ಕಲಬುರಗಿ : ನಗರದ ಜೇವರ್ಗಿ ಕ್ರಾಸ್ ಹತ್ತಿರವಿರುವ ಮಾಲು ಅಪಾಟ್ಮೆರ್ಂಟ್ ನಲ್ಲಿ ಇದೆ 24 ರಂದು ಬೆಳಿಗ್ಗೆ 9 ಗಂಟೆಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ (ಯುಎನ್ಒ) ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಮುಖರಾದ ಮುರುಗೇಂದ್ರ ಚಿಂಚೋಳಿಮಠ ತಿಳಿಸಿದರು.
ನಾವು ವಾಸಿಸುವಂತಹ ಈ ಭೂಮಿಯಲ್ಲಿ ಶಾಂತಿ-ನೆಮ್ಮದಿ ಅಭಿವೃದ್ಧಿ ನೆಲೆಸಬೇಕಾದರೆ ಈಗಿರುವ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಕೆಳಮಟ್ಟದಿಂದ ಹಿಡಿದು ಅಭಿವೃದ್ಧಿಯಾಗಬೇಕಾದರೆ ರಾಜಕಾರಣ ಸುಧಾರಿಸಲು Uಓಔ ಸಂಸ್ಥೆ ಬಲಪಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡನೇ ಮಹಾಯುದ್ಧ ನಡೆದ ಮೇಲೆ ಭೂಮಿಯ ಮೇಲೆ ಇನ್ನೆಂದು ಯುದ್ಧ ನಡೆಯಬಾರದು ಎಂದು 1945 ಅಕ್ಟೊಬರ್ 24 ರಂದು ಯುಎನ್ಒ ಸ್ಥಾಪನೆಯಾಯಿತು. ಆದರೂ ಸಹ ಇಲ್ಲಿಯವರೆಗೆ ಅನೇಕ ರೀತಿಯಲ್ಲಿ ಅವಘಡಗಳು ಸಂಭವಿಸಿವೆ. ರಾಷ್ಟ್ರ ರಾಷ್ಟ್ರಗಳ ಮಧ್ಯೆ ನಡೆಯುವ ಸರಹದ್ದಿನ ಸಮಸ್ಯೆ ನೈಸರ್ಗಿಕ ಸಮಸ್ಯೆ ಮತ್ತು ಜನಾಂಗೀಯ ಸಮಸ್ಯೆಗಳು ಮುಖ್ಯವಾಗಿ ಧಾರ್ಮಿಕ ಭಿನ್ನಾಭಿಪ್ರಾಯ ಭಿನ್ನಾಭಿಪ್ರಾಯ ಮಾತುಕತೆಯಿಂದ ಬಗೆಹರಿಸಬಹುದು ಇಲ್ಲವೇ ಅಂತರಾಷ್ಟ್ರೀಯ ನ್ಯಾಯಾಲಯಗಳನ್ನು ಸ್ಥಾಪಿಸಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ನಮ್ಮನ್ನಾಳುವ ಜನಪ್ರತಿನಿಧಿಗಳಿಂದ ಇತ್ತೀಚಿಗೆ ರಾಜ್ಯದಲ್ಲಿ ಅಶಾಂತಿ ಕೋಮುಗಲಭೆ ನಿರ್ಮಾಣವಾಗುತ್ತಿದೆ ಅದಕ್ಕಾಗಿ ವಿಶ್ವದಾದ್ಯಂತ ಯುಎನ್ಒ ಸ್ಥಾಪನೆಯ ದಿನಾಚರಣೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಭುಲಿಂಗ ಮಹಾಗವಕರ್, ಸಂಗಮೇಶ ಗುಬ್ಬೆವಾಡ, ಸಿದ್ರಾಮಪ್ಪ, ಅಶೋಕ್ ಜವಾಜಿ, ಶಿವಶರಣಪ್ಪ ಸೇರಿದಂತೆ ಇತರಿದ್ದರು.
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…
ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…
ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…
ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…
ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್ ಗಳಾದ, ಬ್ಯಾಂಡ್ ಸೆಟ್ಗಳು ಮತ್ತು…