ಬಿಸಿ ಬಿಸಿ ಸುದ್ದಿ

ಬಾಹ್ಯಾಕಾಶದವರೆಗೂ ಗ್ರಾಫ್ ಸಿದ್ಧಾಂತ ಅನ್ವಯ: ಡಾ. ಮೇಘಾ ಖಂಡೇಲ್ವಾಲ

ಕಲಬುರಗಿ: ಗ್ರಾಫ್ ಸಿದ್ಧಾಂತ ಅನ್ವಯ ಕೇವಲ ಗಣಿತಕ್ಕಷ್ಟೇ ಸೀಮಿತವಾಗಿರದೆ ಎಲ್ಲಾ ವಿಷಯದಲ್ಲಿದೆ. ಯಾವುದೇ ವಿಷಯವನ್ನು ಅತ್ಯಂತ ಸರಳ ಮತ್ತು ವೇಗವಾಗಿ ತಿಳಿದುಕೊಳ್ಳಲು ಗ್ರಾಫ್ಗಳು ಸಹಾಯಕ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಾ ಖಂಡೇಲ್ವಾಲ ಹೇಳಿದರು.

ಕೆಬಿಎನ್ ವಿಶ್ವವಿದ್ಯಾಲಯದ ಗಣಿತ ವಿಭಾಗದಿಂದ ಶನಿವಾರ ಏರ್ಪಡಿಸಲಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಗ್ರಾಫ್ ಸಿದ್ಧಾಂತ, ಗ್ರೂಪ್ ಸಿದ್ಧಾಂತ, ಅಲ್ಗೊರೋತಮ್, ಟೊಪೋಗ್ರಾಫಿಕಲ್, ಕೂಮ್ಯುನಿಟೊರಿಯಲ್ ಗ್ರಾಫ್ ಸಿದ್ಧಾಂತ ಇವುಗಳ ವ್ಯಾಖ್ಯೆ, ಸ್ವರೂಪ ಮತ್ತು ವ್ಯಾಪ್ತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಗ್ರಾಫ್ ಸಿದ್ಧಾಂತ ಎಂಬುದು ಬಹಳ ವ್ಯಾಪಾಕವಾಗಿ ಹರಡಿದೆ. ಗ್ರಾಫ್ ಸಿದ್ಧಾಂತ ಭೌತ ವಿಜ್ಞಾನ, ರಾಸಾಯಶಾಸ್ತ್ರ, ಮನೋವೈಜ್ಞಾನ, ಸಮಾಜಶಾಸ್ತ್ರ, ಸಮೂಹ ಸಂವಹನ, ಮುಂತಾದ ಕ್ಷೇತ್ರಗಳ್ಳಲ್ಲೂ ಅತಿಯಾಗಿ ಬಳಕೆಯಾಗುತ್ತದೆ. ವಿದ್ಯಾರ್ಥಿಗಳು ಸ್ವಂತ ಅಧ್ಯಯನ ನಡೆಸಬೇಕು. ಸಂಶೋಧನ ಮನೋಭಾವನೆ ಇಟ್ಟು ಕೊಳ್ಳಬೇಕು. ನವ ಆವಿಷ್ಕಾರವನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಬಹುದು. ವಿದ್ಯಾರ್ಥಿಗಳು ಹೊಸದನ್ನು ಕಲಿಯುತ್ತಿರಬೇಕು. ಅಂತರ್ಜಾಲ ಬಳಕೆ ಗೊತ್ತಿರಬೇಕು. ಉನ್ನತ ವ್ಯಾಸಂಗದ ವೇಬ್ಸೈಟಗಳಾದ ಯುಜಿಸಿ, ಎಂಎಚ್ ಆರ್ ಡಿ ಗಳನ್ನು ಬ್ರೌಸ್ ಮಾಡುತ್ತಿರಬೇಕು. ತಮಗೆ ದೊರಕುವ ಫೇಲೋಶಿಪ್ ಗಳ ಸದ್ಭಾಳಿಕೆ ಮಾಡಿಕೊಳ್ಳಿ ಎಂದು ನುಡಿದರು.

ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿವಿಯ ಕಲಾ, ಭಾಷಾ, ಮಾನವೀಯ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್, ಡಾ ನಿಶಾತ ಆರೀಫ್ ಹುಸೇನಿ ಮಾತನಾಡುತ್ತ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕ ಹಾಗೆ ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳುತ್ತಿರಬೇಕು. ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜಣೆಗಾಗಿ ಅಲ್ಲˌ ಅಲ್ಲಿಂದ ಮಾಹಿತಿಯನ್ನೂ ಪಡೆಯಬಹುದು. ಶೈಕ್ಷಣಿಕೆವಾಗಿ ಅಭಿವೃದ್ಧಿ ಹೊಂದಲು ಸಾಮಾಜಿಕ ಜಾಲತಾಣ ಅನುಕೂಲ ಕರ. ತಮ್ಮ ಸುತ್ತ ಮುತ್ತಲಿನ ಜಗತ್ತಿನ ಪ್ರಚಲಿತ ವಿದ್ಯಮಾನ ಅವರಿಗೆ ಗೊತ್ತಿರಬೇಕು. ಪಿಎಚ್ಡಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಚಿಂಚೋಳಿ- ದ್ವಿ ಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರ ಸಾವು

ವಿವಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ನಮ್ರತಾ ರಾವುತ, ಡಾ ಹಮೀದ್ ಅಕ್ಬರ್, ಡಾ.ಮೈಮುನ ಸರಡಗಿ, ಡಾ ಅಥರ್ ಮೊಯಿಸ್, ಡಾ. ನಗ್ಮಾ, ಡಾ. ಸುನಿಲ್, ಡಾ.ಜಹಾರಾನ, ಡಾ.ಅತಿಯಾ ಸುಲ್ತಾನ, ಡಾ.ಜಾವೆದ್ ಅಕ್ತರ್, ಡಾ. ಸೀಮಾ, ಸನಾ ಇಜಾಜ್, ಡಾ ಫಿರ್ದೋಸ್, ಡಾ ನಾಝಿಯಾ, ಪ್ರಿಯಾಂಕಾ, ಟೆಚ್ನಿಷಿಯನ್ ಸಂಗೀತ ಮತ್ತು ಗಣಿತ ವಿಭಾಗದ ವಿದ್ಯಾರ್ಥಿಗಳಿದ್ದರು.

ಈ ಕಾರ್ಯಕ್ರಮವನ್ನು ಗಣಿತ ವಿಭಾಗದ ವಿದ್ಯಾರ್ಥಿಗಳೆ ನಡೆಸಿಕೊಟ್ಟರು. ಫೋಜಿಯಾ ಘಜಲ ಪ್ರಾರ್ಥನೆ ಪ್ರಸ್ತುತ ಪಡಿಸಿದರೆ, ನಾಹೀದ ಅಕ್ತರ್ ಸ್ವಾಗತಿಸಿದರು. ಅಫೀಫ್ ನಸ್ರಿನ್ ಅತಿಥಿ ಪರಿಚಯಿಸಿದರೆ, ಸಬಾ ನೌಷೀನ್ ವಂದಿಸಿದರು. ಸೈದ ಐಮನ್ ಸುಲ್ತಾನ ನಿರೂಪಿಸಿದರು.

ಇದನ್ನೂ ಓದಿ: ಶಹಬಾದ್ ಕಾಂಗ್ರೆಸ್ ಮುಂಡನ ಕೊಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರಿಂದ ಪೈರಿಂಗ್

emedialine

Recent Posts

ಸಾರ್ವರ್ತಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಸ್ಎಫ್ಐ ರಾಜ್ಯ ಸಮ್ಮೇಳನ

ಹೊಸಪೇಟೆ: ಸಾರ್ವರ್ತಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಸೆಪ್ಟೆಂಬರ್ 17, 18, 19 ರಂದು ಚಿಕ್ಕಬಳ್ಳಾಪುರ ದಲ್ಲಿ ಎಸ್ಎಫ್ಐ ರಾಜ್ಯ ಸಮ್ಮೇಳನ…

18 mins ago

ದೇಶದಲ್ಲಿ ತಂತ್ರಜ್ಞಾನ ಕ್ರಾಂತಿ ಮಾಡಿದ್ದೇ ರಾಜೀವ್ ಗಾಂಧಿ; ಡಿಸಿಎಂ ಡಿ.ಕೆ.ಶಿವಕುಮಾರ.

ಕಲಬುರಗಿ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ತಂತ್ರಜ್ಞಾನ ದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ…

2 hours ago

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ಕಲಬುರಗಿ; ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ,ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಸಿದ ಸಾಮಾಜಿಕ ಹರಿಕಾರರು ದಿವಂಗತ ಡಿ…

2 hours ago

ಚಿತ್ತಾಪುರ; ಕಚೇರಿಯಲ್ಲಿ ನಾರಾಯಣಗುರು ಡಿ.ದೇವರಾಜ ಅರಸು ಜಯಂತಿ ಆಚರಣೆ

ಚಿತ್ತಾಪುರ; ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ…

2 hours ago

ಗೃಹಲಕ್ಷ್ಮೀ ಯೋಜನೆ ಮತ್ತು ಗ್ಯಾರಂಟಿ ಯೋಜನೆಯ ಪೂರ್ಣ ಮಾಹಿತಿ ಪಡೆಯಿರಿ; ಪಾಶಾ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಗೃಹಲಕ್ಷ್ಮಿ ಯೋಜನೆ ಮತ್ತು ಗ್ಯಾರಂಟಿ ಯೋಜನೆ ಕುರಿತು ಪೂರ್ಣ ಮಾಹಿತಿ ಪಡೆಯಬೇಕು ಎಂದು ತಾಪಂ…

2 hours ago

ಸಮಾಜ ಸುಧಾರಣೆಗೆ ಬದುಕು ಸಮರ್ಪಿಸಿದ ನಾರಾಯಣ ಗುರೂಜಿ : ಸಿದ್ದಲಿಂಗ ಶ್ರೀ

ರಾವೂರ: ಕೇರಳ ರಾಜ್ಯದಲ್ಲಿ ತಲೆತ್ತಿದ್ದ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ತಾರತಮ್ಯಗಳ ವಿರುದ್ಧ ಹಿಂದುಳಿದ ಕುಲದಲ್ಲಿ ಜನಿಸಿದ ನಾರಾಯಣ ಗುರುಗಳು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420