ಕಲಬುರಗಿ : ಗ್ರಾಮೀಣ ಭಾಗದ ವೃತ್ತಿ ರಂಗ ಮಾದರಿಯ ಹವ್ಯಾಸಿ ನಾಟಕಗಳನ್ನು ಆಡುವ ಮೂಲಕ ಅನೇಕ ಕಲಾವಿದರಿಗೆ ಅನುಕೂಲ ಕಲ್ಪಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ ಎಂದು ಹಿರಿಯ ರಂಗಕಲಾವಿದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಹೇಳಿದರು.
ರಂಗಾಯಣ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿ ತಮ್ಮ ರಂಗ ಅನುಭವಗಳನ್ನು ಹಂಚಿಕೊಂಡ ಅವರು, ಬಿಬ್ಬಳ್ಳಿ ಗ್ರಾಮದ ಒಬ್ಬ ಕಡುಬಡವ ವ್ಯಕಿಯಾಗಿದ್ದ ಬುಗ್ಗಪ್ಪ ಎಂಬುವವರನ್ನು ನಾಟಕದ ಮಾಸ್ಟರ್ ಮಾಡಲು ಪ್ರಯತ್ನ ಮಾಡುವ ಉದ್ದೇಶದಿಂದ ರಂಗಭೂಮಿಗೆ ಬಂದ ನಾನು ಈ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಅನೇಕ ನಾಟಕಗಳನ್ನು ಆಡಿದೆ, ಬೇರೆ ನಾಟ್ಯ ಸಂಘಗಳಿಗೆ ಆಡಿಸಿದೆ ಎಂದು ವಿವರಿಸಿ, ಹಲವು ನಾಟಕಗಳ ದೃಶ್ಯಗಳ ತಮ್ಮ ಪಾತ್ರಗಳ ಸಂಭಾಷಣೆ ಹೇಳಿ ರಂಜಿಸಿದರು.
ಸೇಡಂನ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ ಕಲಾವಿದರ ರಂಗಾನುಭವಗಳನ್ನು ಕೇಳುವ ಮತ್ತು ದಾಖಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಈಗಾಗಲೇ ರಂಗಭೂಮಿಯ ವಿವಿಧ ಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಆಹ್ವಾನಿಸಿ ರಂಗಾಂತರಾಳ ಹೇಳಿಸಲಾಗಿದೆ. ಇದು ಐದನೆಯ ಕಾರ್ಯಕ್ರಮ ಆಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ್, ಸೇಡಂ ತಾಲೂಕಿನ ಹಿರಿಯ ರಂಗ ನಿರ್ದೇಶಕರಾದ ಶರಣಪ್ಪ ಮಾಸ್ಟರ್ ಹೂಗಾರ, ಸೂರ್ಯಕಾಂತ ಹಂಗನಳ್ಳಿ, ಬುಗ್ಗಪ್ಪ ಮಾಸ್ಟರ್, ಡಾ.ಬಿರಾದಾರ ಶ್ರೀಶೈಲ, ಜಗನ್ನಾಥ ತರನಳ್ಳಿ, ಸುಲೋಚನಾ ಸ್ವಾಮಿ, ಭಾಗ್ಯಶ್ರೀ, ಗಿರಿಮಲ್ಲ ಭಂಟನಳ್ಳಿ, ಹಣಮಂತ ರಾವ, ವಿಠ್ಠಲ ಭರಮಕರ, ದೇವೇಂದ್ರಪ್ಪ ಮೇಳಕುಂದಿ, ವೀರಯ್ಯಸ್ವಾಮಿ ಮೂಲಿಮನಿ, ಮಹಾದೇವಯ್ಯ ಕವಡಿಮಠ, ಸಿದ್ದಣ್ಣ ಕೋಲಾರ, ಗಂಗಾಧರ ಸಾವಳಗಿ, ಸಂತೋಷ ತೊಟ್ನಳ್ಳಿ, ಅವಿನಾಶ ಬೊರಂಚಿ, ಆದಿತ್ಯ ಜೋಶಿ, ಡಾ.ಸುಜಾತ ಜಂಗಮಶೆಟ್ಟಿ, ಶಂಕ್ರಯ್ಯ ಘಂಟಿ, ಬಿ.ಸಂದೀಪ, ಕಲ್ಯಾಣಿ ಭಜಂತ್ರಿ ಹಾಗೂ ರಂಗಾಯಣ ಕಲಾವಿದರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ನಾಶಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…