ಬಿಸಿ ಬಿಸಿ ಸುದ್ದಿ

ಶರಣರ ಶಿವಜೀವನವೇ ಜನರ ಮೇಲೆ ಪ್ರಭಾವ : ಡಾ.ಅಪ್ಪಾ

ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರರ ಶಿವಜೀವನ ಅವರ ನಡೆದ ದಾರಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ತಿಳಿಸಿದರು.

ಗುರುವಾರ ಶರಣಬಸವೇಶ್ವರ ಮಹಾಮನೆಯಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಪೊಲೀಸ ಪಾಟೀಲ ಅವರು ಬರೆದ ಮಹಾದಾಸೋಹಿ ಶರಣಬಸವರ ಶಿವಲೀಲೆಗಳು ಎಂಬ ಗ್ರಂಥ ಬಿಡುಗಡೆಗೊಳಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ರಣಬಸವೇಶ್ವರರು ಪಶು ಪಕ್ಷಿಗಳಿಗೆ ದಾಸೋಹ ಮಾಡುತ್ತಾ ಶಿವನನ್ನು ಕಂಡವರು. ಜನಪದರಿಗೆ ಶರಣರ ಲೀಲೆಗಳು ಅಪಾರ ದೊರಕಿವೆ. ಡಾ.ನೀಲಾಂಬಿಕಾ ಪೊಲೀಸ ಪಾಟೀಲರು ೧೯೮ ಲೀಲೆಗಳು ಸಂಗ್ರಹಿಸಿ ಗ್ರಂಥ ಹೊರತಂದದ್ದು ಅದ್ಭುತ ಕೆಲಸವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜಗತ್ತಿನಾದ್ಯಂತ ಸಾವಿರಕ್ಕಿಂತ ಹೆಚ್ಚು ಶರಣಬಸವೇಶ್ವರ ದೇವಸ್ಥಾನಗಳಿವೆ. ಯಾವುದೇ ಜಾತಿ ಜನಾಂಗ ಎನ್ನದೆ ಎಲ್ಲರೂ ಶರಣರನ್ನು ಆರಾಧಿಸುತ್ತಾರೆ. ಅವರ ಲೀಲೆಗಳು ಇಂದಿಗೂ ಸಹ ನಡೆಯುತ್ತಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಪೂಜ್ಯ ಶ್ರೀಮತಿ ದಾಕ್ಷಾಯಣಿ ಎಸ್. ಅಪ್ಪಾ ಅವರು ಮಾತನಾಡಿ, ನನ್ನಿಂದ ಹಿಡಿದು ಪ್ರತಿಯೊಬ್ಬರ ಜೀವನದಲ್ಲಿಯೂ ಶರಣಬಸವೇಶ್ವರ ಲೀಲೆಗಳು ಪ್ರತಿದಿನವೂ ನಡೆಯುತ್ತಿವೆ ಎಂದರು. ಮುಖ್ಯ ಅತಿಥಿಗಳಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡಿ, ಡಾ. ನೀಲಾಂಬಿಕಾ ಪೊಲೀಸ ಪಾಟೀಲರು ಬರೆದ ಪುಸ್ತಕದಿಂದ ಸಾಕಷ್ಟು ಸಂಶೋಧನೆಗಳು ಮಾಡಬಹುದಾಗಿದೆ. ಅಂತಹ ಗ್ರಂಥ ಇದಾಗಿದೆ. ಪುಸ್ತಕ ಬರೆಯುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು ಪುಸ್ತಕಗಳನ್ನು ಹೊರತರುತ್ತಾರೆಂಬ ಆಶಾಭಾವನೆ ಇದೆ ಎಂದರು.

ಕೃತಿ ಪರಿಚಯಿಸಿದ ಶಹಾಬಾದನ ಎಸ್.ಎಸ್. ಮರಗೋಳ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ.ನೀಲಮ್ಮ ಕತ್ನಳ್ಳಿ ಅವರು ಮಾತನಾಡಿ, ಆತ್ಮೋದ್ಧಾರ ಜತೆಗೆ ಸಮಾಜೋದ್ಧಾರ ಕೆಲಸವನ್ನು ಶರಣಬಸವರು ಮಾಡಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಶರಣಬಸವರ ಜೀವನ ತ್ಯಾಗ ಮತ್ತು ಯೋಗಗಳ ಸಂಗಮವಾಗಿದೆ. ಮಾನವರ ಬದುಕಿಗೆ ತಮ್ಮ ಜೀವನ ಮುಡುಪಾಗಿಟ್ಟಿದರು ಎಂದು ಹೇಳಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆಯವರು ಅವರು ಮಾತನಾಡಿ, ಶರಣಬಸವರ ಲೀಲೆಗಳು ವಿಜ್ಞಾನಕ್ಕೆ ಬಹಳ ಹತ್ತಿರವಾಗಿವೆ. ಅವರು ದಾಸೋಹದ ಜತೆಗೆ ಕಾಯಕಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ಕಾಯಕ ಅಂದರೆ ಅದು ವಿಜ್ಞಾನ, ಹಾಗಾಗಿ ಕಾಯಕ ಮಾಡಿದರೆ ಶರಣರ ಆಶೀರ್ವಾದ ಸದಾ ಇರುತ್ತದೆ ಎಂದು ಕೆಲವು ಉದಾಹರಣೆಗಳ ಮೂಲಕ ಶರಣರ ಲೀಲೆಗಳನ್ನು ವೈಜ್ಞಾನಿಕ ದೃಷ್ಟಿಯಲ್ಲಿ ತಿಳಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಪಾಟೀಲ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿ ಹೇರೂರ್, ಎಂ.ಎಸ್. ಇರಾಣಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಸೋಮಶಂಕ್ರಯ್ಯ ವಿಶ್ವನಾಥಮಠ ಹಿತನುಡಿದರು. ಗ್ರಂಥ ಲೇಖಕರಾದ ಡಾ.ನೀಲಾಂಬಿಕಾ ಪೊಲೀಸ ಪಾಟೀಲ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರಾದ ಶರಣಬಸಪ್ಪಾ ಪಾಟೀಲ ಜಾವಳಿ, ಡಾ. ವಿ.ಡಿ.ಮೈತ್ರಿ, ಡಾ.ಲಿಂಗರಾಜ ಶಾಸ್ತ್ರಿ, ಡಾ.ಎಸ್.ಜಿ.ಡೊಳ್ಳೆಗೌಡ್ರ, ಡಾ.ಡಿ.ಟಿ.ಅಂಗಡಿ, ಡಾ.ಎಸ್.ಎಚ್. ಹೊನ್ನಳ್ಳಿ, ಡಾ.ಸುರೇಶಕುಮಾರ ನಂದಗಾಂವ, ಡಾ.ಎಸ್.ಎಸ್.ಪಾಟೀಲ, ಡಾ.ಸಿದ್ದಮ್ಮ ಗುಡೇದ್, ಡಾ. ಇಂದಿರಾ ಶೇಟಕಾರ, ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ.ಎನ್.ಎಸ್.ಹೂಗಾರ, ಡಾ.ಸುನಂದಾ ವಾಂಜರಖೇಡೆ, ಪ್ರೊ. ಶ್ರೀದೇವಿ ಹರವಾಳ, ಪ್ರೊ. ರೇಣುಕಾ ಕನಕೇರಿ, ಪ್ರೊ. ಶಶೀಕಲಾ ಪುರವಂತ, ಪ್ರೊ. ವೆಂಕಣ್ಣ ಡೊಣ್ಣೆಗೌಡರ, ಡಾ.ಲಕ್ಷ್ಮೀದೇವಿ ಹರಸೂರ, ಪ್ರೊ. ಜಾನಕಿ ಹೊಸೂರ, ನೀಲಮ್ಮ ಕಂಬಾಳಿ ನೆಲೋಗಿ, ಶಾಂತಾ ಅಷ್ಟಗಿ, ಡಾ.ಸುಮಂಗಲಾ ರೆಡ್ಡಿ, ಡಾ. ಪ್ರಭಾವತಿ ಚಿತಕೋಟೆ, ಡಾ. ಬಸವರಾಜೇಶ್ವರಿ, ನಾನಾ ಸಾಹೇಬ ಹಚಡದ, ಮಹೇಂದ್ರ ರಾವೂರ್, ಕೃಪಾಸಾಗರ ಗೊಬ್ಬುರ, ಅನಿತಾ ಗೊಬ್ಬುರ, ಸುಪ್ರೀಯಾ ನಾಗಶೆಟ್ಟಿ, ವಿದ್ಯಾ ರೇಶ್ಮಿ, ಷಣ್ಮುಖ ಪಾಟೀಲ, ಕವಿತಾ ಮಠಪತಿ, ಅನುಸುಯಾ ಬಡಿಗೇರ, ಪ್ರಭಾವತಿ, ಪರುತಯ್ಯ ಹಿರೇಮಠ, ವಿನೋದ ಹಳಕಟ್ಟಿ, ಅಪ್ಪಾಸಾಬ ಬಿರಾದಾರ, ಅಶೋಕ ಮೂಲಗೆ ಅಲ್ಲದೆ ಬೇರೆ ಬೇರೆ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಮತ್ತಿತರರು ಉಪಸ್ಥಿತರಿದ್ದರು.
ಪ್ರೊ. ರೇವಯ್ಯ ವಸ್ತ್ರದಮಠ ಪ್ರಾರ್ಥಿಸಿದರು, ಡಾ.ಸೀಮಾ ಪಾಟೀಲ ವಂದಿಸಿದರು, ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

11 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

11 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

11 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

11 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420