ಬಿಸಿ ಬಿಸಿ ಸುದ್ದಿ

ಲಿಂಗಾಯತರೆಲ್ಲ ಓದಬೇಕಾದ ಪುಸ್ತಕ: “ಅಪ್ಪನ ನೆನಪುಗಳು”

ಇಂದು ಜುಲೈ 26 2019 ಏಳು ವರ್ಷಗಳ ಹಿಂದೆ, ಇದೆ ದಿವಸ ಅಂದರೆ ಜುಲೈ 26 2012 ರಂದು  ವಿಶ್ವಾರಾಧ್ಯ ಸತ್ಯಂಪೇಟೆ ಅವರ ತಂದೆಯ ಕೊಲೆಯಾದ ದಿನ, ಇಂದು ಅವರು  ಬರೆದ

“ಅಪ್ಪನ ನೆನಪುಗಳು” ಪುಸ್ತಕ ನನ್ನ ಕೈಯಲ್ಲಿ .ಇತ್ತಿತ್ತಲಾಗಿ ಪುಸ್ತಕ ಓದುವದು ನನಗೆ ಉದಾಸಿನ,ಅನೇಕ ಪುಸ್ತಕಗಳನ್ನು ಕೊಳ್ಳುತ್ತೇನೆ. ಸಭೆ ಸಮಾರಂಭಗಳಲ್ಲಿ  ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಅನೇಕ ಬಾರಿ  ಮಧ್ಯದ ಒಂದೆರಡು ಪುಟ ಓದಿ ಪಕ್ಕಕ್ಕೆ ಸರಿಸುತ್ತೇನೆ. ಆದರೆ ಇಂದು ಪುಸ್ತಕವನ್ನು  ನಾನು ೮ ಘಂಟೆ ೧೦ ನಿಮಿಷಕ್ಕೆ ಓದಲು ಕೈಗೆತ್ತಿಕೊಂಡೆ, ೧೬೦ ಪುಟಗಳ ಪುಸ್ತಕದ ಪುಟಗಳು ತಮ್ಮನ್ನು ತಾವೇ ತೆರೆದು ಕೊಳ್ಳುತ್ತಿದ್ದವು. ೧೦ಘಂಟೆ ೧೦ ನಿಮಿಷ ಕ್ಕೆ ಓದು ಮುಗಿಯಿತು, ಕೊನೆಯ ಅಧ್ಯಾಯ ಓದುವಾಗ ಕಣ್ಣಿರ ಹನಿಗಳು ! ಓಡುತ್ತಿರುವ ರೈಲಿನ ಮೊದಲ ದರ್ಜೆಯ ಹವಾ ನಿಯಂತ್ರಿತ ಬೋಗಿಯ  ಮಲಗುವ ಹಾಸಿಗೆಯನ್ನು ಒದ್ದೆ ಮಾಡಿದವು.  ಪುಸ್ತಕ ರಾತ್ರಿ ನಿದ್ದೆ ಗೆಡಿಸಿತು.

೨೦೧೨,ರಾತ್ರಿ ೧೦ ಗಂಟೆಯ ಸಮಯ, ಒಬ್ಬ ಅಸಹಾಯಕ ಯುವಕ  ಕಾಣೆಯಾದ   ತನ್ನ ತಂದೆಯನ್ನು ಕಲಬುರ್ಗಿ ನಗರದ ಗಲ್ಲಿ ಗಲ್ಲಿಗಳಲ್ಲಿ ಹುಡುಕುತ್ತಿದ್ದಾನೆ.ಅವನ ಮನದಲ್ಲಿ  ಬೇಡ ಬೇಡ ವೆಂದರು ತನ್ನ ತಂದೆ ದಾರಿಯ ಹೆಣವಾಗಿರಬಹುದೆ ? ಎಂಬ ದುಗುಡ, ಅರ್ಧ ರಾತ್ರಿಯಾದರು ಸುಳಿವಿಲ್ಲ, ಮೋಬೈಲ್ ಸ್ವಿಚ್ ಆಫ್. ಸಂಬಂಧಿಗಳ ಮನೆಯಲ್ಲಿ ಒಂದೆರಡು ಗಂಟೆ ಸಮಾಲೋಚನೆ.ಕಾಣದ ತಂದೆಯ ಚಿಂತೆ, ನಿದ್ರೆ ದೂರ, ನಸುಕಿನ  ನಾಲ್ಕು ಗಂಟೆಗೆ ಮತ್ತೆ ಮನೆಯವರೆಲ್ಲರಿಂದಲೂ ಹುಡುಕಾಟ ಪ್ರಾರಂಭ. ಕಾಣೆಯಾದ ತಂದೆಯ ಬಗ್ಗೆ ಪೋಲಿಸ್ ಸ್ಟೇಷನ್‌ನಲ್ಲಿ  ಮಗನ ಕಂಪ್ಲೆಂಟ್, ಪೋಲಿಸಪ್ಪ ಅದನ್ನ ನೋಂದಣೆ ಮಾಡುವಾಗ  ಲೇಖಕನ ತಮ್ಮನಿಂದ ದೂರವಾಣೆ ಕರೆ ” ಅಪ್ಪ ಕೊಲೆಯಾಗಿದ್ದಾನೆ ,ಅವನ ಶವ ಅಪ್ಪ ಶರಣ ಬಸಪ್ಪನ  ದೇವಸ್ಥಾನದ ಎದುರು ಚರಂಡಿಯಲ್ಲಿ ಇದೆ, ದೆಹದ ಮೇಲೆ ಬಟ್ಟೆಗಳಿಲ್ಲ”. “ಅಣ್ಣಾ ಬಾ” ಎಂದು ಬಿಕ್ಕಳಿಸುತ್ತಾನೆ.

ಲೇಖಕ,  ಅವನಪ್ಪ  ಜೀವನದಲ್ಲಿ ಎಂದು ಕಾಣದ ದೇವರಿಗೆ ಕೈ ಮುಗಿದಿಲ್ಲ, ಬಸವಣ್ಣನೇ ತಂದೆ ಬಸವಣ್ಣನೇ ತಾಯಿ ಎಂದು ನಂಬಿದ ಬಸವ ಭಕ್ತನಿಗೆ  ಶರಣ ಬಸಪ್ಪ ಎಂಬ ಶರಣ ಇಂದು ವೈದಿಕರ ದೇವರಾಗಿ ತನ್ನ  ತತ್ವಗಳನ್ನು ಸಾರುವ ಜಂಗಮ, ತನ್ನ ಹಿಂಬಾಲಕ ಶರಣನನ್ನು ಶರಣಾಗತಿಗೆ ದೂಡಿದನೇ?. ಅನೇಕ ಬಾರಿ ಶರಣ ಬಸಪ್ಪನ ದೇವಸ್ಥಾನದ ಪೌಳಿಯಲ್ಲಿಯೇ ಸುತ್ತಾಡಿದರೂ  ಅವನ ದರ್ಶನ ಮಾಡದ ವಿಶ್ವಾರಾಧ್ಯ ಹಾಗೂ ಅವನ ತಂದೆಯನ್ನು ತನ್ನದೆ ಕಂಪೌಂಡಿನ ಚರಂಡಿಯಲ್ಲಿ ಬತ್ತಲೆ ಮಲಗಿಸಿ ನಿರ್ದಯಿಯಾಗಿ ಕೊಂದನೇ? !!!  (ಲಿಂಗಣ್ಣ ಸತ್ಯಂಪೇಟೆಯವರ  ಬತ್ತಲೆ ಶವ ಅಂದು ಪತ್ತೆಯಾಯಿತು) ಅಪ್ಪಶರಣ ಬಸಪ್ಪ ತನಗೆ ಕೈ (ಶರಣಾಗದ) ಮುಗಿಯದ  ಒಬ್ಬ ಭಕ್ತನನ್ನು ಈ ರೀತಿಯಾಗಿ ಶಿಕ್ಷಿಸಿದನೆ?ದೇವರೇ ಇಲ್ಲ ಎಂಬುವವನಿಗೆ  ತನ್ನ ಅಸ್ತಿತ್ವನ್ನಲ್ಲದೆ  ತಾನೇಷ್ಟು  ಬಲಶಾಲಿ ಎಂಬುದನ್ನು ತೋರಿಸಿದನೆ ?

೦ ಜಿ.ಬಿ.ಪಾಟೀಲ ಬೆಂಗಳೂರು

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

9 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

11 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

11 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

11 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

11 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420