ಕಲಬುರಗಿ: ಇಲ್ಲಿನ ಬಸವ ನಗರದ ನಿವಾಸಿ ಆಟೋ ಚಾಲಕನ ಮಗಳು ಹನ್ನೇರಡು ವರ್ಷದ ಸಂಜನಾ ಶ್ರೀಮಂತ ವಿದ್ಯಾರ್ಥಿನಿಗೆ ಹೃದಯದಲ್ಲಿ ರಂಧ್ರವಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆಗೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಕಿ ಎಂದು ಶುಭ ಕೋರಿದರು.
ಬೆಂಗಳೂರು ಜಯದೇವ ಹೃದ್ರಾಲಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕಿದ್ದು, ಬಡ ಕುಟುಂಬ ಬೆಂಗಳೂರಿಗೆ ಹೋಗೋದು ಕಷ್ಟವಾಗಿದೆ. ಹೀಗಾಗಿ ಸಂಜನಾಳ ತಂದೆ ಶ್ರೀಮಂತ ಮಾವಿನ ಹಾಗೂ ತಾಯಿ ಅನೀತಾ ಮಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.ವೈದ್ಯರು ಚಿಕಿತ್ಸೆ ತುರ್ತಾಗಿ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡೋದು ಕಷ್ಟದಾಯಕವಾಗಿದೆ. ಪ್ರಯತ್ನ ಮಾಡೋದು ತಮ್ಮಿಚ್ಚೆ ಮುಂದಿನದ್ದು ದೈವಿಚ್ಚೆ ಎಂದಿದ್ದಾರೆ.
ಶಸ್ತ್ರಚಿಕಿತ್ಸೆ ಚಿಕಿತ್ಸೆ ಉಚಿತವಾಗುತ್ತದೆ. ಆದರೆ ಇತರ ಖರ್ಚು ವೆಚ್ಚಗಳು ಬರುತ್ತವೆ. ವಿದ್ಯಾರ್ಥಿನಿ ಸಂಜನಾ ಪ್ರತಿಭಾನ್ವಿತೆ ಹೊಂದಿದ್ದು ಹಾಗೂ ಕುಟುಂಬ ಸಂಕಷ್ಟ ಕಂಡು ವೈಯಕ್ತಿಕ ವಾಗಿ ಸಹಾಯ ಕಲ್ಪಿಸಲಾಗಿದೆ ಎಂದು ಅಪ್ಪುಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಸಹಾಯ ಮಾಡಲಿಚ್ಚಿಸುವರು ಅನಿತಾ ತಂದೆ ಪರಶುರಾಮ ಬ್ಯಾಂಕ್ ಖಾತೆ ನಂ 40342631166 ಎಸ್ ಬಿಐ ಹುಸೇನ್ ಗಾರ್ಡನ್ ಶಾಖೆಯ ಖಾತೆಗೆ ಆರ್ಥಿಕ ಸಹಾಯ ಕಲ್ಪಿಸಬಹುದು ಎಂದು ಕುಟುಂಬದ ವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663934315 ಸಂಪರ್ಕಿಸಬಹುದಾಗಿದೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…