ಬಿಸಿ ಬಿಸಿ ಸುದ್ದಿ

ಛಾಯಾ ಚಿತ್ರಗ್ರಾಹಕರ ಬೇಡಿಕೆ ಶಾಸಕರಿಗೆ ತಿಳಿಸುವೆವು; ತಾತಾ

ಸುರಪುರ: ನಗರದ ಮಹೇಶ್ವರಿ ಮಂಗಲ ಭವನದಲ್ಲಿ ಸುರಪುರ ತಾಲೂಕು ಛಾಯಾ ಚಿತ್ರಗ್ರಾಹಕರ ಸಂಘದ ವತಿಯಿಂದ 183ನೇ ವಿಶ್ವ ಛಾಯಾ ಚಿತ್ರಗ್ರಾಹಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶೀವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಾ ಹನುಮಪ್ಪ ನಾಯಕ (ತಾತಾ) ಮಾತನಾಡಿ,ಇಂದು ಮೊಬೈಲ್‍ಗಳ ಭರಾಟೆಯಿಂದಾಗಿ ಛಾಯಾ ಚಿತ್ರಗ್ರಾಹಕ ರಂಗ ಸಮಕಷ್ಟದಲ್ಲಿದೆ,ಅಲ್ಲದೆ ಕೈಯಲ್ಲಿ ಮೊಬೈಲ್ ಇರುವ ಎಲ್ಲರು ಛಾಯಾ ಚಿತ್ರಗ್ರಾಹಕರು ಎನ್ನುವಂತಾಗಿದೆ.ಆದರೆ ನುರಾರು ವರ್ಷಗಳಿಂದ ಈ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ತಮ್ಮೆಲ್ಲರ ಸೇವೆ ಅಮೋಘವಾಗಿದೆ ಎಂದರು.ಅಲ್ಲದೆ ತಾವುಗಳು ಮನವಿ ಮಾಡಿಕೊಂಡಂತೆ ನಗರದಲ್ಲಿ ಛಾಯಾ ಚಿತ್ರಗ್ರಾಹಕರ ಭವನ ನಿರ್ಮಾಣದ ಮನವಿಯನ್ನು ಶಾಸಕರಿಗೆ ತಿಳಿಸಲಾಗುವುದು ಎಂದರು.ಅಲ್ಲದೆ ಇಲ್ಲಿ ಶಾಸಕರು ಭವನ ನಿರ್ಮಿಸಿಕೊಡುವ ಭರವಸೆ ಇದೆ,ಆದರೆ ಅದಕ್ಕಿಂತ ಮೊದಲು ಜಿಲ್ಲೆಯಲ್ಲಿ ಮೊದಲು ಭವನ ಆಗಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಮಾತನಾಡಿ, ನೂರಾರು ವರ್ಷಗಳ ಕಾಲ ನೆನಪಿಡುವಂತ ಚಿತ್ರಗಳನ್ನು ತೆಗೆಯುವ ಛಾಯಾಗ್ರಾಹಕರ ಕಾರ್ಯ ಶ್ರೇಷ್ಠವಾದದು. ಅವರು ತೆಗೆಯುವಂತ ಚಿತ್ರಗಳನ್ನು ಸಾಮಾನ್ಯರಿಂದ ಕ್ಲಿಕ್ಕಿಸಲು ಸಾಧ್ಯವಿಲ್ಲ. ಛಾಯಾಗ್ರಾಹಕರು ತಮ್ಮ ಹಕ್ಕುಗಳನ್ನು ಕಾನೂನಾತ್ಮಕವಾಗಿ ಪಡೆಯಲು ಅರ್ಹರು. ಅದರಂತೆ ಛಾಯಾಗ್ರಾಹಕರಿಗೆ ಭವನದ ಅವಶ್ಯಕತೆಯಿದೆ ಎಂಬುದಾಗಿ ಹೇಳುತ್ತಿದ್ದಾರೆ. ಅದನ್ನು ಒದಗಿಸಿಕೊಡುವಂತ ಕೆಲಸ ಜನಪ್ರತಿನಿಧಿಗಳು ಮಾಡಬೇಕು ಎಂದರು.ನಂತರ ಜಿಲ್ಲಾಉಪಾಧ್ಯಕ್ಷ ತಾಯಪ್ಪ ಬೊಮ್ಮನ ಮಾತನಾಡಿ ನಗರದಲ್ಲು ಛಾಯಾ ಚಿತ್ರಗ್ರಾಹಕರ ಭವನ ನಿರ್ಮಾಣಕ್ಕೆ ಮನವಿ ಮಾಡಿದರು.

ಸಹಾಯ: ಖಾಸ್ಗತೇಶ್ವರ ನಾಟ್ಯ ಸಂಘದ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶಿಸಿದರು. ಮಕ್ಕಳ ನೃತ್ಯ ಮೆಚ್ಚಿ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ ಹಾಗೂ ರಾಜಾ ಹನುಮಪ್ಪ ನಾಯಕ (ತಾತಾ) ಧನ ಸಹಾಯ ಮಾಡಿದರು.ಅಲ್ಲದೆ ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ತಾಲೂಕುಮಟ್ಟದ ಉತ್ತಮ ತಾಲೂಕು ವೈದ್ಯಾಧಿಕಾರಿ ಪ್ರಶಸ್ತಿ ಪಡೆದ ಡಾ. ರಾಜಾ ವೆಂಕಪ್ಪ ನಾಯಕ ಅವರನ್ನು ಸನ್ಮಾನಿಸಲಾಯಿತು.

ಮುಖಂಡ ಶಂಕರ ನಾಯಕ, ಪಿಎಸ್‍ಐ ಕೃಷ್ಣಾ ಸುಬೇದಾರ, ಛಾಯಾಚಿತ್ರ ಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜಯ್ಯ ಸ್ವಾಮಿ,ತಾಲೂಕು ಅಧ್ಯಕ್ಷ ನಾಗರಾಜ ಅಲದರ್ತಿ, ಸೋಮನಾಥ ಪಾಲೇಪುರೆ, ರಾಹುಲ್ ಗಣಪೂರಕರ್, ಚಂದ್ರಶೇಖರ ಸಿ, ಶ್ರೀನಿವಾಸ ದುರ್ಗಮ, ವೀರೇಶ ಹೂಗಾರ, ಅಮರೇಶ ಕುಂಬಾರ, ಮುರಳಿ ಅಂಬುರೆ, ವಿಜಯಕುಮಾರ ದೇವಾಪುರ,ಆನಂದ ಕುಂಬಾರ ಸೇರಿದಂತೆ ಸುರಪುರ,ಹುಣಸಗಿ,ಶಹಾಪುರ,ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಅನೇಕ ಜನ ಛಾಯಾ ಚಿತ್ರಗ್ರಾಹಕರು ಸೇರಿ ಅನೇಕರಿದ್ದರು.ಪ್ರಕಾಶ ಅಲಬನೂರ ನಿರೂಪಿಸಿದರು,ಘನ ಶಾಮ ಪಾಣಿಭಾತೆ ಸ್ವಾಗತಿಸಿ ವಂದಿಸಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

38 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

41 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

44 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago