ಕಲಬುರಗಿ: ಇಂಡಿಯನ್ ಅರ್ಥೋಪೆಡಿಕ್ ಅಸೋಸಿಯೇಷನ್ ವತಿಯಿಂದ ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡು ಬರುತ್ತಿರುವ ರಾಷ್ಟ್ರೀಯ ಮೂಳೆ ಮತ್ತು ಕೀಳುಗಳ ದಿನಾಚರಣೆಗೆ ಗುರುವಾರ ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ಕ್ಯಾಂಪ್ ನಲ್ಲಿ ಅದ್ಧೂರಿಯಾಗಿ ತೆರೆ ಕಂಡಿತು.
ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಎಸ್.ಆರ್. ಪಿ.ಕಮಾಂಡೆಂಟ್ ಬಸವರಾಜ ಜಿಳ್ಳೆ, ಆರೋಗ್ಯ ಒಂದಿದ್ದರೆ ಎಲ್ಲ ಭಾಗ್ಯನೂ ನಮ್ಮದೇ ಎಂಬ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ನಾವು ಇಂದು ಊಟಕ್ಕಿಂತ ಔಷಧಿನೇ ಜಾಸ್ತಿ ಸೇವಿಸುತ್ತಿದ್ದೇವೆ. ಹಾಗಾಗಿ, ನಾವು ಮೊದಲು ನಮ್ಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದ ಅವರು, ಗಟ್ಟಿ ದೇಹ ಇಟ್ಟುಕೊಂಡರೆ, ಆರೋಗ್ಯವೂ ಸದೃಢವಾಗಿಟ್ಟುಕೊಳ್ಳಬಹುದೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯನ್ ಅರ್ಥೋಪೆಡಿಕ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಎಸ್.ಬಿ.ಕಾಮರೆಡ್ಡಿ, ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗವೂ ಪ್ರಮುಖವಾಗಿರುತ್ತವೆ. ಅದರಲ್ಲೂ ಮೂಳೆ ಮತ್ತು ಕೀಳುಗಳ ರಕ್ಷಣೆಗೆ ನಾವು ಆದ್ಯತೆ ನೀಡಬೇಕಾಗಿರುವುದು ಇಂದು ಅವಶ್ಯಕವಾಗಿದೆ. ಆರೋಗ್ಯದ ರಕ್ಷಣೆಗೆ ನಾವು ಮುಂದಾದರೆ ಕಡಿಮೆ ಆಗುತ್ತಿರುವ ನಮ್ಮ ಆಯುಷ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಮಕ್ಕಳ ನರಗೋಗ ತಜ್ಞೆ ಹಾಗೂ ಸಂಗಮೇಶ್ಚರ ಆಸ್ಪತ್ರೆಯ ಅಧೀಕ್ಷಕಿ ಡಾ.ಅರುಂಧತಿ ಪಾಟೀಲ ಮಾತನಾಡಿ, ಆರೋಗ್ಯವಂತನಾಗಬೇಕಾದರೆ ಆಹಾರ ಸೇವನೆ ಮಿತವಾಗಿರಬೇಕು, ಇಂದಿನ ಆಡಂಬರದ ಜೀವನ ಶೈಲಿಯಿಂದ ಹೊರಬರಬೇಕು, ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಉತ್ತಮ ಆರೋಗ್ಯಕ್ಕೆ ಈ ಮೂರು ಅಂಶಗಳು ಮುಖ್ಯ ಎಂದು ಹೇಳಿದ ಅವರು, ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಎಂಥ ಆಹಾರವನ್ನು ಸೇವಿಸಬೇಕೆಂಬ ಅನೇಕ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಮೂಳೆ ರೋಗ ತಜ್ಞ ಆನಂದ ಗಾರಂಪಳ್ಳಿ, ಡಾ.ಮಾರ್ಥಂಡ ಕುಲಕರ್ಣಿ, ಡಾ.ಸದಾಶಿವ ಜಿಡಗೆಕರ್, ಅರ್ಥೋಪೆಡಿಕ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಅಮೀತ್ ಪವಾರ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿಕ್ಷಣ ಇಲಾಖೆಯ ಡಾ.ರಾಜಕುಮಾರ ಪಾಟೀಲ, ಪ್ರಮುಖರಾದ ನೀಲಾಂಬಿಕಾ ಚೌಕಿಮಠ, ಸಹಾಯಕ ಕಮಾಂಡೆಂಟಗಳಾದ ಗುರುನಾಥ, ಚನ್ನಬಸವ ಅಮರಾವತಿ, ನಿಸಾರ್ ಅಹ್ಮದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ನಂತರ ಆರೋಗ್ಯ ಕುರಿತಾದ ಹಲವು ವಿಚಾರಗಳ ಬಗ್ಗೆ ಪೊಲೀಸ್ ಅವರೊಂದಿಗೆ ಮುಕ್ತ ಸಂವಾದ ನಡೆಯಿತು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…