ಕಲಬುರಗಿ: ಕೊರೋನಾ ಮಹಾ ಮಾರಿ ಸಂದರ್ಭದಲ್ಲಿ ಒಬ್ಬರಿಗೊಬ್ಬರು ನೋಡಡಿರುವ ಅಂತ ಸ್ಥಿತಿ ಇದ್ದಾಗ ಮುಟ್ಟಿಸಿಕೊಳ್ಳದ ಸ್ಥಿತಿ ಇದ್ದಾಗ ವೈದ್ಯರುಗಳು ಜೀವದ ಹಂಗು ತೊರೆದು ಚಿಕಿತ್ಸೆ ನೀಡಿ ಜನತೆಯ ಪ್ರಾಣ ಕಾಪಾಡಿದ್ದಾರೆ ಅವರ ಕಾರ್ಯ ಶ್ಲಾಘನೀಯವಾಗಿದೆ ಅದಕ್ಕಾಗಿ ಅತಿಥಿ ದೇವೋಭವ ತರದಲೆ ವೈದ್ಯರನ್ನು ವೈದ್ಯ ದೇವೋಭವ ಎಂದು ಕರೆಯಲು ಇಚ್ಚಿಸುತ್ತೇನೆ ಎಂದು ಡಾ. ಸಿದ್ರಾಮಪ್ಪ ದಂಗಾಪುರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಯುವ ಘಟಕ ಮತ್ತು ನವ ಕಲ್ಯಾಣ ಕರ್ನಾಟಕ ಫೋಟೋ ಮತ್ತು ವಿಡಿಯೋಗ್ರಾಫರ್ ಅಶೋಷನ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾಜಮುಖಿ ವೈದ್ಯರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಸಮಾಜ ಅಧ್ಯಕ್ಷ ಡಾ. ಸಿದ್ದರಾಮಪ್ಪ ಪಾಟೀಲ್ ದಂಗಾಪುರ ಮಾತನಾಡಿ, ಸಮಾಜಮುಖಿ ವೈದರಗಳನ್ನು ಸನ್ಮಾನ ಮಾಡಿರುವುದು ಸ್ಲಾಘನಿಯ ಎಂದು ಹೇಳಿದರು. ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿದ್ದರಾಮ ಗಡೆದ ಸಿ ಪಿ ಐ ಸ್ಟೇಷನ್ ಬಜಾರ್ ನಾವು ದೇವರನ್ನು ಕಂಡಿಲ್ಲ ನಮ್ಮ ಪ್ರಾಣ ಕಾಪಾಡುವ ವೈದ್ಯರುಗಳೇ ನಮ್ಮ ದೇವರು ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸನ್ಮಾನಿತರ ಪರವಾಗಿ ಹಿರಿಯ ವೈದ್ಯ ಡಾ. ಮೈನಾಳೆ ಸಂತೋಷ ಮಂಗಶೇಟ್ಟಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ ಎಸ್ ಪಾಟೀಲ್ ನರಿಬೋಳ ಅವರು ಪ್ರಾಸ್ತಾವಿಕ ಮಾತನಾಡಿದರು. ಡಾ. ಅಂಬರೀಶ್ ಬಿರಾದಾರ  ಡಾ. ಅವಿನಾಶ್ ಅಲಶೆಟ್ಟಿ ಡಾ. ಸಂತೋಷ್ ಮಂಗಶೇಟ್ಟಿ ಡಾ. ರವಿ ರಾಯಾರಾಂ  ಡಾ. ನಾಗರಾಜ್ ಯಾದವ್ ಡಾ. ರೂಪಾವಿನಯ್ ಪಾಟೀಲ್ ಡಾ. ದಯಾನಂದ ರೆಡ್ಡಿ ಮಲ್ಲಾಬಾದಿ ಡಾ. ಮೈನಾಳೆ ಡಾ. ನಿರ್ಮಲ ಹಿರೇಮಠ  ಡಾ. ಸಂಜನಾ ಪಾಟೀಲ್ ಡಾ. ರೂಪಾ ಮಂದ ಕನಹಳ್ಳಿ ಅವರುಗಳನ್ನು ಸನ್ಮಾನಿಸಿ ಶುಭ ಕೋರಲಾಯಿತು.

ಸುನಿಲ್ ಚೌಹಾನ್ ಅರಣ್ಯ ಅಧಿಕಾರಿಗಳು ಚಂದ್ರಶೇಖರ ಹಿರೇಮಠ ಹುಲ್ಲುರ ಮುಖ್ಯ ಅತಿಥಿಗಳಾಗಿದ್ದರು   ಅಧ್ಯಕ್ಷತೆಯನ್ನು ಮಹಾಸಭೆ ನಗರಾಧ್ಯಕ್ಷರ ಉದಯ ಪಾಟೀಲ್ ವಹಿಸಿದ್ದರು ಫೋಟೋಗ್ರಾಫರ್ಸ್ ಅಸೋಸಿಯನ್ ಅಧ್ಯಕ್ಷ ಆನಂದ್ ನರೋಣ ಉಪಸ್ಥಿತರಿದ್ದರು. ಮಾಹಸದೆ ಕಾರ್ಯದರ್ಶಿ ಶರಣು ಅವಂತಿ ವಂದಿಸಿದರು. ಡಾ. ರಾಜಶೇಖರ್ ಬಂಡೆ ದೀಪ ಕ್ ಬಬ್ಲಾದ  ಮಾಲಾ ಕಣ್ಣಿ ಮಾಲಾ ಧಣ್ಣೂರ್ ,ಶರಣು ಡೊಣ್ಣೂರ್ಕರ್, ಶರಣು ಸಾವಳಗಿ, ಸುರೇಶ್ ಕುಮಾರ್ ಕಟ್ಟಿಮನಿ, ವೀರೇಶ್, ರಾಹುಲ್ ಕೋಸ್ಟಿ, ಮುಂತಾದವರು  ಸೇರಿದಂತೆ ಇನ್ನಿತರ ಭಾಗವಹಿಸಿದ್ದರು.

emedialine

Recent Posts

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

3 mins ago

ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಅಸ್ತಿತ್ವಕ್ಕೆ; ಸಿದ್ದರಾಮಯ್ಯ

ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…

9 mins ago

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

11 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420