ಆಳಂದ: ತಾಲೂಕಿನಲ್ಲಿ ಈಚೆಗೆ ನಡೆದ ಅಫರಾದ ಕೃತ್ಯ ಹಾಗೂ ಕೊಲೆಯ ಘಟನೆಯನ್ನು ಖಂಡಿಸಿದ ಇಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಇಂಥ ಘಟನೆಯನ್ನು ಮರುಕಳಿಸದಂತೆ ಶೀಘ್ರವೇ ಸಮಾವೇಶ ಕರೆದ ಜನ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆಡಳಿತಕ್ಕೆ ಸಲಹೆ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಶುಕ್ರವಾರ ತಹಸೀಲ್ದಾರ ಯಲ್ಲಪ್ಪ ಸುಬೇದಾರಗೆ ಮನವಿ ಸಲ್ಲಿಸಿ ಅವರ ಜೊತೆ ಚರ್ಚಿಸಿದ ಶ್ರೀಗಳು ಮತ್ತು ಮುಖಂಡರು, ಅಪರಾಧ ಕೃತ್ಯ ಮತ್ತು ಕೊಲೆಯಂತ ಘಟನೆಗಳ ಹತ್ತಿಕಲು ತುರ್ತಾಗಿ ಸಮಾವೇಶ ಕೈಗೊಂಡ ಜನ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಬಾಲಕಿಯ ಮೇಲೆ ನಡೆದ ಘೋರ ಕೃತ್ಯವನ್ನು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿ ಅವರ ಕುಟುಂಬಕ್ಕೆ ಸಹಾಯ ಸಹನುಭೂತಿ ನೀಡುವ ಕರ್ತವ್ಯವನ್ನು ಸರ್ಕಾರ ನಿರ್ವಹಿಸಬೇಕು ಎಂದರು.
ಸಮಾಜದಲ್ಲಿ ಇಂಥ ಕೆಟ್ಟ ಘಟನೆಗಳನ್ನು ಮರುಕಳಿಸದಂತೆ ಜಾಗೃತಿ ಸಮಾವೇಶ ಮಾಡಿಸಲು ಸರ್ಕಾರ ಮತ್ತು ಜನ ಪ್ರತಿನಿಧಿಗಳ ಕರ್ತವ್ಯವಾಗಿದೆ. ಜೊತೆಗೆ ಧರ್ಮಗುರುಗಳ ಸಮಾಜ ಚಿಂತಕರು ಸೇವಕರು, ಶಾಲಾ ಶಿಕ್ಷಕರು, ಜನ ಪ್ರತಿನಿಧಿಗಳು, ಯುವಕ, ಯುವತಿಯರು, ಪಾಲಕರು ಮತ್ತು ಸರ್ಕಾರಿ ನೌಕರರು ಸೇರಿಸಿ ಜಾಗೃತಿ ಸಮಾವೇಶ ನಡೆಸಿ ಕೆಟ್ಟ ಘಟನೆಗಳು ಹತ್ತಿಕ್ಕಲು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ವೇಳೆ ಧುತ್ತರಗಾಂವ, ಉಸ್ತುರಿ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ, ಬೆಳಮಗಿಯ ಧ್ಯಾನಭೂಮಿ ಬುದ್ಧವಿಹಾರದ ಬಂತೇ ಅಮರಜ್ಯೋತಿ, ಶಾಂತಿವನಚರ್ಚ್ ಪಾಧರ ಸಂತೋಷ ಬಾಪು, ಮೌಲಾ ಖಾಲಿದ ರಾಜಾಸಾಹೇಬ, ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಹಿರಿಯ ಮುಖಂಡ ಮಲ್ಲಿನಾಥ ಯಲಶೆಟ್ಟಿ, ಕಿಸಾನಸಭಾ ಮುಖಂಡ ಮೌಲಾ ಮುಲ್ಲಾ, ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ್ ಅರಣೋದಯ, ಎ.ಆರ್.ಬೇಗ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.
ಲಿಖಿತ ಸಲಹೆ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಡೆ ಅನುಸರಿಸಲಾಗುವುದು ಎಂದು ಹೇಳಿದರು.
ವ್ಯಾಪಕ ಖಂಡನೆ: ಅಪ್ರಾಪ್ತ ಮೇಲೆ ಹೀನ ಕೃತ್ಯ ಕೊಲೆ ಘಟನೆಗೆ ನಾಗರಿಕ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಂಥ ಘಟನೆ ಮುರುಕಳಿಸದಂತೆ ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಘಟನೆಗಳ ಆಗ್ರಹ ಮುಂದುವರೆದಿದೆ.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…