ಧರ್ಮದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಬಲ್ಲದು: ಡಾ. ವೀರಸೋಮೇಶ್ವರ ಶಿವಾಚಾರ್ಯರು

ಶಹಾಬಾದ: ಜಗದ್ಗುರು ರೇಣುಕರಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ ಮತ್ತು ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಅವರು ಶುಕ್ರವಾರ ತಾಲೂಕಿನ ತೊನಸನಹಳ್ಳಿ(ಎಸ್)ಗ್ರಾಮದ ಗುರು ಸಂಗಮೇಶ್ವರರ ಸಂಸ್ಥಾನ ಮಠದ ಗೋಪುರದ ಕಳಸಾರೋಹಣ ಮತ್ತು ಮಂಗಲ ಭವನದ ಉದ್ಘಾಟನೆ ನೇರವೇರಿಸಿ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿ ಉಂಟಾಗಬೇಕಾದರೆ ಧರ್ಮದ ಅಡಿಪಾಯ ಅವಶ್ಯಕವಾಗಿ ಬೇಕಾಗಿದೆ. ಇಂದು ಜನರು ಆಧುನಿಕತೆಗೆ ಮಾರುಹೋದ ಹಿನ್ನೆಲೆಯಲ್ಲಿ ಅಶಾಂತಿ, ಅತೃಪ್ತಿ ತಾಂಡವವಾಡುತ್ತಿದೆ. ಜಾತಿ, ರಾಜಕೀಯ ಹಾಗೂ ಹಣದ ಹಿಂದೆ ಬೆನ್ನತ್ತಿದ ಮಾನವನ ಒತ್ತಡದ ಬದುಕಿನಲ್ಲಿ ಅಶಾಂತಿ ಉಂಟಾಗುತ್ತಿದೆ. ಈ ಅಶಾಂತಿ ತೊಲಗಿ ನೆಮ್ಮದಿಯ ಬದುಕನ್ನು ನಿರ್ಮಾಣ ಮಾಡಲು ತೊನಸನಹಳ್ಳಿಯ(ಎಸ್)ನ ಶ್ರೀಗಳಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧರ್ಮ ಉಳಿಸುವ ಕಾರ್ಯಕ್ಕೆ ಅಣಿಯಾಗಿದ್ದಾರೆ ಎಂದರು.

ತೊನಸನಹಳ್ಳಿ ಶ್ರೀ ಮಠದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಧಿಕಾರ, ಅಂತಸ್ತು, ಧನ, ಕನಕ, ವಸ್ತು, ವಾಹನ, ಸಂಪಾದಿಸುವುದೇ ಸಾಧನೆ ಎಂದು ಭಾವಿಸಿದಂತಿದೆ. ಬದುಕಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸದ್ಭಾವನೆ ಪ್ರಾಪ್ತಿಗೆ ಧರ್ಮದ ಪರಿಪಾಲನೆ ಅತ್ಯಗತ್ಯ.ಆ ದೃಷ್ಠಿಯಲ್ಲಿ ರಂಭಾಪುರಿಯ ಭಗವಾತ್ಪದರು ಬಂದು ನಮಗೆಲ್ಲಾ ಧರ್ಮದ ಭೋಧನೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಮನುಷ್ಯನ ಸಂಸಾರ ಬರಿ ದುಃಖಗಳಿಂದ ಕೂಡಿದ್ದು, ಬದುಕಿನಲ್ಲಿ ಸುಖವನ್ನು ಕಾಣಲು ಗುರುವಿನ ಕರುಣೆ ಅವಶ್ಯಕ.ರಂಭಾಪುರಿ ಜಗದ್ಗುರುಗಳು ಹಾಗೂ ತೊನಸನಹಳ್ಳಿ ಶ್ರೀಗಳ ಆಶೀವಾರ್ದದಿಂದ ಶಾಸಕನಾಗಿದ್ದೆನೆ.ಅಲ್ಲದೇ ಗ್ರಾಮದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ.ಅವರ ಸೇವಕನಾಗಿ ಕೆಲಸ ಮಾಡುತ್ತಿದ್ದೆನೆ.ನಿಮ್ಮೆಲ್ಲರ ಋಣ ಎಂದಿಗೂ ತೀರಿಸುವಂತಿಲ್ಲ ಎಂದರು.

ಹೊನ್ನಕಿರಣಗಿಯ ಪೂಜ್ಯರಾದ ಚಂದ್ರಗುಂಡ ಶಿವಾಚಾರ್ಯರು, ದೇವಾಪುರ ದೋರನಳ್ಳಿ ಮಳಖೇಡ್ ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಮುಗಳನಾಗಾವನ ಸಿದ್ದಲಿಂಗ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಟೇಂಗಳಿ, ಹಲಕರ್ಟಿ, ನದಿಸಿನ್ನೂರ, ಯರಗೋಳ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮತ್ತು ಅಣವೀರ ಇಂಗಿನಶೆಟ್ಟಿ, ಭಾಗೀರಥಿ ಗುನ್ನಾಪೂರ ವೇದಿಕೆ ಮೇಲೆ ಇದ್ದರು.
ಬಸವರಾಜ ಮದ್ರಕಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು, ಶಿವಲಿಂಗಯ್ಯ ಶಾಸ್ತ್ರಿಗಳು ನಿರೂಪಿಸಿ, ವಂದಿಸಿದರು.

ಪ್ರಶಸ್ತಿ ಪ್ರಧಾನ: ಮಾತೋಶ್ರೀ ನಿಂಗಮ್ಮ ಇಂಗಿನ್, ಡಾ.ಮಹಾನಂದ ಮೇಳಕುಂದಿ, ಡಾ.ದಯಾನಂದ್ ರೆಡ್ಡಿ ದಿಗ್ಗಾವಿ, ಡಾ.ಸಿದ್ದು ಮರಗೋಳ, ಎಮ್.ಎಸ್. ಪಾಟೀಲ ನರಿಬೋಳ ವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

10 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420