ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ರಾಜಸ್ತಾನದ ಶಿಕ್ಷಕ ದಲಿತ ಮಗುವನ್ನು ಕೊಂದ ಅಮಾನುಷ ಘಟನೆತನ್ನು ಖಂಡಿಸಿ ಕವಿನುಡಿ- ತಾಯ್ನುಡಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ರಾಜಸ್ತಾನದ ಶಾಲೆಯಲ್ಲಿ ಬಾಯಾರಿದ ಕೂಸು ಮಡಿಕೆಯನ್ನು ಮುಟ್ಟಿ ನೀರು ಕುಡಿದದ್ದಕ್ಕೆ ಮಗುವನ್ನು ಅಮಾನುಷವಾಗಿ ಥಳಿಸಿ ಮಗುವಿನ ಸಾವಿಗೆ ಕಾರಣವಾದ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಯುವ ಕವಿಗಳು ಕವಿತೆಯನ್ನು ಓದುವ ಮೂಲಕ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸತೀಶ ಕಾಂಬ್ಳೆ ಇಂತಹ ಅಮಾನುಷ ಘಟನೆಗಳಿಗೆ ಈ ದೇಶದಲ್ಲಿ ಬೀಡು ಬಿಟ್ಟಿರುವ ಜಾತಿಯತೆ ಕ್ರೌರ್ಯ ಮತ್ತು ಸಜ್ಜನರ ಮೌನ, ಸಂವಿಧಾನದ ಫಲಾನುಭವಿಗಳಾದ ಎಲ್ಲರೂ ಕಾರಣ. ನಮ್ಮ ಜವಾಬ್ದಾರಿ ಮರೆತು, ಮೀಸಲಾತಿಯ ಸುಖ ಉಂಡು ಕುರ್ಚಿ ಹಿಡಿದ ರಾಜಕೀಯ ಪ್ರತಿನಿಧಿಗಳು ತಮ್ಮ ಪದವಿಗೆ ರಾಜೀನಾಮೆ ಕೊಡಬೇಕು ಎಂದು ಮಾತನಾಡಿದರು.
ಪಂಡಿತ ಮುದಗುಣಕಿ ಮಾತನಾಡುತ್ತ ರಾಜಸ್ತಾನ, ಬಿಹಾರ, ಗುಜರಾತ್ ದಂತ ರಾಜ್ಯಗಳಲ್ಲಿ ದಲಿತ, ಮಹಿಳೆಯರ ಸರಳಿ ಅತ್ಯಾಚಾರ ಸಾವು ನಡೆಯುತ್ತಿದ್ದರೂ ಕಣ್ಣ ಮುಂಚಿ ಕುಂತ ಸರ್ಕಾರ ಎಚ್ಚರಗೊಂಡು ಕೂಡ ಇಂತಹ ಘಟನೆಗಳು ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕು. ಅಸ್ಪ್ರಶ್ಯತೆ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಇಂತಹ ಸರಣಿ ಮಾರಣಹೋಮ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳದ ರಾಜಸ್ತಾನದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕವಿಗಳು ಕವಿತೆ ವಾಚನ ಮಾಡಿದರು. ಭವಾನಿಪ್ರಸಾದ್ ಶಿವಕೇರಿ, ಅಕ್ಷತಾ, ಶ್ರೀದೇವಿ, ಪಿ.ನಂದಕುಮಾರ ಕೇಂದ್ರಿಯ ವಿಶ್ವವಿದ್ಯಾಲಯ, ರಮೇಶ ಕೇಂದ್ರೀಯ ವಿಶ್ವವಿದ್ಯಾಲಯ, ಕರಿಲಿಂಗ್ ನಾಟೇಕರ್ ಕೇಂದ್ರಿಯ ವಿಶ್ವವಿದ್ಯಾಲಯ, ದಿಲೀಪ್ ಕಾಯಂಕರ್, ರವಿ ಕೊಳ್ಕುರ್ ವಾಡಿ ಕವಿತೆ ವಾಚಿಸಿದರು.
ರಮೇಶ ರಾಗಿ, ರಕ್ಷಿತಾ, ಸೋಮಶೇಖರ್, ರಾಹುಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿರು. ಅಶ್ವಿನಿ ಮದನಕರ ನಿರೂಪಿಸಿದರು.
ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…
ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ…
ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು. ಇಂದು ಅವರು ಕರ್ನಾಟಕ…
ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ…
ಆಳಂದ; ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗಳಿಗೆ ಮಂಜೂರಿಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಬೆಂಬಲಿತ…
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ…