ಬಿಸಿ ಬಿಸಿ ಸುದ್ದಿ

ಗಂಗಾಮತ ಸಮುದಾಯದ ಗಂಗಾಮಾತೆಗೆ ಬರಗೂರರಿಂದ ಅವಮಾನ: ಮಲ್ಲಿಕಾರ್ಜುನ ಕೋಡ್ಲಿ ಖಂಡನೆ

ಕಲಬುರಗಿ : ಪ್ರೋ. ಬರಗೂರ ರಾಮಚಂದ್ರಪ್ಪ ಅವರು ತಮ್ಮ ಭರತ ನಗರಿ ಕಾದಂಬರಿಯಲ್ಲಿ ಗಂಗಾಮತಸ್ಥರ ಕುಲದೇವತೆಯಾದ ಗಂಗಾಮಾತೆಯ ಕುರಿತು ಅಶ್ಲೀಲ ಪದ ಬಳಕೆ ಮಾಡಿ ಕೇವಲ ಗಂಗಾ ಮಾತೆಗೆ ಅವಮಾನಿಸಿದ್ದಲ್ಲದೇ ಇಡೀ ಗಂಗಾಮತ ಸಮುದಾಯಕ್ಕೆ ಅಶ್ಲೀಲವಾಗಿ ಬಿಂಬಿಸಿದ್ದಾರೆಂದರೆ ತಪ್ಪಾಗಲಾರದು. ಈ ಕುರಿತು ಸರ್ಕಾರ ಕಾದಂಬರಿಯನ್ನು ಮುಟ್ಟುಗೋಲು ಹಾಕಬೇಕೆಂದು ಕೋಲಿ ಸಮಾಜ ಯುವ ಮುಖಂಡ ಮಲ್ಲಿಕಾರ್ಜುನ ಕೋಡ್ಲಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರೋ. ಬರಗೂರು ರಾಮಚಂದ್ರಪ್ಪ ಭರತ ನಗರಿ ಕಾದಂಬರಿಯ ಪುಟ ಸಂ: ೫೬ ಹಾಗೂ ೫೭ ರಲ್ಲಿ ಗಂಗಾಮಾತೆಯನ್ನು ಅತ್ಯಂತ ಕೀಳು ಹಾಗೂ ಅಶ್ಲೀಲ ಪಗಳನ್ನು ಬಳಕೆ ಮಾಡಿ ಬರೆದಿದ್ದಾರೆ, ಗಂಗಾ ಮಾತೆಯ ಜನಾಂಗದವರಿಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ, ಗಂಗಾ ಸ್ನಾನವಿಲ್ಲದೇ ಯಾವುದೇ ದೇವರ ದರ್ಶನಕ್ಕೆ ಅವಕಾಶವಿಲ್ಲ ಇಂತಹ ಮಹತ್ವ ಹಾಗೂ ಪವಿತ್ರತೆ ಹೊಂದಿರುವ ಗಂಗಾ ಮಾತೆಯನ್ನು ಅತ್ಯಂತ ಕೀಳು ಮಟ್ಟದ ಪದಗಳಿಂದ ಅವಮಾನಿಸಲಾಗಿದೆ, ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾದಂಬರಿ ಮುದ್ರಣ ಮಾಡಿದೆ, ಅಲ್ಲದೇ ಗಂಗಾ ಮತದ ಸಂಸ್ಕೃತದ ಹಿನ್ನೆಲಯನ್ನು ಪರಿಶೀಲಿಸಿದರೆ ಈ ಜನಾಂಗ ಮೂಲತಃ ಶಿವಬ, ವಂಶದವರೆಂಬ ಖಚಿತಗೊಳ್ಳುತ್ತದೆ, ಬರಗೂರರವರು ಜನಗಣಮನದಲ್ಲಿ ನಮ್ಮ ಕುಲ ದೇವತೆ ಗಂಗಾಮಾತೆಯ ಬಗ್ಗೆ ಅವರ ಕಾದಂಬರಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವುದು ಖಂಡನಾರ್ಹವಾಗಿದೆ.

ಕೂಡಲೇ ಸದರಿ ಭರತನ ನಗರಿ ಕಾದಂಬರಿಯನ್ನು ಮುಟ್ಟುಗೋಲು ಹಾಕಿ ಸದರಿ ಬರಗೂರು ರಾಮಚಂದ್ರಪ್ಪ ಇವರಿಗೆ ಸರಕಾರದಿಂದ ನೀಡಲಾದ ಎಲ್ಲಾ ಪುರಸ್ಕಾರಗಳನ್ನು ತಕ್ಷಣವೇ ಹಿಂಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು.

ಏಕೆಂದರೆ ಸದರಿ ಬರಗೂರರವರ ಕಾದಂಬರಿಯ ಗಂಗಾಮಾತೆಯ ಅವಮಾನದ ಪದಗಳಿಂದ ಸಂಪೂರ್ಣ ಗಂಗಾಮತ ಸಮುದಾಯದ ಜನರ ಮನಸ್ಸಿಗೆ ತುಂಬಾ ಘಾಸಿಯಾಗಿದೆ, ನಮ್ಮ ಗಂಗಾಮತ ಸಮುದಾಯದಲ್ಲಿ ಕರ್ನಾಟಕದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಒಟ್ಟಾಗಿ ೩೭ ಉಪಜಾತಿಗಳದ್ದು ಅದರಲ್ಲಿ ಗಂಗೆ ಮಕ್ಕಳು, ಗಂಗಾಕುಲ, ಗಂಗಾಮತ, ಗಂಗಾಮತಸ್ಥ, ಗಂಗಾಪುತ್ರ, ಗೌರಿಪುತ್ರ ಎಂದು ಇರುತ್ತವೆ, ಬರಗೂರು ರವರು ತಮ್ಮ ಕಾದಂಬರಿಯನ್ನು ಬರೆಯುವ ಭರದಲ್ಲಿ ಈ ಸತ್ಯವನ್ನು ಅರಿಯದೇ ಬರಗೂರರವರು ಈ ರೀತಿ ಗಂಗಾಮತ ಸಮುದಾಯದವರ ಮನಸ್ಸಿಗೆ ಉದ್ದೇಶಪೂರ್ವಕವಾಗಿ ಘಾಸಿ ಮಾಡಿದ್ದಾರೆ, ಕಾರಣ ಕೂಡಲೇ ಸದರಿಯವರ ವಿರುದ್ಧ ದೂರು ದಾಖಲಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋಲಿ ಸಮಾಜ ಯುವ ಮುಖಂಡ ಮಲ್ಲಿಕಾರ್ಜುನ ಕೋಡ್ಲಿ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

6 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

6 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

8 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

8 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

8 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

9 hours ago