ವಾಡಿ: ಭಾರತದಂತಹ ಬಹುಭಾಷಾ ದೇಶದಲ್ಲಿ ಹಿಂದಿ ಹೇರಿಕೆ ಎಂಬುದು ನ್ಯಾಯ ಸಮ್ಮತವಲ್ಲದ ನಿರಂಕುಶ ನಿರ್ಧಾರವಾಗುತ್ತದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ ಆರ್.ಕೆ.ವೀರಭದ್ರಪ್ಪ ಟೀಕಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿರ್ಧಾರವನ್ನು ಖಂಡಿಸಿದ್ದಾರೆ. ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಬಳಸುವ ದುರಹಂಕಾರದ ಘೋಷಣೆ ಮಾಡಿದೆ. ಸಂಸದೀಯ ಸಮಿತಿಯ ಪ್ರಸ್ತಾವನೆ ಗಮನಿಸಿದರೆ ಕಾನೂನು ಪ್ರಕ್ರಿಯೆಗಳನ್ನೂ ಸಹ ಹಿಂದಿಯಲ್ಲೇ ನಡೆಸಬೇಕು ಎನ್ನುತ್ತದೆ. ಇದು ಕಾರ್ಯರೂಪಕ್ಕೆ ಬಂದರೆ, ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ಭಾಷೆಗಳು ಕಡೆಗಣಿಸಲ್ಪಡುತ್ತವೆ. ಆಗ ನಾವು ಹಿಂದಿಯನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಸಂವೇದನಾಶೀಲ ವ್ಯಕ್ತಿಯು ತನ್ನ ಮಾತೃಭಾಷೆಯ ಬಗ್ಗೆ ಬಲವಾದ ಭಾವನೆ ಹೊಂದಿರುತ್ತಾನೆ. ಹಾಗಾಗಿಯೇ ಸ್ವಿಟ್ಜರ್ಲೆಂಡ್ ಮತ್ತು ಕೆನಡಾ ದೇಶಗಳು ಯಾವುದೇ ಒಂದು ರಾಜ್ಯ ಅಥವ ರಾಷ್ಟ್ರೀಯ ಭಾಷೆಯನ್ನು ಹೊಂದಿಲ್ಲ. ಸಂಪರ್ಕ ಭಾಷೆಯಾಗಿ ಮತ್ತು ಐತಿಹಾಸಿಕ ಕಾರಣಗಳಿಗಾಗಿ ಅನೇಕ ದೇಶಗಳಲ್ಲಿ ಇಂಗ್ಲೀಷ್ ಬಳಕೆಯಾಗುತ್ತಿದೆ. ಆದರೆ ವಿಭಿನ್ನ ಭಾಷೆಗಳನ್ನು ಹೊಂದಿರುವ ಭಾರತೀಯರ ಮೇಲೆ ಹಿಂದಿ ಹೇರುವುದು ಸರಿಯಲ್ಲ. ಭಾಷಾ ಅಂದಾಭಿಮಾನವನ್ನು ಹುಟ್ಟುಹಾಕಿ ಜನರನ್ನು ವಿಭಜಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ದೂರಿದ್ದಾರೆ.
ಹಿಂದಿಯೇತರ ಭಾಷಿಕ ರಾಜ್ಯಗಳು ಅಥವ ಪ್ರದೇಶಗಳ ಜನರು ಇದನ್ನು ಹಿಂದಿಯ ಪ್ರಾಬಲ್ಯವನ್ನು ಸ್ಥಾಪಿಸುವ ಜಿಂಗೊಯಿಸ್ಟಿಕ್ ಪ್ರಯತ್ನವಾಗಿ ತೆಗೆದುಕೊಳ್ಳುತ್ತಾರೆ. ಇಚ್ಚೆಯುಳ್ಳವರಿಗೆ ಹಿಂದಿ ಒಂದು ಭಾಷೆಯಾಗಿ ಕಲಿಸುವುದಕ್ಕೆ ಯಾವೂದೇ ತಕರಾರಿಲ್ಲ. ಆದರೆ ಹಿಂದಿಯನ್ನು ಕನ್ನಡ ಒಳಗೊಂಡಂತೆ ಇತರ ಭಾಷೆಗಳ ಮೇಲಿನ ಹೇರಿಕೆಯನ್ನು ಶಿಕ್ಷಣ ಉಳಿಸಿ ಸಮಿತಿ ಒಪ್ಪುವುದಿಲ್ಲ ಎಂದು ಸರ್ಕಾರವನ್ನು ಎಚ್ಚರಿಸಿರುವ ಹೋರಾಟಗಾರ ಆರ್.ಕೆ.ವೀರಭದ್ರಪ್ಪ, ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಮುಂದಾಗಬಾರದು. ನಿರ್ಲಕ್ಷ್ಯ ವಹಿಸಿ ಜನತೆಯ ಮನಸ್ಸಿನ ವಿರುದ್ಧ ನಿರ್ಣಯಕೈಗೊಂಡರೆ ಹೋರಾಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…