಿಗೆ ಭಾರತದ ಹೋರಾಟಗಳ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಕೋಮುದಂಗೆಗೆ ಪ್ರಯೋಗಾಲಯವಾಗಿ ಮಾಡುತ್ತಿದೆ. ಇಂಥ ಫ್ಯಾಸಿಸ್ಟ್ ನಡೆಗಳ ಹಿಂದೆ ಕಾಣದ ಕೈಗಳ ಹಿಡನ್ ಅಜೆಂಡಾ ಅಡಗಿದೆ. ದಿನ ನಿತ್ಯ ರಾಜ್ಯವು ಇಂಥ ವಿಧ್ವಂಸಕ ಕೃತ್ಯದಿಂದ ನರಳುತ್ತಿದೆ. ಸರ್ಕಾರ ಮಾತರ ಕೈಕಟ್ಟಿಕೊಂಡು ಕುಳಿತು ಮೌನ ಸಮ್ಮತಿ ಕೊಡುತ್ತಿದೆ ಎಂದು ಆರೋಪಿಸಿದರು.

ಇಂಥ ಅರಾಜಕತೆ ಸೃಷ್ಟಗೆ ಸರ್ಕಾರ ಹೊಣೆಯಾಗಿದೆ. ಸರ್ಕಾರ ನಡೆಸುವ ಯಾವ ಯೋಗ್ಯತೆಯೂ ಇಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ ಚಳವಳಿಗಳು ಸರ್ಕಾರಗಳಿಗೆ ಪಾಠಕಲಿಸುತ್ತವೆ ಎಂದು ಅವರು ಎಚ್ಚರಿಸಿದರು. ಕೂಡಲೇ ಧಾಳಿಕೋರರ ಮೇಲೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

emedialine

Recent Posts

ದಸ್ತಿ ಅವರಿಗೆ ದಶಕಗಳ ಹೋರಾಟಕ್ಕೆ ಸಂದ ಡಾಕ್ಟರೇಟ್ ಗೌರವ

ಕಲಬುರಗಿ: ಕಲ್ಯಾಣ ನಾಡಿನ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ದಶಕಗಳ ಹೋರಾಟವನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್…

3 mins ago

ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಅಹ್ವಾನ

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ತನ್ನ ಸದಸ್ಯ–ಸಹಸದಸ್ಯರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 05/09/2024…

12 mins ago

ವಾಡಿ; ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ವಾಡಿ:ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಆಚರಿಸಲಾಯಿತು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ…

29 mins ago

ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕ ಡಿ. ದೇವರಾಜ ಅರಸು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಜಿಲ್ಲಾ ಹಿಂದುಳಿದ…

31 mins ago

“ಸದ್ಭಾವನಾ ದಿನಾಚರಣೆ”

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ…

36 mins ago

371ಜೆ ಕಾಯ್ದೆ ದಶಮಾನೋತ್ಸವ ಹಿನ್ನೆಲೆ,ಸಂಭ್ರಮಾಚರಣೆಗೆ ಚಿಂತನೆ; ಡಿ.ಕೆ.ಶಿವಕುಮಾರ

ಕಲಬುರಗಿ; ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಭಾಷೆಯನ್ನೆ ಬರೆದ 371ಜೆ ಕಾಯ್ದೆ ಜಾರಿಗೆ ಬಂದು ಇದೀಗ ದಶಮಾನೋತ್ಸವ ಆಚರಿಸುತ್ತಿದ್ದು, ಈ…

41 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420