ಅಂಕಣ ಬರಹ

“ಈ ಕರಿಯ ಬೆನ್ನಲಿ ” “ಈ ಕರಿಯ ಬೆನ್ನಲಿ “

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ಕಲ್ಬುರ್ಗಿ ರಂಗಾಯಣದಲ್ಲಿ ನಾಟಕೋತ್ಸವ ಕಾರ್ಯಕ್ರಮ ಜರುಗಿದ್ದವು, ಅದರಲ್ಲಿ ನಾನು ನೋಡಿದ ನಾಟಕ “ಈ ಕರಿಯ ಬೆನ್ನಲಿ”, ಎನ್ಕೆ ಹನುಮಂತಯ್ಯ ಅವರ “ಮೌಂಸದಂಗಡಿಯ ನವಿಲು” ಕವನ ಸಂಕಲನದ ಆಯ್ದ ಕವಿತೆಗಳು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ್ದು ಸಾಗರ ಇಟೇಕರ್ ಅವರು, ಈ ನಾಟಕದ ನಿರ್ದೇಶನ ಮಾಡಿದವರು ಪ್ರವೀಣ ಕುಮಾರ್ ಅವರು ನಾಟಕ ಅಂದರೆ ನಾವು ತಿಳಿದ ಹಾಗೆ ಕತೆಗಳನ್ನು ಆಧರಿಸಿ, ಕಾದಂಬರಿ, ಇಲ್ಲ ಸಂಭಾಷಣೆ ಹೊಂದಿದ್ದ ನಾಟಕಗಳು ಮಾಡುವುದು ಮತ್ತೆ ನಾಟಕ ಮಾಡಿರುವುದು ನಮಗೆಲ್ಲ ತಿಳಿದ ವಿಚಾರ, ಆದರೆ..! “ಈ ಕರಿಯ ಬೆನ್ನಲಿ ” “ಈ ಕರಿಯ ಬೆನ್ನಲಿ “, ಕವಿತೆಗಳನ್ನು ನಾಟಕ ರೂಪದಲ್ಲಿಳಿಸಿದ್ದು ತುಂಬಾ ವಿಭಿನ್ನ ಪ್ರಯೋಗ.

ಇಲ್ಲಿ ಅಭಿನಯ ಮಾಡುವ ವ್ಯಕ್ತಿ ಕವಿತೆಗಳನ್ನು ಹೇಳುತ್ತಾ ಜೀವ ತುಂಬುತ್ತಾ ತನ್ನ ಆಂಗಿಕ ಹಾವಭಾವಗಳಿಂದ ಪ್ರೇಕ್ಷಕರೆದೆಯೊಳಗೆ ಕವಿತೆಯಲ್ಲಿ ಅಡಗಿದ ಆ ಕ್ರೌರ್ಯ, ಹಿಂಸೆ, ಅವಮಾನ, ಸಾವು, ಮೇಲು ಕೀಳು, ಅಸಹಾಯಕತೆ, ಮಹಿಳೆಯ ಆರ್ತನಾದ, ಬಡತನ, ಶೋಷಿತ ಸಮುದಾಯಗಳು ಜೀವನ, ಯಜಮಾನರ ಹಟ್ಟಿಯೋಳಗೆ ಹೇಗೆ ಗೊಬ್ಬರವಾಗಿ, ಅವರ ಹೊಲಗದ್ದೆಗಳಲ್ಲಿ ಹುಲುಸಾಗಿ ಬೆಳೆಯುವ ಬತ್ತಗಳೆ.. ಸಾಕ್ಷಿ..! ಹೀಗೆ. ಆ ಕವಿತೆಯ ಒಡಲ ಕಟ್ಟೆಯೊಡೆದು ಪ್ರೇಕ್ಷಕನು ಚಪ್ಪಾಳೆ ತಟ್ಟಲು ಅಸಹಾಯಕನಾಗುತ್ತಾನೆ, ಆದರು ಚಪ್ಪಾಳೆ ತಟ್ಟಲೆಬೇಕಾಯಿತು ಅವರ ಅಭಿನಯಕ್ಕೆ.

ನಿಶಬ್ಧದವಾದ ವಾತಾವರಣ ತನ್ನಿಂದ ತಾನೇ.. ಕಟ್ಟಿಕೊಂಡಿತು ಏಕಾಂತಕ್ಕೆ ತೆಗೆದುಕೊಂಡಿತು.ಕವಿಯು ವಾಸ್ತವ ಬದುಕಿಗೆ ಕಟ್ಟಿಟ್ಟ ಕಾವ್ಯಕ್ಕೆ ಎಲ್ಲಿಯೂ ಧಕ್ಕೆ ಬರದಂತೆ, ತನ್ನ ಭಾವಬ್ಬರದ ಏರಿಳಿತಗಳ ಧ್ವನಿಯಲ್ಲಿ ಕಾವ್ಯದ ಪ್ರಸ್ತುತಿ, ಪ್ರತಿಯೊಂದು ಕವಿತೆಯು ಪ್ರೇಕ್ಷಕನರಿವಿಗಿಲ್ಲದಂತೆ ಮನಸ್ಸಿನಲ್ಲಿ ವಾಸ್ತವದ ಚಿತ್ರಣಗಳು ಎದುರಾಗಿ ಹೋಗುತ್ತಿದ್ದವು , ಅದರಲ್ಲಿ ಈ ಸಾಲುಗಳು.

“ಹರಿದ ಸೀರೆಯ ತೂರಿ
ನನ್ನ ಪುಟ್ಟ ಕಾಲುಗಳು
ಅವ್ವನ ತೊಡೆಗೆ ತಗುಲಿದಾಗ
ಕುಡಿದು ಸತ್ತ ಅಪ್ಪನ ನೆನೆದು
ಚೆಚ್ಚಿದಳು.. “

ವಿಧವೆ ಹೆಣ್ಣಿನ ಭಾವನೆಗಳು ಕಣ್ಣಿಗೆ ರಾಚುವಂತೆ, ಈ ಸಂಪ್ರದಾಯ ಎಂಬ ಸೊಂಗು ಹಾಕಿದವರ ನಡುವೆ ಇವಳೆಷ್ಟು ಸೊರಗಿ, ಕೊರಗಿ, ಮುದುಡಿ ಹೋಗಿದ್ದಾಳೆ , ಅವಳ ಆಸೆ, ಕನಸುಗಳು ದಿನ ನಿತ್ಯ ಕಣ್ಣಿರು ಹೊಳೆಯಾಗಿ ಹರಿಯುತ್ತವೆ.

ಗೋವು ತಿಂದು ಗೋವಿನಂತಾದವನು, ಈ ಪದ್ಯದ ಪ್ರತಿ ಸಾಲು ಪ್ರೇಕ್ಷಕರನ್ನು ಹುಬ್ಬೇರಿಸಿ ನೋಡುವಂತೆ, ತೋಳ್ಬಲಗಳಲ್ಲಿ ಶಕ್ತಿ ಬಂದಂತೆ ಭಾವಗಳು ಉಬ್ಬಿ ಹಾಗೆ ನೆಲಕ್ಕುರುಳಿದಂತೆ, ಪ್ರತಿಯೊಬ್ಬರ ಮೌನವು ಕಾವೇರಿ. ಉಕ್ಕಿ ಬಂದ ಭಾವ ತುಮುಲಗಳು “ಮನುಷ್ಯರ ತಿಂದು ಮನುಷ್ಯನಾಗಲಾರೆ” ಎಂಬ ಧ್ವನಿಗೆ ಅದುಮಿಟ್ಟಿದ ಕೋಪತಾಪವು ಒಮ್ಮೆಲೇ. ಚಪ್ಪಾಳೆ ತಟ್ಟಿದವು .. ಮೈ ರೋಮಾಂಚನಗೊಂಡಿತು.

ನಿಜಕ್ಕೂ ತುಂಬಾ ಹೊಸ ಪ್ರಯೋಗ ಮತ್ತೆ ಏಕವ್ಯಕ್ತಿ ಅಭಿನಯ ಒಂದು ತಾಸು ಬಿಡುವಿಲ್ಲದೆ ಕವಿತೆ ಹೇಳಿಕೊಂಡು ಅಭಿನಯಿಸುವುದು ಕಷ್ಟಕರ ಹಾಗೆ ಅಭಿನಯದ ಜೊತೆಗೆ ಬೆಳಕಿನ ವಿನ್ಯಾಸ ಕೂಡ ಸಂದರವಾಗಿತ್ತು ಪ್ರತಿ ಬೆಳಕಿನ ಹಿಂದೆ ಒಂದೊಂದು ಕವಿತೆಗಳು ಮಾತಾಡ್ತಿದ್ದವು, ಸಂಗೀತ ಕೂಡ ಚೆನ್ನಾಗಿತ್ತು, ನನಗನ್ನಿಸಿದ್ದು ಸಂಗೀತ ಇನ್ನೊಂದಿಷ್ಟು ಪ್ರಕಾರವಾಗಿ ಬೇರೆ ಬೇರೆ ಶೃತಿ ಲಯದಲ್ಲಿರಬೇಕಿತ್ತು.

ನಮ್ಗಳ ಬದುಕೆ ಒಂದು ಕಾವ್ಯ, ಆ ಕಾವ್ಯಗಳೆ ನಾಟಕ ರೂಪ ಪಡೆಯಿತು , ಅವರ ಪರಿಶ್ರಮ, ಆಯಾಸ ಎಲ್ಲಿಯೂ ಹೋರಹಾಕದೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಕವಿತೆಗಳು ಹೇಳಿ ಮುಗಿಸುತ್ತಾರೆ, ಅವರ ಪರಿಶ್ರಮ ಕಂಡಿದ್ದು ಅವರು ತೊಟ್ಟ ಟೀ ಶರ್ಟ್ ಬೆವರಿಂದ ಒದ್ದೆಯಾಗಿತ್ತು ಮಳೆಯಲ್ಲಿ ನೆನೆದಂತೆ. ನಾಟಕ ಮುಗಿದ ಮೇಲೆ ಪ್ರೇಕ್ಷಕರು ಸಲಹೆ ನೀಡಿದರು , ಅನಿಸಿಕೆ ಅಭಿಪ್ರಾಯ ಸಲಹೆ ಧನಾತ್ಮಕವಾದ ಮನಸ್ಸಿನೊಂದಿಗೆ ಮುಂದಿನ ಅಭಿನಯಕ್ಕೆ ಸಜ್ಜಾಗಿ ಹೊರಡಿದರು.

ಕವಿತೆಗಳು ಲಯಬದ್ಧವಾಗಿ ಹಾಡಿ ರಂಗಭೂಮಿಯಲ್ಲಿ ನರ್ತನೆಯಷ್ಟೆಯಲ್ಲ, ಭಾವಂತರಗಳ ಬಡಿದೆಬ್ಬಿಸುವ, ಸತ್ತ ಸಂಪ್ರದಾಯಗಳನ್ನು ಮಣ್ಣು ಮಾಡಲು, ಮೇಲು ಕೀಳಿನ, ಜಾತಿ , ಮತ, ಪಂಥ, ಎಂದು ಸಾಯಿಸುತ್ತಿರುವ ಮನೋರೊಗಕ್ಕೆ ಔಷಧಿಯು.. ಆಗಬಲ್ಲದು , ಎಲ್ಲವೂ ಅಳಿಸಬಲ್ಲದು ನಾಟಕ.

– ಪೂಜಾ ಸಿಂಗೆ
emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

16 mins ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

22 mins ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

26 mins ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

1 hour ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

4 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

7 hours ago