ಕಲಬುರಗಿ: ಧ್ಯಾನದ ಪ್ರತಿಫಲನ ತಾಂಕಾ ಕಾವ್ಯ. ಜಪಾನಿ ಕಾವ್ಯ ಪ್ರಕಾರದ ತಾಂಕಾ ಬರಹದ ಭಾಷೆಯಲ್ಲಿ ನವುರು ಮತ್ತು ಸೊಗಸು, ಕಣ್ಣಿಗೆ ಕಟ್ಟುವಂತೆ ಬರೆಯುವ ಡಾ.ನಾಗೇಂದ್ರ ಮಸೂತಿ ಅವರ ಕಾವ್ಯದ ಅಂತಃಶಕ್ತಿ. ಸೃಜನಶೀಲತೆ ಒಳಗೊಂಡ ತಾಂಕಾ ಕಾವ್ಯವನ್ನು ಸಮರ್ಥವಾಗಿ ಕೊಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಡಾ.ನಾಗೇಂದ್ರ ಮಸೂತಿ ಅವರ `ಮುತ್ತಿನ ಮಳೆ’ ತಾಂಕಾ ಸಂಕಲನವನ್ನು ಶನಿವಾರ ಸಂಜೆ ಲೋಕಾರ್ಪಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದ ಅವರು, 31 ಸಿಲೆಬಲ್ (ಉಚ್ಛಾರಾಂಶ) ಹೊಂದಿರುವ ಈ ತಾಂಕಾ ಕಾವ್ಯ, ಪುಟ್ಟ ಪದಗಳು ಹಾಗೂ ಮಾತ್ರೆಗಳ ಲೆಕ್ಕದೊಂದಿಗೆ ಛಂದೋಬದ್ಧವಾಗಿರುತ್ತವೆ. ಭಾವನಾತ್ಮಕವಾಗಿ, ಓದುಗನ ಕಲ್ಪನೆಗೆ ಗರಿಕಟ್ಟುವಂತೆ ಇರುತ್ತವಾದರೆ, ಅನುಭವಜನ್ಯವಾದ, ಖಚಿತವಾದ ಚಿತ್ರಗಳನ್ನು ನೇರವಾಗಿ ಮನದಲ್ಲಿ ಮೂಡಿಸಿ ಓದುಗನನ್ನು ತಾತ್ವಿಕ ಚಿಂತನೆಗೆ ಹಚ್ಚುವಂತಿರುತ್ತವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಪುಸ್ತಕವನ್ನು ಬಿಡುಗಡೆ ಮಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಸಾಹಿತಿಗಳಿಂದ ಸಾಧ್ಯ. ಆಧುನಿಕರಣದ ಕಾಲಘಟ್ಟದಲ್ಲಿ ಮಾನವೀಯತೆಯ ಕೊರತೆಗಳನ್ನು ಕಾಣುತ್ತಿದ್ದೇವೆ. ಪ್ರೀತಿ, ವಿಶ್ವಾಸದಿಂದ ತುಂಬಿರುವ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಚವಾದಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಲೇಖಕ ಡಾ.ನಾಗೇಂದ್ರ ಮಸೂತಿ ಅವರು ಪ್ರಾಸ್ತಾವಿಕ ಮಾತನಾಡಿದರು. ಇಂದುಮತಿ ಮಸೂತಿ, ಡಾ.ಸುಬ್ಬಯ್ಯ ಎಂ.ನೀಲಾ, ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ.ರೇಣುಕಾ ಎಚ್., ಡಾ.ಮುಖೀಮ ಮಿಯ್ಯಾ, ಪ್ರೊ.ಎಸ್.ಎಲ್.ಪಾಟೀಲ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಡಾ. ಜೀವಣಗಿ, ಪ್ರೊ.ವಿಜಯಕುಮಾರ ಪರೂತೆ, ಸಿ.ಎಸ್.ಆನಂದ, ಬಿ.ಎಚ್.ನಿರಗುಡಿ, ವಿಶ್ವನಾಥ ಭಕರೆ, ಡಾ.ಶಿವಶರಣಪ್ಪ ಮೋತಕಪಲ್ಲಿ, ಶಿವಶರಣ ಕೋಡ್ಲಿ ಸೇರಿದಂತೆ ಇತರರು ಇದ್ದರು. ಕವಿತಾ ಮತ್ತು ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿವಗಂಗಾ ಬಿ.ವಂದಿಸಿದರು.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…