18 ರಂದು ಕೋಲಿ ಕಬ್ಬಲಿಗೆ ಸಮಾಜ ಎಸ್ಟಿ ಸೇರ್ಪಡೆಗಾಗಿ ಬೃಹತ್ ಪ್ರತಿಭಟನೆ

ಸುರಪುರ: ಕೊಲಿ, ಕಬ್ಬಲಿಗ, ಅಂಬಿಗೇರ್, ಬೆಸ್ತ, ಸಮುದಾಯದಿಂದ ಎಸ್.ಟಿ ಸೇರ್ಪಡೆಗಾಗಿ 18 ರಂದು ಯಾದಗಿರಿಯಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರು ಭಾಗವಹಿಸುವಂತೆ ಹಣಮಂತ ಮಡ್ಡಿ ಕರೆ ನೀಡಿದರು.

ನಗರದ ಟೇಲರ್ ಮಂಜಿಲ್ ನ ಆವರಣದಲ್ಲಿ ಸಮಾಜದ ಅನೇಕ ಮುಖಂಡರ ಸಭೆ ನಡೆಸಿ ಮಾತನಾಡಿ, ಕೊಲಿ, ಕಬ್ಬಲಿಗ, ಅಂಬಿಗೇರ್, ಬೆಸ್ತ, ಸಮುದಾಯದಿಂದ ಎಸ್.ಟಿ ಗಾಗಿ ಬೃಹತ್ ಪ್ರತಿಭಟನಾ ಜಾಥಾ ಇದೇ ತಿಂಗಳು 18 ರಂದು ಯಾದಗಿರಿ ನಗರದ ಮೈಲಾಪೂರ್ ಅಗಸಿಯಿಂದ ಗಾಂಧಿ ಚೌಕ್ ,ಕನಕ ಚೌಕ್,ಅಂಬೇಡ್ಕರ್ ಚೌಕ್, ಶಾಸ್ತ್ರೀ ಚೌಕ್, ಸುಭಾಷ್ ಚೌಕ್, ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಸುರಪುರ ತಾಲೂಕು ವತಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರು ಭಾಗವಹಿಸುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸಣ್ಣ ಹಣಮಂತಪ್ಪ ಬಳಿಚಕ್ರ ಮಾಜಿ ತಾ.ಪಂ. ಅಧ್ಯಕ್ಷರು, ಸಿ.ಎಮ್.ಪಟ್ಟೇದಾರ್ ಸಮಾಜದ ಗೌರವ ಅಧ್ಯಕ್ಷರು ಯಾದಗಿರಿ, ಸಾಬಣ್ಣ ಬಾಡಿಯಾಳ ಜಿಲ್ಲಾ ಖಜಾಂಚಿ, ಅಖಿಲ ಕರ್ನಾಟಕ ತಳವಾರ್ ಎಸ್ ಟಿ ಹೋರಾಟ ಸಮಿತಿಯ ಸುರಪುರ ತಾಲೂಕು ಗೌರವ ಅಧ್ಯಕ್ಷ ಹೊನ್ನಪ್ಪ ಎಮ್ ತಳವಾರ್, ತಾಲೂಕು ಅಧ್ಯಕ್ಷ ದೇವಿಂದ್ರಪ್ಪಗೌಡ ಬಿ ಮಾಲಿ ಪಾಟೀಲ್ ದೇವರಗೋನಾಲ, ಪ್ರಧಾನ ಕಾರ್ಯದರ್ಶಿ ತಾಲೂಕು ಖಜಾಂಚಿ ದೇವಿಂದ್ರಪ್ಪ ಮಾಚಗುಂಡಾಳ ಪ್ರಥಮ ದರ್ಜೆ ಗುತ್ತೇದಾರ್, ಮುದ್ನೂರ್, ಕೊಲಿ ಸಮಾಜದ ನಗರ ಘಟಕ ಅಧ್ಯಕ್ಷ ಪಾರಪ್ಪ ಎಲ್ ಗುತ್ತೇದಾರ್, ತಾಲೂಕು ಉಪಾಧ್ಯಕ್ಷ ವೆಂಕಟೇಶ ಚಟ್ನಳ್ಳಿ (ದರ್ಶನ್) ಉಪಾಧ್ಯಕ್ಷ ದೊಡ್ಡಪ್ಪ ಮುದ್ನೂರ್, ಮಾಜಿ ಕೊಲಿ ಸಮಾಜದ ತಾಲೂಕು ಅಧ್ಯಕ್ಷ ಯಂಕಣ್ಷ ಕಟ್ಟಿಮನಿ, ಮಾಜಿ ತಾಲೂಕು ಅಧ್ಯಕ್ಷ ಶಿವಪ್ಪ ಕಟ್ಟಿಮನಿ, ಮಾಜಿ ತಾಲೂಕು ಪಂಚಾಯತ ಸದಸ್ಯ ಮಾನಪ್ಪ ಸೂಗುರ್,ಸಮಾಜದ ಹಿರಿಯ ಮುಖಂಡರಾದ ವಿಶ್ವಾಮಿತ್ರ ಕಟ್ಟಿಮನಿ, ಹರಿಶ್ಚಂದ್ರ ಕಟ್ಟಿಮನಿ, ಮರೆಪ್ಪ ದಾಯಿ,ಮಾನಪ್ಪ ಕವಡಿಮಟ್ಟಿ, ವೆಂಕಟೇಶ ಕವಡಿಮಟ್ಟಿ, ಹಣಮಂತ ಕವಡಿಮಟ್ಟಿ, ಮರೆಪ್ಪ ವೆಂಕಟಾಪೂರ್, ಯಂಕೋಬ ರತ್ತಾಳ, ಶಾಂತಪ್ಪ ನಾಟೇಕಾರ್, ಮಂಜು ಮುದ್ನೂರ್, ಹಣಮಂತ ಯಕ್ತಾಪೂರ್, ಭಾಗೇಶ ಏವೂರ್, ನಗರ ಘಟಕ ಅಧ್ಯಕ್ಷ ಮಲ್ಲು ವಿಷ್ಣು ಸೇನಾ, ಕೆಂಭಾವಿ ಹೋಬಳಿ ಅಧ್ಯಕ್ಷ ಕೃಷ್ಣಾ ಪರಶನಹಳ್ಳಿ, ಪ್ರಶಾಂತ ಬಿರೇದಾರ್ ಜೈನಾಪೂರ್, ಧರ್ಮರಾಜ ಹೆಗ್ಗನದೊಡ್ಡಿ, ಶರಣು ದೇವರಮನಿ, ಸಮಾಜದ ಯುವಕರು ಭಾಗಿಯಾಗಿದ್ದರು.

 

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

2 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

5 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

9 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

10 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

12 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420