ಬದುಕಿನ ಪ್ರತಿಯೊಂದು ಸಮಸ್ಯೆಗಳಿಗೆ ಶರಣರ ವಚನಗಳು ದಾರಿ ದೀಪ

ಶಹಾಬಾದ: ಬದುಕಿನ ಪ್ರತಿಯೊಂದು ಸಮಸ್ಯೆಗಳಿಗೆ ಶರಣರ ವಚನಗಳು ದಾರಿ ದೀಪವಾಗಿವೆ ಎಂದು ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಹೇಳಿದರು.

ಅವರು ರವಿವಾರ ಹಳೆಶಹಾಬಾದನ ಅರುಣ.ಎಸ್.ಜಾಯಿ ಮತ್ತು ಆನಂದ ಜಾಯಿಯವರ ಸ್ವಗೃಹದಲ್ಲಿ ವಚನೋತ್ಸವ ಸಮಿತಿ ಹಳೆ ಶಹಾಬಾದನಿಂದ ಆಯೋಜಿಸಲಾದ 905ನೇ ವಾರದ ವಚನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನ ಜಾತಿ ವ್ಯವಸ್ಥೆಯಿಂದ ಸಮಾಜ ತಲ್ಲಣಗೊಂಡಿದ್ದು, ನಮ್ಮೆಲ್ಲರ ಕಾಯಕಗಳು ಜಾತಿಗಳಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸದ ಸಂಗತಿ ಎಂದರು. ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ಎಂಬ ವಚನ ಅವಲೋಕಿಸಿದರೆ ಜಾತಿ ತನ್ನಿಂದ ತಾನೆ ದೂರ ಹೋಗಬಲ್ಲುದು. ಬಸವಣ್ಣ ಸಂಸಾರದಲ್ಲಿದ್ದು ಪಾರಮಾರ್ಥ ಗೆದ್ದಿದ್ದು, ಸಂಸಾರ ಜಂಜಾಟದಿಂದ ಹೊರಬರಲು ಇದು ಪ್ರೇರಣೆ. ದುಷ್ಟ ಗುಣಗಳನ್ನು ಬಿಟ್ಟು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಶರಣರು ಕಸಗುಡಿಸುವ ಸತ್ಯಕ್ಕ ಸಹಿತ ವಚನಗಳನ್ನು ರಚಿಸಿರುವುದನ್ನು ಗಮನಿಸಿದರೆ ಅದ್ಭುತ ಕ್ರಾಂತಿಯಾಗಿರುವುದು ಗೊತ್ತಾಗುತ್ತದೆ. ನಾವುಗಳು ಬೇರೆಯವರನ್ನು ಅವಲೋಕಿಸುವುದಕ್ಕಿಂತ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಶರಣರ ವಚನಗಳು ಮಾರ್ಗದರ್ಶನ ನೀಡಬಲ್ಲವು ಎಂದರು. ಬಸವಣ್ಣನವರ ವಚನಗಳಲ್ಲಿ ಅಡಕವಾಗಿರುವ ತತ್ವಗಳು ಆಧುನಿಕ ಬದುಕಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಬಸವಣ್ಣನವರು ಪತ್ರಿವಾದಿಸಿದ ತತ್ವ ಸಿದ್ದಾಂತಗಳು ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳಕನ್ನು ಬೀರುವಂತಿವೆ. ಅಸಮಾನತೆಯ ವಿರುದ್ದ ಸಮಾಜದ ಕ್ರಾಂತಿಕಾರಿ ಬದಲಾವಣೆಯಲ್ಲಿ ಬಸವಣ್ಣನವರ ಕೋಡುಗೆ ಅಪಾರ. ಸಮಾಜದಲ್ಲಿ ಜಾತಿ ಪದ್ದತಿ ನಿರ್ಮೂಲ ಮಾಡಿ ಸಾಮಾಜಿಕ ನ್ಯಾಯಕ್ಕೆ ಹೋರಾಡಿ ಇಡಿ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದರು.

ಶಾಂತಪ್ಪ.ಬಿ.ಹಡಪದ ಪ್ರಾಸ್ತಾವಿಕ ನುಡಿದರು, ಕು.ಸೌಮ್ಯ.ಪಾಟೀಲ್ ಮತ್ತು ಕು.ನಾಗರಾಜ ತುಪ್ಪದ ಪ್ರಾರ್ಥಿಸಿದರು, ರಮೇಶ ಮೀರಜಕರ್ ಸ್ವಾಗತಿಸಿದರು, ಭರತ ಪ್ರಬುದ್ಧಕರ್ ವಂದಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷ ಹಂಪಣ್ಣ.ಸಿ.ಪೋನತಕರ್,ಧೂಳಪ್ಪ ಹಡಪದ, ಮಹಾನಂದಿ ಪಾರಾ, ಕಿರಣ ಕುಮಾರ, ಕವಿತಾ ಜಾಯಿ, ನಗರಸಭೆಯ ಮಾಜಿ ಸದಸ್ಯೆ ನೀಲಮ್ಮ ಜಾಯಿ, ಸ್ವಾಗತವನ್ನು ಕು.ನಿಮಿಷಾ ಜಾಯಿ, ಶರಣ ಕುಪ್ಪೆಂದ್ರ ತುಪ್ಪದ, ಕು.ಭೂಮಿಕಾ, ಶ್ಲೋಕಾ, ಸಂಕ್ಕøತಿ, ಶರತ, ಸುಗುತ, ಸುಮಂತ ಇತರರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420