ಶಹಾಪುರ: ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಹಾ ಮಳೆಗೆ ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ 80 ಅಡಿಗಳ ಎತ್ತರದಿಂದ ಕೃಷ್ಣಾ ನದಿಗೆ ಯುವಕನೊಬ್ಬ ಹಾರಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಬ್ರಿಜ್ ಹತ್ತಿರ ಜರುಗಿದೆ.
ಶಹಾಪುರ ತಾಲ್ಲೂಕಿನ ಹೊಸಕೇರ ಗ್ರಾಮದ ಶರಣಪ್ಪ ಹಯ್ಯಾಳ(35)ಎಂಬ ಯುವಕನೇ ನದಿಗೆ ಹಾರಿರುವ ವ್ಯಕ್ತಿ ಆದರೆ ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.
ನಿನ್ನೆ ಬೆಳಗ್ಗೆ ಹೆಂಡತಿ ಹಾಗೂ ತಾಯಿಯ ಜೊತೆಗೆ ಸುರಪುರ ತಾಲೂಕಿನ ತಿಂಥಣಿಯ ಮೌನೇಶ್ವರ ದರ್ಶನಕ್ಕೆಂದು ತೆರಳಿದಾಗ ಈ ಘಟನೆ ಜರುಗಿದೆ ತಿಂಥಣಿ ಬ್ರಿಜ್ ಹತ್ತಿರ ಬಸ್ಸಿನಿಂದ ಇಳಿಯುತ್ತಿದೆ೦ತೆ ಓಡೋಡಿ ಬಂದು ನದಿಗೆ ಹಾರಿದ್ದಾನೆ ಹಾರುವಾಗ ಹೆಂಡತಿ ಮತ್ತು ತಾಯಿ ಅಲ್ಲೇ ಇದ್ದರು.
ಅಲ್ಲೇ ಇರುವ ಹೆಂಡತಿ ಮತ್ತು ತಾಯಿ ಅಸಹಾಯಕರಾಗಿ ಭಯಭೀತಿಯಿಂದ ಕೂಗತೊಡಗಿದಾಗ ಮೀನುಗಾರರ ಗಮನಕ್ಕೆ ಬಂದಿದೆ ಮೀನುಗಾರರು ಕೂಡಲೇ ಶರಣಪ್ಪನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಶರಣಪ್ಪನನ್ನು ನದಿಯ ದಡಕ್ಕೆ ಸೇರಿಸಿದಾಗ ಅಲ್ಲಿ ನೆರೆದಿದ್ದ ಸಾರ್ವಜನಿಕರು ಯಾಕೆ ನದಿಗೆ ಹಾರಿದ್ದೀಯಾ ನಿನಗೇನು ಬಂದಿದೆಯೇ ಅಂಥ ಸಮಸ್ಯೆ ಎಂದು ಕೇಳಿದಾಗ ನನ್ನನ್ನು ಶ್ರೀ ತಿಂಥಣಿ ಮೌನೇಶ್ವರ ಕರೆದನು ಅದಕ್ಕಾಗಿ ನಾನು ನದಿಗೆ ಜಿಗಿದೆ ಎಂದು ಹೇಳಿದಾಗ ನೆರೆದಿದ್ದ ಜನರ ಮುಖದಲ್ಲಿ ನಗೆ ಬೀರಿತು.
ಆದರೆ ಶರಣಪ್ಪನ ತಾಯಿ ಹೇಳುವುದೇ ಬೇರೆ ಎರಡು ತಿಂಗಳಿನಿಂದ ನನ್ನ ಮಗ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಾಗಿ ಮಾತನಾಡುತ್ತಿದ್ದಾನೆ ನನಗೂ ಏನೂ ತಿಳಿಯದಂತಾಗಿದೆ ಅದಕ್ಕಾಗಿ ನಾವು ದೇವರ ದರ್ಶನಕ್ಕೆಂದು ಬಂದಿದ್ದೆವೆ ಆದರೆ ಇಂಥ ದುರ್ಘಟನೆ ಇಲ್ಲಿ ನಡೆದುಹೋಯಿತು ನಮ್ಮನ್ನು ಶ್ರೀ ತಿಂಥಣಿ ಮೌನೇಶ್ವರನೇ ಕಾಪಾಡಿದ್ದಾನೆ ಎಂದು ಹೇಳಿದಳು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…